SUDDIKSHANA KANNADA NEWS/ DAVANAGERE/ DATE-30-04-2025
ದಾವಣಗೆರೆ: ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಶಂಕರನಹಳ್ಳಿ ಗ್ರಾಮದಲ್ಲಿ ದುಷ್ಕರ್ಮಿಗಳು ಅಡಿಕೆ ಗಿಡಗಳನ್ನು ನಾಶ ಪಡಿಸಿದ್ದಾರೆ.
ತಾಲೂಕಿನ ಬಾಡ ಗ್ರಾಮದ ಸಿರಿ ಆಂಜನೇಯ ಎಂಬುವರು ಶಂಕರನಹಳ್ಳಿ ಗ್ರಾಮದ 2.5 ಎಕರೆ ಜಮೀನಿನಲ್ಲಿ ಫಸಲಿಗೆ ಬಂದಿದ್ದ 1500 ಅಡಿಕೆ ಗಿಡಗಳನ್ನು ಬೆಳೆಯಲಾಗಿತ್ತು. ಆದರೆ ಕಡಿದು ಹಾಕಿರುವುದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ ಎಂದು ಶಾಸಕರ ಬಳಿ ರೈತ ತಮ್ಮ ನೋವು ತೋಡಿಕೊಂಡರು.
ಹದಡಿ ಪೊಲೀಸ್ ಠಾಣೆಯಲ್ಲಿ ತೋಟದ ಮಾಲೀಕ ಸಿರಿ ಆಂಜನೇಯ ಅವರು ದೂರು ನೀಡಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಶಾಸಕ ಬಸವಂತಪ್ಪ ಸೂಚನೆ ನೀಡಿದರು.
ತೋಟಕ್ಕೆ ಮಂಗಳವಾರ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಬಾಡ ರುದ್ರಸ್ವಾಮಿ, ಎಂ.ಡಿ.ಸುರೇಶ್, ಅಣಬೇರು ಬುಡೆನ್ ಸಾಬ್, ಮತ್ತಿತರರು ಇದ್ದರು.