SUDDIKSHANA KANNADA NEWS/ DAVANAGERE/ DATE-07-05-2025
ನವದೆಹಲಿ: ಭಾರತವು ಪಾಕಿಸ್ತಾನದ ಭಯೋತ್ಪಾದಕ ನೆಲೆ ಮೇಲೆ ದಾಳಿ ನಡೆಸಿದ ಭಾರತಕ್ಕೆ ದೊಡ್ಡ ಯಶಸ್ಸು ಸಿಕ್ಕಿದೆ.
ಮೋಸ್ಟ್ ವಾಂಟೆಂಡ್ ಭಯೋತ್ಪಾದಕ ಉಗ್ರ ಮಸೂದ್ ಅಜರ್ ಕುಟುಂಬ ಸರ್ವನಾಶವಾಗಿದೆ. ಮಸೂದ್ ಕುಟುಂಬದ 14 ಮಂದಿ ಬಲಿಯಾಗಿದ್ದಾರೆ. ಮಸೂದ್ ನ ಸಹೋದರ, ಸಹೋದರಿ ಸೇರಿದಂತೆ ಒಟ್ಟು 14 ಮಂದಿ ಹತರಾಗಿದ್ದಾರೆ.
ಇದೊಂದು ಬಿಗ್ ಆಪರೇಷನ್ ಆಗಿದೆ. ಕಂದಹಾರ್ ಜೈಲಿನಿಂದ ಈ ಉಗ್ರನನ್ನು ಬಿಡಿಸಿಕೊಂಡು ಹೋಗಲಾಯಿತು. ಭಯೋತ್ಪಾದಕನ ಕುಟುಂಬವೇ ಫಿನಿಶ್ ಆಗಿದೆ. ಈ ಮೂಲಕ ಭಾರತವು ಹಲವು ದಶಕಗಳಿಂದ ಹುಡುಕಾಟ ನಡೆಸುತ್ತಿದ್ದ ಉಗ್ರ ಮಸೂದ್ ಅಜರ್ ಮಾತ್ರವಲ್ಲ, ಆತನೇ ಕುಟುಂಬವೇ ಮುಗಿದು ಹೋಗಿದೆ.
ಹದಿನಾಲ್ಕು ಮಂದಿ ಕುಟುಂಬಸ್ಥರು ವಾಸ ಮಾಡುತ್ತಿದ್ದರು. ಸಹೋದರರು, ಸಹೋದರಿ, ಮಕ್ಕಳು ಸೇರಿದಂತೆ ಸಂಪೂರ್ಣವಾಗಿ ಇಡೀ ಕುಟುಂಬವೇ ನಾಮಾವೇಶವಾಗಿದೆ. ಭಾರತ ನಡೆಸಿರುವ 9 ದಾಳಿಗಳು ಅವರನ್ನು ಫಿನಿಶ್ ಮಾಡುವ ಕಾರ್ಯಾಚರಣೆ ಆಗಿತ್ತು. ಜೈಷ್ ಎ ಸಂಘಟನೆಯ ಪ್ರಮುಖ ರೂವಾರಿಯಾಗಿದ್ದ ಈತನನ್ನು ಹುಡುಕಾಟ ನಡೆಸಿದ್ದರೂ ಸಿಕ್ಕಿರಲಿಲ್ಲ.