Home ಕ್ರೈಂ ನ್ಯೂಸ್ ರಸ್ತೆ ಸಂಪರ್ಕವಿಲ್ಲದೆ ಎತ್ತಿನ ಬಂಡಿಯಲ್ಲಿ ಗರ್ಭಿಣಿ ಸಾಗಾಟ: ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನನ! ಮುಂದೇನಾಯ್ತು?
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ರಸ್ತೆ ಸಂಪರ್ಕವಿಲ್ಲದೆ ಎತ್ತಿನ ಬಂಡಿಯಲ್ಲಿ ಗರ್ಭಿಣಿ ಸಾಗಾಟ: ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನನ! ಮುಂದೇನಾಯ್ತು?

Share
ರಸ್ತೆ
Share

ಆಸಿಫಾಬಾದ್: ತೆಲಂಗಾಣದ ಕುಮರಂ ಭೀಮ್ ಆಸಿಫಾಬಾದ್ ಜಿಲ್ಲೆಯಲ್ಲಿ ರಸ್ತೆಗಳ ದುಸ್ಥಿತಿ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.

ವಾಂಕಿಡಿ ಮಂಡಲದ ಸಿರ್ಪೆಲ್ಲಿ ಗ್ರಾಮದಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಯೊಬ್ಬರನ್ನು ಕೆಸರು ದಾರಿಯ ಕಾರಣದಿಂದ ಎತ್ತುಗಳ ಬಂಡಿಯಲ್ಲಿ ಆಂಬ್ಯುಲೆನ್ಸ್ ವರೆಗೆ ಕರೆದೊಯ್ದ ಘಟನೆ ವರದಿಯಾಗಿದೆ.

ಘಟನೆಯ ವಿವರ: ಸಿರ್ಪೆಲ್ಲಿ ಗ್ರಾಮದ ಕಲೀಶ್ಮಾ ಎಂಬ ಗರ್ಭಿಣಿಗೆ ಸೆಪ್ಟೆಂಬರ್ 5 ರಂದು ತೀವ್ರ ಹುಟ್ಟುನೋವು ಕಾಣಿಸಿಕೊಂಡಿದೆ. ಕುಟುಂಬಸ್ಥರು ತಕ್ಷಣವೇ 108 ತುರ್ತು ಆಂಬ್ಯುಲೆನ್ಸ್‌ಗೆ ಕರೆ ಮಾಡಿದ್ದಾರೆ. ಆದರೆ, ಸುರಿಯುತ್ತಿರುವ ಮಳೆಯಿಂದಾಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಸಂಪೂರ್ಣವಾಗಿ ಕೆಸರುಮಯವಾಗಿತ್ತು. ಪರಿಣಾಮವಾಗಿ ಆಂಬ್ಯುಲೆನ್ಸ್ ವಾಹನವು ಗ್ರಾಮದವರೆಗೆ ತಲುಪಲಾರದೆ ಅರ್ಧದಾರಿಯಲ್ಲೇ ಇರುವ ಮಾರೇಪಲ್ಲಿ ಎಂಬಲ್ಲಿ ನಿಂತುಕೊಳ್ಳಬೇಕಾಯಿತು.

ಎದ್ದುಗಳ ಬಂಡಿಯಲ್ಲಿ ಸಾಹಸಯಾತ್ರೆ:

ಆಂಬ್ಯುಲೆನ್ಸ್ ಬರುವುದು ಅಸಾಧ್ಯವಾದಾಗ, ಕುಟುಂಬದವರು ಮತ್ತು ಗ್ರಾಮಸ್ಥರು ಧೃತಿಗೆಡದೆ ಎದ್ದುಗಳ ಬಂಡಿಯ ವ್ಯವಸ್ಥೆ ಮಾಡಿದರು. ಗರ್ಭಿಣಿ ಕಲೀಶ್ಮಾ ಅವರನ್ನು ಎತ್ತಿನ ಬಂಡಿಯ ಮೇಲೆ ಕುಳಿತುಕೊಳ್ಳಿಸಿ, ದುರ್ಗಮ ಹಾಗೂ ಕೆಸರು ತುಂಬಿದ ರಸ್ತೆಯಲ್ಲಿ ಸಾಗಿಸಿ ಆಂಬ್ಯುಲೆನ್ಸ್ ನಿಂತಿದ್ದ ಸ್ಥಳಕ್ಕೆ ತಲುಪಿಸಿದರು. ನಂತರ ಅಲ್ಲಿಂದ ಅವರನ್ನು ವಾಕಿಂಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅಲ್ಲಿ ಅವರು ಸುಂದರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆಂದು ವೈದ್ಯರು ತಿಳಿಸಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles