Home ದಾವಣಗೆರೆ ಕರ್ನಾಟಕದ ಶೇ. 70ರಷ್ಟು ವಿದ್ಯುತ್ ಬೇಡಿಕೆ ನವೀಕರಿಸಬಹುದಾದ ಇಂಧನದಿಂದ ಪೂರೈಕೆ: ಸಚಿವ ಕೆ.ಜೆ. ಜಾರ್ಜ್
ದಾವಣಗೆರೆನವದೆಹಲಿಬೆಂಗಳೂರು

ಕರ್ನಾಟಕದ ಶೇ. 70ರಷ್ಟು ವಿದ್ಯುತ್ ಬೇಡಿಕೆ ನವೀಕರಿಸಬಹುದಾದ ಇಂಧನದಿಂದ ಪೂರೈಕೆ: ಸಚಿವ ಕೆ.ಜೆ. ಜಾರ್ಜ್

Share
Share

ಬೆಂಗಳೂರು: ರಾಜ್ಯದ ಒಟ್ಟು ವಿದ್ಯುತ್ ಬೇಡಿಕೆಯ ಸುಮಾರು ಶೇ. 70ರಷ್ಟು ಭಾಗವನ್ನು ಸೌರ, ಗಾಳಿ ಮತ್ತು ಜಲವಿದ್ಯುತ್‌ ಸೇರಿದಂತೆ ನವೀಕರಿಸಬಹುದಾದ ಹಸಿರು ಇಂಧನ ಮೂಲಗಳ ಮೂಲಕ ಯಶಸ್ವಿಯಾಗಿ ಪೂರೈಸಲಾಗುತ್ತಿದೆ ಎಂದು ರಾಜ್ಯದ ಇಂಧನ ಸಚಿವ ಕೆ.ಜೆ. ಜಾರ್ಜ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ‘ಭಾರತ್ ನವೀಕರಿಸಬಹುದಾದ ಇಂಧನ ಶೃಂಗಸಭೆ ಮತ್ತು ಎಕ್ಸ್‌ಪೋ 2026’ (BRESE 2026) ರ ರೋಡ್‌ಶೋನಲ್ಲಿ ಮಾತನಾಡಿದ ಅವರು, ಕರ್ನಾಟಕವು ಈಗಾಗಲೇ ಸ್ವಚ್ಛ ಇಂಧನ ವಲಯದಲ್ಲಿ ಪ್ರಮುಖ ಉತ್ಪಾದಕ ಹಾಗೂ ನಾವೀನ್ಯತಾ ರಾಜ್ಯವಾಗಿ ಹೊರಹೆಮ್ಮೆಯೊಂದಿಗೆ ಗುರುತಿಸಿಕೊಂಡಿದೆ ಎಂದರು.

ರಾಜ್ಯದಲ್ಲಿ ಒಟ್ಟು ನವೀಕರಿಸಬಹುದಾದ ಇಂಧನ ಸಾಮರ್ಥ್ಯ:

ಒಟ್ಟು ಸಾಮರ್ಥ್ಯ: ಕರ್ನಾಟಕವು ಸುಮಾರು 27.3 ಗಿಗಾವ್ಯಾಟ್ (GW) ನವೀಕರಿಸಬಹುದಾದ ಇಂಧನ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.

ಸೌರ ವಿದ್ಯುತ್ : ರಾಜ್ಯದಲ್ಲಿ 11.5 ಗಿಗಾವ್ಯಾಟ್‌ಗೂ ಅಧಿಕ ಸೌರ ವಿದ್ಯುತ್ ಉತ್ಪಾದನಾ ಸಾಮರ್ಥ್ಯವಿದೆ.

ಗಾಳಿ ವಿದ್ಯುತ್ : ಸುಮಾರು 8.5 ಗಿಗಾವ್ಯಾಟ್ ಗಾಳಿ ವಿದ್ಯುತ್ ಸಾಮರ್ಥ್ಯವನ್ನು ರಾಜ್ಯ ಹೊಂದಿದೆ.

ವಿದ್ಯುತ್ ಸಂಗ್ರಹಣೆ ಹಾಗೂ ಮುಂದಿನ ಯೋಜನೆಗಳು:

ಸಂಜೆ ಹಾಗೂ ರಾತ್ರಿ ವೇಳೆ ಹೆಚ್ಚಾಗುವ ಗರಿಷ್ಠ  ವಿದ್ಯುತ್ ಬೇಡಿಕೆಯನ್ನು ಸರಿದೂಗಿಸಲು ಕೇವಲ ಸೌರ ಮತ್ತು ಗಾಳಿ ಇಂಧನ ಮಾತ್ರವಲ್ಲದೆ, ಮುಂದಿನ ದಿನಗಳಲ್ಲಿ ಬ್ಯಾಟರಿ ಶೇಖರಣಾ ವ್ಯವಸ್ಥೆ, ಪಂಪ್ಡ್ ಸ್ಟೋರೇಜ್ ಯೋಜನೆಗಳು, ಹಸಿರು ಜಲಜನಕ , ಎಲೆಕ್ಟ್ರಿಕ್ ಮೊಬಿಲಿಟಿ ಮತ್ತು ಸ್ಮಾರ್ಟ್ ಗ್ರೀಡ್‌ಗಳತ್ತ ಹೆಚ್ಚು ಗಮನಹರಿಸಲಾಗುತ್ತಿದೆ ಎಂದು ಸಚಿವರು ವಿವರಿಸಿದರು. ರಾಜ್ಯದ ಪ್ರಸ್ತುತ ಒಟ್ಟು ವಿದ್ಯುತ್ ಬೇಡಿಕೆ ಸುಮಾರು 18,000 ಮೆ.ವಾ. (MW) ಇದೆ.

ಮಳೆ ಕೊರತೆ ಹಾಗೂ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ:

ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಜಲವಿದ್ಯುತ್ ಉತ್ಪಾದನೆಗೆ ಸ್ವಲ್ಪ ಹಿನ್ನಡೆಯಾಗಿದ್ದರೂ, ಇದುವರೆಗೆ ಯಾವೇ ಕೃಷಿ ಪಂಪ್‌ಸೆಟ್‌ಗಳಿಗೂ ವಿದ್ಯುತ್ ಕಡಿತ ಮಾಡಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು. ಬೇಸಿಗೆ ಅಥವಾ ಬೇಡಿಕೆಯ ಸಮಯದಲ್ಲಿ ಎದುರಾಗುವ ಕೊರತೆಯನ್ನು ನೀಗಿಸಲು ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳೊಂದಿಗೆ ಬಾರ್ಟರ್  ವ್ಯವಸ್ಥೆಯಡಿ ವಿದ್ಯುತ್ ಪಡೆದುಕೊಳ್ಳಲಾಗಿದ್ದು, ಅಗತ್ಯವಿದ್ದಾಗ ವಿದ್ಯುತ್ ವಿನಿಮಯ ಕೇಂದ್ರಗಳಿಂದಲೂ  ಖರೀದಿಸಲಾಗುತ್ತಿದೆ ಎಂದರು.

ಬೆಸ್ಕಾಂ ಆರ್ಥಿಕ ಸುಧಾರಣೆ ಹಾಗೂ ಗೃಹಜ್ಯೋತಿ ಯೋಜನೆ:

ಬೆಸ್ಕಾಂ ಲಾಭ: ಹಿಂದಿನ ಅವಧಿಯಲ್ಲಿ ನಷ್ಟದಲ್ಲಿದ್ದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ), ಈಗ ನೌಕರರ ಸಮರ್ಥ ನಿರ್ವಹಣೆ ಮತ್ತು ಕಡಿಮೆ ವೇಚದ ಹಣಕಾಸು ಮೂಲಗಳ ಬಳಕೆಯಿಂದ ಲಾಭದ ಹಾದಿಗೆರುಗಿದೆ ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.

ಗೃಹಜ್ಯೋತಿ ಯೋಜನೆ: ಉಚಿತ ವಿದ್ಯುತ್ ನೀಡುವ ‘ಗೃಹಜ್ಯೋತಿ’ ಯೋಜನೆಯ ಫಲಾನುಭವಿಗಳ ಮರುಪರಿಶೀಲನೆ ಪ್ರಕ್ರಿಯೆ ಶೇ. 65 ರಿಂದ 70ರಷ್ಟು ಪೂರ್ಣಗೊಂಡಿದ್ದು, ಯಾರ ಮೇಲೂ ಬಲವಂತವಾಗಿ PAN ಕಾರ್ಡ್ ಅಥವಾ ಇತರೆ ದಾಖಲೆಗಳನ್ನು ನೀಡುವಂತೆ ಒತ್ತಡ ಹೇರುತ್ತಿಲ್ಲ ಎಂದು ಸ್ಪಷ್ಟಪಡಿಸಿದರು. ಸ್ವಯಂಪ್ರೇರಿತರಾಗಿ ಬಿಟ್ಟುಕೊಟ್ಟವರನ್ನು ಹೊರತುಪಡಿಸಿ, ಅರ್ಹ ಎಲ್ಲರಿಗೂ ಸೌಲಭ್ಯ ಮುಂದುವರಿಯಲಿದೆ ಎಂದರು.

ಮುಂದಿನ ನವೆಂಬರ್ 2 ರಿಂದ 5 ರವರೆಗೆ ನವದೆಹಲಿಯ ಭಾರತ್ ಮಂಡಪದಲ್ಲಿ ನಡೆಯಲಿರುವ ರಾಷ್ಟ್ರೀಯ ಶೃಂಗಸಭೆಗೆ ಉದ್ಯಮಿಗಳು ಹಾಗೂ ಹೂಡಿಕೆದಾರರನ್ನು ಆಹ್ವಾನಿಸಿದ ಸಚಿವರು, ಹಸಿರು ಇಂಧನ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಕರ್ನಾಟಕವು ಮುಂಚೂಣಿಯಲ್ಲಿದೆ ಎಂದು ಪುನರುಚ್ಚರಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles