ದಾವಣಗೆರೆ: ದಾವಣಗೆರೆ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಎಸ್. ಎಸ್. ಮಲ್ಲಿಕಾರ್ಜುನ್ ಅವರಿಗೆ ಸಚಿವ ಸ್ಥಾನ ನೀಡಿರುವುದು ಸರಿಯಾಗಿಯೇ ಇದೆ. ಇದನ್ನು ನಾನು ಸ್ವಾಗತಿಸುತ್ತೇನೆ. ಕಾಂಗ್ರೆಸ್ ಪಕ್ಷದಲ್ಲಿ ಬ್ಲಾಕ್ ಮೇಲ್ ನಡೆಯಲ್ಲ. ರಾಜೀನಾಮೆ ಕೊಡುತ್ತೇನೆಂದ ಶಾಸಕರು ಈಗ ಎಲ್ಲಿದ್ದಾರೆ ಎಂದು ಚನ್ನಗಿರಿ ಕಾಂಗ್ರೆಸ್ ಶಾಸಕ ಹಾಗೂ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಆಪ್ತರಾದ ಶಿವಗಂಗಾ ಬಸವರಾಜ್ ಅವರು ಪ್ರಶ್ನಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕ್ಲೆರಿಕಲ್ ತಪ್ಪಿನಿಂದ ಆಗಿದೆ ಎಂದು ಹೇಳಿದರು. ಇದನ್ನು ನಾವೇ ತಿಳಿದುಕೊಂಡಿದ್ದೇವೆ. ಸಿದ್ದರಾಮಯ್ಯರು ಮುಖ್ಯಮಂತ್ರಿಯಾಗಿದ್ದಾಗ ಲಿಂಗಾಯತ ಸಮುದಾಯದ ಏಳು ಶಾಸಕರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದರೆ ಡಿ. ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಆರು ಮಂದಿಗೆ ಸಚಿವ ಸ್ಥಾನ ನೀಡಲಾಗಿತ್ತು. ಏಳನೆಯದ್ದು ಬಾಕಿ ಇತ್ತು. ಎಲ್ಲಾ ಒಳಪಂಗಡದ ಲಿಂಗಾಯತರಿಗೆ ಮಂತ್ರಿ ಸ್ಥಾನ ಸಿಕ್ಕಿತ್ತು. ಆದರೆ ಸಾದು ಲಿಂಗಾಯತ ಸಮುದಾಯಕ್ಕೆ ನೀಡಿರಲಿಲ್ಲ. ಮಧ್ಯ ಕರ್ನಾಟಕದಲ್ಲಿ ಬಹಳಷ್ಟು ಮಂದಿ ಇದ್ದರೂ ಕೈ ತಪ್ಪಿತ್ತು. ಇದನ್ನು ಮನಗಂಡು ನಿರ್ಧಾರ ಬದಲಿಸಲಾಗಿದೆ ಎಂದು ಹೇಳಿದರು.
ಸಿದ್ದರಾಮಯ್ಯರ ಆಪ್ತರು, ಡಿ. ಕೆ. ಶಿವಕುಮಾರ್ ಆಪ್ತರು ಎಂದು ಸಚಿವರ ನೇಮಕ ವಿಚಾರದಲ್ಲಿ ಬರಲ್ಲ. ಪ್ರಾಂತ್ಯವಾರು, ಜಾತಿವಾರು ಪರಿಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಮಧ್ಯಕರ್ನಾಟಕದ ಕೇಂದ್ರ ಬಿಂದು ದಾವಣಗೆರೆ. ಎಡಗೈ ಸಮುದಾಯದ ಶಾಸಕ ಕೆ. ಎಸ್. ಬಸವಂತಪ್ಪರಿಗೆ ಸಚಿವ ಸ್ಥಾನ ನೀಡಲಾಗಿದೆ. ಹಾಗೆಂದ ಮಾತ್ರಕ್ಕೆ ನಾನು ಸಿಟ್ಟು ಆಗಲು ಆಗುತ್ತಾ ಎಂದು ಪ್ರಶ್ನಿಸಿದರು.
ಆರ್. ಬಿ. ತಿಮ್ಮಾಪುರ ಅವರನ್ನು ಸಚಿವ ಸಂಪುಟದಿಂದ ಕೈ ಬಿಟ್ಟ ಕಾರಣಕ್ಕೆ ಮಾಯಕೊಂಡ ಶಾಸಕರಾದ ಬಸವಂತಪ್ಪರಿಗೆ ಸಚಿವ ಸ್ಥಾನ ನೀಡಲಾಗಿದೆ. ಅವರ ಕಡೆಯವರು, ಇವರ ಕಡೆಯವರು ಎನ್ನಲಾಗದು. ಬಸವಂತಣ್ಣ ಯಾರ ಕಡೆ ಇದ್ದರು, ಎಸ್. ಎಸ್. ಮಲ್ಲಿಕಾರ್ಜುನ್ ಯಾವ ಕಡೆ ಇದ್ದರು? ಎಲ್ಲರೂ ಕಾಂಗ್ರೆಸ್ಸಿಗರು ಎಂದು ಹೇಳಿದರು.
- Channagiri MLA
- Davanagere Politics
- DK Shivakumar
- Karnataka Congress Cabinet
- Karnataka Politics
- KS Basavanthappa
- Sadhu Lingayat
- Shivaganga Basavaraj
- Siddaramaiah
- SS Mallikarjun
- ಎಸ್. ಎಸ್. ಮಲ್ಲಿಕಾರ್ಜುನ್
- ಕರ್ನಾಟಕ ಕಾಂಗ್ರೆಸ್
- ಕಾಂಗ್ರೆಸ್ ಸಚಿವ ಸಂಪುಟ
- ಕೆ ಎಸ್ ಬಸವಂತಪ್ಪ
- ಚನ್ನಗಿರಿ ಶಾಸಕ
- ಡಿ. ಕೆ. ಶಿವಕುಮಾರ್
- ದಾವಣಗೆರೆ ರಾಜಕೀಯ
- ಶಿವಗಂಗಾ ಬಸವರಾಜ್
- ಸಾದು ಲಿಂಗಾಯತ
- ಸಿದ್ದರಾಮಯ್ಯ





Leave a comment