ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಆ ಕುಟುಂಬದ ಕಥೆ ಕೇಳಿದ್ರೆ ಕಣ್ಣೀರು ಬರುತ್ತೆ… ನೋವಿನಲ್ಲಿದ್ದ ಫ್ಯಾಮಿಲಿಗೆ ಆಯ್ತು ಆಘಾತ..!

On: November 2, 2024 11:56 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:02-11-2024

ದಾವಣಗೆರೆ: ಕಳೆದ ಆಗಸ್ಟ್ ತಿಂಗಳಿನಲ್ಲಿ ಸುರಿದ ಭಾರೀ ಮಳೆ ಎಷ್ಟೋ ಮಂದಿ ಬದುಕು ಮೂರಾಬಟ್ಟೆಯಾಗುವಂತೆ ಮಾಡಿದೆ. ಬೆಳೆದಿದ್ದ ಬೆಳೆ ಕಳೆದುಕೊಂಡಿದ್ದಾರೆ. ವರುಣನ ರುದ್ರನರ್ತನಕ್ಕೆ ಜನರು ತತ್ತರಿಸಿ ಹೋಗಿದ್ದಾರೆ. ಮನೆಗಳು ಕುಸಿದು ಬಿದ್ದಿದ್ದರು, ಸೇತುವೆಗಳು ಒಡೆದು ಹೋಗಿವೆ. ಜಮೀನಿನಲ್ಲಿ ಬೆಳೆದಿದ್ದ ಬೆಳೆ ನೀರುಪಾಲಾಗಿದೆ. ಹೇಳುತ್ತಾ ಹೋದರೆ ದೊಡ್ಡ ಪಟ್ಟಿಯೇ ಇದೆ. ಆದ್ರೆ, ಇಲ್ಲೊಂದು ಕುಟುಂಬಕ್ಕೆ ಈ ಬಾರಿಯ ಮಳೆಗಾಲ ಕಣ್ಣೀರು ತರಿಸಿದೆ. ಇದರ ಜೊತೆಗೆ ಮತ್ತೊಂದು ದುರಂತವೂ ನಡೆದು ಹೋಗಿದೆ.

ಹೌದು. ರಸ್ತೆ ದಾಟುವಾಗ ಕಾರು ಡಿಕ್ಕಿಯಾಗಿ ಸ್ಥಳದಲ್ಲೇ ಬಾಲಕಿ ಸಾವು ಕಂಡಿದ್ದಾಳೆ. ಈ ಘಟನೆ ನಡೆದಿರುವುದು ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೆದ್ದಲಹಟ್ಟಿ ಗ್ರಾಮದಲ್ಲಿ.

ಚಿಕ್ಕಕುರುಬರಹಳ್ಳಿ ಮೂಲದ ರಂಜಿತಾ (12) ಮೃತಪಟ್ಟ ದುರ್ದೈವಿ ಬಾಲಕಿ. ತ್ಯಾವಣಗಿ ಸಮೀಪದ ಚಿಕ್ಕ ಕುರುಬರಹಳ್ಳಿ ಮೂಲದ ರಂಜಿತಾ ಹಬ್ಬಕ್ಕೆಂದು ಗೆದ್ದಲಹಟ್ಟಿ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದಳು. ರಸ್ತೆ ಬದಿಯಲ್ಲಿ ನಿಂತಿದ್ಧಳು. ಈ ವೇಳೆ ಕಾರು ಡಿಕ್ಕಿಯಾಗಿ ಸ್ಥಳದಲ್ಲಿಯೇ ಉಸಿರು ಚೆಲ್ಲಿದ್ದಾಳೆ. ಕಾರಿನಲ್ಲೇ ಆಸ್ಪತ್ರೆಗೆ ಕರೆದೊಯ್ದ ಡ್ರೈವರ್, ಆಸ್ಪತ್ರೆಯಲ್ಲೆ ಕಾರು ಬಿಟ್ಟು ಎಸ್ಕೇಪ್ ಆಗಿದ್ದಾನೆ. ಘಟನೆಯಿಂದ ಆಕ್ರೋಶಗೊಂಡ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಂಪ್ಸ್ ಅಳವಡಿಸುವಂತೆ ಗ್ರಾಮಸ್ಥರ ಆಗ್ರಹಿಸಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ಇದೇ ಸ್ಥಳದಲ್ಲಿ ದುರಂತ ಸಂಭವಿಸಿತ್ತು. ಪದೇ ಪದೇ ರಸ್ತೆ ದುರಂತದಲ್ಲಿ ಜೀವಹಾನಿ ಆಗುತ್ತಿದ್ದು, ಸಂಬಂಧಪಟ್ಟವರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಂಪ್ಸ್ ಇಲ್ಲವೇ ಫ್ಲೈಓವರ್ ಮಾಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಕಾರು ವಶಕ್ಕೆ ತೆಗೆದುಕೊಂಡು ಸಂತೆಬೆನ್ನೂರು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕಳೆದ ಆಗಸ್ಟ್ ತಿಂಗಳಿನಲ್ಲಿ ಭಾರೀ ಮಳೆಗೆ ಚಿಕ್ಕಕುರುಬರಹಳ್ಳಿಯಲ್ಲಿ ಈಕೆ ತಂದೆ ತಾಯಿ ಮನೆ ಕುಸಿದು ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಮಾತ್ರವಲ್ಲ, ಕೈಕಾಲು ಮುರಿದುಕೊಂಡಿದ್ದ ದಂಪತಿ ಗಾಯದಿಂದ ಬಳಲುತ್ತಿದ್ದಾರೆ. ಇರಲು ಮನೆಯಿಲ್ಲ, ಬಾಡಿಗೆ ಮನೆಯಲ್ಲಿ ವಾಸ ಮಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ಹಬ್ಬ ಇದ್ದ ಕಾರಣಕ್ಕೆ ಸಂಬಂಧಿಕರ ಮನೆಗೆ ಪುತ್ರಿಯನ್ನು ಕಳುಹಿಸಿಕೊಟ್ಟಿದ್ದರು. ಮನೆಯೂ ಇಲ್ಲ, ಜೊತೆಗೆ ರೋಗ ಬೇರೆ, ಮತ್ತೊಂದೆಡೆ ಪುತ್ರಿಯ ಸಾವು ದಂಪತಿಗೆ ಸಿಡಿಲು ಬಡಿದಂತಾಗಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment