Home ಗಣೇಶೋತ್ಸವದ ವೇಳೆ ಸಂಪೂರ್ಣ ಡಿಜೆ ನಿಷೇಧಿಸಿ: ಪ್ರತಿಭನೆ ನಡೆಸಿದ್ಯಾಕೆ? ಗಣೇಶ ಮಂಡಳಿಗಳ ಪ್ರತಿಕ್ರಿಯೆ ಏನು?
Homeಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಗಣೇಶೋತ್ಸವದ ವೇಳೆ ಸಂಪೂರ್ಣ ಡಿಜೆ ನಿಷೇಧಿಸಿ: ಪ್ರತಿಭನೆ ನಡೆಸಿದ್ಯಾಕೆ? ಗಣೇಶ ಮಂಡಳಿಗಳ ಪ್ರತಿಕ್ರಿಯೆ ಏನು?

Share
ಗಣೇಶ
Share

ಪುಣೆ: ಮುಂಬರುವ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಗಣೇಶ ಮಂಡಳಿಗಳು ಬಳಸುವ ಡಿಜೆ (DJ) ಮತ್ತು ಅತಿ ಹೆಚ್ಚು ಶಬ್ದ ಮಾಡುವ ಧ್ವನಿವರ್ಧಕಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಆಗ್ರಹಿಸಿ ಪುಣೆಯ ನಿವಾಸಿಗಳು ಭಾನುವಾರ ಬೃಹತ್ ಪ್ರತಿಭಟನೆ ನಡೆಸಿದರು.

ಪುಣೆಯ ಗುಡ್‌ಲಕ್ ಕೆಫೆ ಚೌಕ್ ಮತ್ತು ಅಭಿನವ್ ಚೌಕ್‌ನಲ್ಲಿ ಜಮಾಯಿಸಿದ ನೂರಾರು ನಾಗರಿಕರು, “ಅಬ್‌ಕೀ ಬಾರ್, ಲೌಡ್‌ಸ್ಪೀಕರ್ ಹದ್ದ್‌ಪಾರ್” (ಈ ಬಾರಿ ಲೌಡ್‌ಸ್ಪೀಕರ್‌ಗಳನ್ನು ಓಡಿಸಬೇಕು) ಎಂಬ ಘೋಷಣೆಗಳನ್ನು ಕೂಗಿದರು.

ಪ್ರತಿಭಟನಾಕಾರರ ಪ್ರಮುಖ ಕಾಳಜಿಗಳು:

ಆರೋಗ್ಯದ ಮೇಲಿನ ಪರಿಣಾಮ: ಅತಿಯಾದ ಶಬ್ದ ಮಾಲಿನ್ಯವು ವೃದ್ಧರು, ಮಕ್ಕಳು ಮತ್ತು ರೋಗಿಗಳ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ತಲೆನೋವು ಮತ್ತು ಕಿವುಡುತನದಂತಹ ಸಮಸ್ಯೆಗಳು ಉದ್ಭವಿಸುತ್ತಿವೆ.

ನೆಮ್ಮದಿ ಭಂಗ: ಗಣೇಶ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಸತತ 2-3 ದಿನಗಳ ಕಾಲ ನಿರಂತರವಾಗಿ ಜೋರಾದ ಶಬ್ದವಿರುವುದರಿಂದ, ಮೆರವಣಿಗೆ ಸಾಗುವ ಮಾರ್ಗದ ನಿವಾಸಿಗಳು ತಮ್ಮ ಮನೆಗಳನ್ನು ಬಿಟ್ಟು ಬೇರೆಡೆಗೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಯಾವುದೇ ಧರ್ಮದ ವಿರುದ್ಧವಲ್ಲ: ಈ ಪ್ರತಿಭಟನೆಯು ಯಾವುದೇ ನಿರ್ದಿಷ್ಟ ಧರ್ಮ, ಜಾತಿ ಅಥವಾ ಹಬ್ಬದ ವಿರುದ್ಧವಲ್ಲ, ಬದಲಾಗಿ ಕೇವಲ ಶಬ್ದ ಮಾಲಿನ್ಯದ ವಿರುದ್ಧವಾಗಿದೆ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದ್ದಾರೆ. ಸಾಂಪ್ರದಾಯಿಕ ವಾದ್ಯಗಳಾದ ಡೋಲ್-ತಾಶಾಗೆ ತಮ್ಮ ವಿರೋಧವಿಲ್ಲ ಎಂದೂ ತಿಳಿಸಿದ್ದಾರೆ.

ಗಣೇಶ ಮಂಡಳಿಗಳ ಪ್ರತಿಕ್ರಿಯೆ:

ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಕೆಲವು ಗಣೇಶ ಮಂಡಳಿಯ ಪ್ರತಿನಿಧಿಗಳು, ಶಬ್ದ ಮಾಲಿನ್ಯದ ನೆಪದಲ್ಲಿ ತಮ್ಮನ್ನು ಮಾತ್ರ ಗುರಿಯಾಗಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಮುಳಾ-ಮುಠಾ ನದಿ ಮಲಿನಗೊಂಡಿರುವ ಬಗ್ಗೆ ಯಾರೂ ಧ್ವನಿ ಎತ್ತುತ್ತಿಲ್ಲ” ಎಂದು ಪ್ರಶ್ನಿಸಿದ್ದಾರೆ. ಆದಾಗ್ಯೂ, ಆಡಳಿತದ ಮಾರ್ಗಸೂಚಿಗಳನ್ನು ಪಾಲಿಸಲು ಮತ್ತು ಶಬ್ದ ಕಡಿಮೆ ಮಾಡಲು ಪ್ಲಾಸ್ಮಾ, ಪ್ರೆಶರ್-ಮಿಡ್ ಮುಂತಾದ ಸಾಧನಗಳನ್ನು ಬಳಸದಿರಲು ನಿರ್ಧರಿಸಲಾಗಿದೆ ಎಂದು ಮಂಡಳಿಗಳು ತಿಳಿಸಿವೆ.

ಈಗಾಗಲೇ, ಶಬ್ದ ಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆನ್‌ಲೈನ್ ಅರ್ಜಿಯೊಂದು ಬಿಡುಗಡೆಯಾಗಿದ್ದು, ಸಾವಿರಾರು ಮಂದಿ ಸಹಿ ಮಾಡಿದ್ದಾರೆ. ಸೆಪ್ಟೆಂಬರ್ 14 ರಂದು ಗಣೇಶ ಚತುರ್ಥಿ ಹಬ್ಬ ಆರಂಭವಾಗಲಿದೆ

Share

Leave a comment

Leave a Reply

Your email address will not be published. Required fields are marked *