Home ಕ್ರೈಂ ನ್ಯೂಸ್ “ನನ್ನ ಮಗ ಬರೀ ಕೇಸ್ ಫೈಲ್ ಆಗದಿರಲಿ”: ಪುಣೆ ಕೊಲೆ ಸಂತ್ರಸ್ತ ಕೇತನ್ ಅಗರ್ವಾಲ್ ತಾಯಿಯಿಂದ ಪ್ರಧಾನಿ ಮೋದಿಗೆ ಕಣ್ಣೀರಿನ ಪತ್ರ!
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

“ನನ್ನ ಮಗ ಬರೀ ಕೇಸ್ ಫೈಲ್ ಆಗದಿರಲಿ”: ಪುಣೆ ಕೊಲೆ ಸಂತ್ರಸ್ತ ಕೇತನ್ ಅಗರ್ವಾಲ್ ತಾಯಿಯಿಂದ ಪ್ರಧಾನಿ ಮೋದಿಗೆ ಕಣ್ಣೀರಿನ ಪತ್ರ!

Share
ಪುಣೆ
Share

ಪುಣೆ: “ಪ್ರತಿಯೊಬ್ಬ ತಾಯಿಯಂತೆ ನಾನು ಕೂಡ ನನ್ನ ಮಗ ಕೇತನ್ ಮದುವೆಯಾಗಿ, ನಮ್ಮೊಂದಿಗೆ ವೃದ್ಧಾಪ್ಯದವರೆಗೆ ಸುಖವಾಗಿ ಬಾಳುವುದನ್ನು ನೋಡುವ ಕನಸು ಕಂಡಿದ್ದೆ. ಆದರೆ ಇಂದು ನಾನು ನನ್ನ ಮಗನ ಅಂತ್ಯಸಂಸ್ಕಾರ ಮಾಡುವಂತಾಗಿದೆ. ತಾಯಿಗೆ ಇದಕ್ಕಿಂತ ದೊಡ್ಡ ನೋವು ಬೇರೊಂದಿಲ್ಲ…”

ಇದು ಇತ್ತೀಚೆಗೆ ಮಹಾರಾಷ್ಟ್ರದ ಲೋಹಗಢ್ ಕೋಟೆಯಲ್ಲಿ ಅತ್ಯಂತ ಕ್ರೂರವಾಗಿ ಕೊಲೆಯಾದ ಪುಣೆಯ ರಿಯಲ್ಟರ್ ಕೇತನ್ ಅಗರ್ವಾಲ್ (26) ಅವರ ತಾಯಿ ರಾಖಿ ಅಗರ್ವಾಲ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದಿರುವ ಭಾವುಕ ಪತ್ರದ ಸಾಲುಗಳು. “ದಯವಿಟ್ಟು ನನ್ನ ಮಗನ ಸಾವಿನ ಪ್ರಕರಣವನ್ನು ಕೇವಲ ಒಂದು ಕೇಸ್ ಫೈಲ್ ಆಗಲು ಬಿಡಬೇಡಿ, ನಮಗೆ ತಕ್ಷಣ ನ್ಯಾಯ ಕೊಡಿಸಿ” ಎಂದು ಅವರು ಪ್ರಧಾನಿಗೆ ಇಮೇಲ್ ಮೂಲಕ ಮನವಿ ಮಾಡಿದ್ದಾರೆ.

ಕೇವಲ 20 ದಿನಗಳಲ್ಲಿ ಇಬ್ಬರ ಸಾವು!

ಕೇತನ್ ಕೊಲೆಯಾದ ಕೇವಲ 20 ದಿನಗಳ ಅಂತರದಲ್ಲಿ ಅವರ ತಾತ ದೇವಿಚಂದ್ ಅಗರ್ವಾಲ್ ಅವರು ಮೊಮ್ಮಗನ ಅಗಲಿಕೆಯ ದುಃಖ ತಾಳಲಾರದೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಮೂಲಕ ಅಗರ್ವಾಲ್ ಕುಟುಂಬವು ಕೇವಲ ಮೂರು ವಾರಗಳಲ್ಲಿ ಎರಡು ತಲೆಮಾರಿನ ಸದಸ್ಯರನ್ನು ಕಳೆದುಕೊಂಡು ದಿಕ್ಕುತೋಚದಂತಾಗಿದೆ. ಕಳೆದ ವಾರವಷ್ಟೇ ಕೇತನ್ ತಂದೆ ವಿಶಾಲ್ ಅಗರ್ವಾಲ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೂ ಪತ್ರ ಬರೆದು ವೇಗದ ತನಿಖೆಗೆ ಒತ್ತಾಯಿಸಿದ್ದರು.

ಏನಿದು ಪುಣೆ ಕೋಟೆ ಕೊಲೆ ಪ್ರಕರಣ?

ಕೇತನ್ ಅಗರ್ವಾಲ್ ಮತ್ತು ಸಿಯಾ ಗೋಯಲ್ (20) ಅವರಿಗೆ ಕಳೆದ ಫೆಬ್ರವರಿಯಲ್ಲಿ ಅದ್ಧೂರಿ ನಿಶ್ಚಿತಾರ್ಥ ನಡೆದಿತ್ತು. ನವೆಂಬರ್‌ನಲ್ಲಿ ಜೈಪುರದ ಅರಮನೆಯೊಂದರಲ್ಲಿ 17 ಕೋಟಿ ರೂ. ವೆಚ್ಚದಲ್ಲಿ ಇವರಿಬ್ಬರ ವಿವಾಹಕ್ಕೆ ಸಿದ್ಧತೆ ನಡೆದಿತ್ತು. ಆದರೆ, ಸಿಯಾ ಗೋಯಲ್ ತನ್ನ ಕಾಲೇಜು ದಿನಗಳ ಪ್ರೇಮಿ ಚೇತನ್ ಚೌಧರಿ ಜೊತೆ ರಹಸ್ಯವಾಗಿ ಮದುವೆಯಾಗಿದ್ದಳು ಎನ್ನಲಾಗಿದೆ.

ಜೂನ್ 18 ರಂದು ಲೋಹಗಢ್ ಕೋಟೆಗೆ ಕೇತನ್‌ನನ್ನು ಕರೆದೊಯ್ದ ಸಿಯಾ ಮತ್ತು ಆಕೆಯ ಪ್ರೇಮಿ ಚೇತನ್, ಆತನನ್ನು ಕಂದಕಕ್ಕೆ ತಳ್ಳಿ ಭೀಕರವಾಗಿ ಕೊಲೆ ಮಾಡಿದ್ದರು. ಇದಕ್ಕೂ ಮುನ್ನ ಜೂನ್ 14 ರಂದೂ ಸಹ ಸಿಯಾ ಆತನನ್ನು ತಳ್ಳಲು ಯತ್ನಿಸಿದ್ದಾಗ ಕೇತನ್ ಪೊದೆಯನ್ನು ಹಿಡಿದು ಬದುಕುಳಿದಿದ್ದ. ಪ್ರಸ್ತುತ ಆರೋಪಿಗಳಿಬ್ಬರೂ ಪೊಲೀಸ್ ಕಸ್ಟಡಿಯಲ್ಲಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Recent Comments

No comments to show.
Related Articles