ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

91 ಬಾರಿ ನನ್ನ ವಿರುದ್ಧ ಕಾಂಗ್ರೆಸ್ ಕೆಟ್ಟ ಶಬ್ಧಗಳಲ್ಲಿ ಟೀಕೆ: ಪ್ರಧಾನಿ ಮೋದಿ ಮತಬೇಟೆಯ ಅಸ್ತ್ರ…!

On: April 29, 2023 11:17 AM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:29-04-2023

 

ಹುಮನಾಬಾದ್: 91 ಬಾರಿ ಕಾಂಗ್ರೆಸ್ (CONGRESS) ನನ್ನ ವಿರುದ್ಧ ಕೆಟ್ಟ ಶಬ್ಧಗಳಲ್ಲಿ ಕಟುಟೀಕೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ (NARENDRA MODI) ಹೇಳುವ ಮೂಲಕ ಭಾವಾನಾತ್ಮಕವಾಗಿ ಮತಬೇಟೆಯ ಅಸ್ತ್ರ ಪ್ರಯೋಗಿಸಿದರು.

ಬೀದರ್ ಜಿಲ್ಲೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ‘ಯಾರೋ ನನ್ನ ವಿರುದ್ಧ ಇಂತಹ ನಿಂದನೆಗಳ ಪಟ್ಟಿಯನ್ನು ಮಾಡಿ ನನಗೆ ಕಳುಹಿಸಿದ್ದಾರೆ. ಇದುವರೆಗೆ ಕಾಂಗ್ರೆಸ್ (CONGRESS) ನವರು 91 ಬಾರಿ ನನ್ನ ಮೇಲೆ ವಿವಿಧ ರೀತಿಯ ನಿಂದನೆ ಮಾಡಿದ್ದಾರೆ ಎಂದು ಗುಡುಗಿದರು.

“ಸಾಮಾನ್ಯರ ಬಗ್ಗೆ ಮಾತನಾಡುವ, ಅವರ ಭ್ರಷ್ಟಾಚಾರವನ್ನು ಹೊರತರುವ, ಅವರ ಮೇಲೆ ದಾಳಿ ಮಾಡುವ ಪ್ರತಿಯೊಬ್ಬರನ್ನು ಕಾಂಗ್ರೆಸ್ (CONGRESS) ದ್ವೇಷಿಸುತ್ತದೆ. ಸ್ವಾರ್ಥ ರಾಜಕಾರಣ ಮಾಡುವ ಕಾಂಗ್ರೆಸ್ ದ್ವೇಷ ರಾಜಕಾರಣಕ್ಕೆ ಹೆಸರುವಾಸಿಯಾಗಿದೆ. ಈ ಚುನಾವಣೆಯಲ್ಲೂ ಕಾಂಗ್ರೆಸ್ ಮತ್ತೊಮ್ಮೆ ನನ್ನನ್ನು ನಿಂದಿಸಲು ಆರಂಭಿಸಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಎಐಸಿಸಿ (AICC) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (MALLIKARJUN KHARGE) ಅವರು ನನ್ನನ್ನು ‘ವಿಷಪೂರಿತ ಹಾವು’ ಎಂದು ಹೇಳಿದ್ದಾರೆ. ನನ್ನ ವಿರುದ್ಧ ನಿಂದನೆ, ತೇಜೋವಧೆಗೆ ಪ್ರಯತ್ನಿಸುತ್ತಲೇ ಇರುವ ಕಾಂಗ್ರೆಸ್, ಕರ್ನಾಟಕದಲ್ಲಿ ಪ್ರಬಲ ಲಿಂಗಾಯತ ಸಮುದಾಯಕ್ಕೆ ಅನ್ಯಾಯ ಮಾಡಿದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ನಿಂದಿಸಿದೆ ಮತ್ತು ವೀರ್ ಸಾವರ್ಕರ್ ಅವರನ್ನು ನಿಂದಿಸುವಲ್ಲಿ ತೊಡಗಿದೆ ಎಂದು ಹೇಳಿದರು.

“ಕಾಂಗ್ರೆಸ್ (CONGRESS) ಉತ್ತಮ ಆಡಳಿತ ನೀಡಿದ್ದರೆ ಮತ್ತು ಅದರ ಕಾರ್ಯಕರ್ತರ ನೈತಿಕತೆಯನ್ನು ಹೆಚ್ಚಿಸಿದ್ದರೆ ದೇಶದಲ್ಲಿ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಿಂದನೆಗಳ ನಿಘಂಟಿನಲ್ಲಿ ಸಮಯ ವ್ಯರ್ಥ ಮಾಡುವ ಬದಲು, ಕಾಂಗ್ರೆಸ್‌ ಜನರ ವಿಶ್ವಾಸ ಗಳಿಸಲಿ ಎಂದು ಸವಾಲು ಹಾಕಿದರು.

ಬಡವರಿಗಾಗಿ ಮತ್ತು ದೇಶಕ್ಕಾಗಿ ದುಡಿಯುವವರನ್ನು ಅವಮಾನಿಸುವುದು ಕಾಂಗ್ರೆಸ್‌ನ ಇತಿಹಾಸ. “ನಾನು ಒಬ್ಬನೇ ಅಲ್ಲ, ಕಳೆದ ಚುನಾವಣೆಯಲ್ಲಿ ಅವರು “ಚೌಕಿದಾರ್ ಚೋರ್ ಹೈ” ಎಂದು ಪ್ರಚಾರ ಮಾಡಿದರು, ನಂತರ ಅವರು “ಮೋದಿ ಚೋರ್” ಎಂದು ಹೇಳಿದರು, ನಂತರ ಅವರು “ಒಬಿಸಿ ಸಮುದಾಯದವರು ಚೋರ್” ಎಂದು ಹೇಳಿದರು ಮತ್ತು ಚುನಾವಣೆ ಕರ್ನಾಟಕದಲ್ಲಿ ಶುರುವಾಗಿದೆ. “ಕಾಂಗ್ರೆಸ್ ಜನರೇ, ತೆರೆದ ಕಿವಿಯಿಂದ ಆಲಿಸಿ, ನೀವು ಯಾರನ್ನಾದರೂ ನಿಂದಿಸಿದಾಗ ಅವರು ನಿಮ್ಮನ್ನು ತಡೆದುಕೊಳ್ಳಲು ಸಾಧ್ಯವಾಗದ ರೀತಿಯಲ್ಲಿ ಶಿಕ್ಷೆ ನೀಡಿದ್ದಾರೆ. ಈ ಬಾರಿ ಕರ್ನಾಟಕದ ಜನರು ಕಾಂಗ್ರೆಸ್ ಗೆ ತಕ್ಕ ಉತ್ತರ ಕೊಡಲಿದ್ದಾರೆ. ಅದೂ ಮತಗಳ ಮೂಲಕ ಎಂದು ಭವಿಷ್ಯ ನುಡಿದರು.

“ಕಾಂಗ್ರೆಸ್ ಪದೇ ಪದೇ ನಿಂದನೆ ಮಾಡಿತು ಎಂದು ಸ್ವತಃ ಬಾಬಾಸಾಹೇಬ್ ಅಂಬೇಡ್ಕರ್ ಅವರೇ ಒಮ್ಮೆ ವಿವರವಾಗಿ ಹೇಳಿದ್ದರು. ಕಾಂಗ್ರೆಸ್ ಬಾಬಾಸಾಹೇಬರನ್ನು “ರಾಕ್ಷಸ್”, “ರಾಷ್ಟ್ರ ದ್ರೋಹಿ”, “ದಗಾಬಾಜ್ ದೋಸ್ತ್” ಎಂದು ಕರೆದಿತ್ತು. ಕೇಳಿದರೆ ಬೆಚ್ಚಿಬೀಳುತ್ತೀರಿ.ಇಂದಿಗೂ ಕಾಂಗ್ರೆಸ್ ನಿಂದನೆ ಹೇಗಿದೆ ಎಂಬುದನ್ನು ನೋಡುತ್ತೇವೆ. ವೀರ್ ಸಾವರ್ಕರ್, ಕಾಂಗ್ರೆಸ್ ಈ ದೇಶದ ದಿಗ್ಗಜರನ್ನು ನಿಂದಿಸಿದೆ” ಎಂದು ಅವರು ಹೇಳಿದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment