ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಶಿವರಾತ್ರಿಯಂದು ನೃತ್ಯ ನಮನ: ನಮನ ಅಕಾಡೆಮಿಯ ಶಿವಸ್ಮರಣೆ ನೃತ್ಯ ಜಾಗರಣೆ…!

On: March 9, 2024 7:18 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:09-03-2024

ದಾವಣಗೆರೆ: ನಮನ ಅಕಾಡೆಮಿ ಯು ಸತತ ನಾಲ್ಕು ವರ್ಷಗಳಿಂದ ಶಿವರಾತ್ರಿ ಎಂದು ವಿಭಿನ್ನವಾಗಿ ನಡೆಸುತ್ತಿರುವ ಶಿವ ಸ್ಮರಣೆ ನೃತ್ಯ ಜಾಗರಣೆ ಕಾರ್ಯಕ್ರಮವನ್ನು ದಾವಣಗೆರೆ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರನ್ ರವರು ಉದ್ಘಾಟಿಸಿದರು.

ನಮನ ಅಕಾಡೆಮಿಯವರು ಸದಾ ವಿಶೇಷವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು ಅವರು ಪ್ರಸ್ತುತ ಪಡಿಸುವ ನೃತ್ಯಗಳು ಬಹಳ ಸೊಗಸಾಗಿ ಮೂಡಿ ಬರುತ್ತವೆ, ನೃತ್ಯಗಳಲ್ಲಿ ಅವರ ಶ್ರಮ ಹಾಗೂ ಸೃಜನಶೀಲತೆ ಕಾಣುತ್ತವೆ.

ನೃತ್ಯ ಜಾಗರಣೆಯನ್ನು ಮಾಡುತ್ತಿರುವ ಕಲಾವಿದರಿಗೆ ಆ ಶಿವನು ಒಳ್ಳೆಯದನ್ನು ಮಾಡುವನು ಹಾಗೂ ನಮನ ಅಕಾಡೆಮಿಯು ಅತಿ ಎತ್ತರಕ್ಕೆ ಬೆಳೆದು ಪ್ರಪಂಚದಾದ್ಯಂತ ನಮ್ಮ ಸಂಸ್ಕೃತಿಯನ್ನು ಬಿಂಬಿಸಲಿ ಎಂದು ಹಾರೈಸಿದರು.

ಮುಖ್ಯ ಅತಿಥಿಗಳಾದ ಶಂಕರ ಸೇವಾ ಸಂಘದ ಅಧ್ಯಕ್ಷ ಡಾ. ಬಿ ಟಿ ಅಚ್ಯುತ್ ಅವರು ನಮನ ಅಕಾಡೆಮಿಯ ಈ ವಿಶೇಷ ಕಾರ್ಯಕ್ರಮವು ಪ್ರತಿ ವರ್ಷ ನಮ್ಮ ಶಾರದಾ ಮಂದಿರದಲ್ಲಿ ಉದ್ಘಾಟನೆಗೊಂಡು ಇನ್ನೂ ಮೂರು ದೇವಸ್ಥಾನಗಳಲ್ಲಿ ನಡೆಯಲಿದ್ದು ಪ್ರತಿ ವರ್ಷವೂ ಅಚ್ಚುಕಟ್ಟಾಗಿ ನಡೆಸಿ ಕೊಂಡು ಹೋಗುತ್ತಿರುವರು. ನೃತ್ಯಕ್ಕೆ ಅಧಿಪತಿಯಾದ ಪರಮೇಶ್ವರ, ವಿದ್ಯಾದೇವತೆ ಶಾರದೆ ಹಾಗೂ ವಿಘ್ನ ನಿವಾರಕ ಗಣೇಶನ ಸನ್ನಿಧಿಯಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಕಲಾವಿದರಿಗೆ ಭಗವಂತ ಆಶೀರ್ವದಿಸುವರು ಎಂದರು.

ಕಾರ್ಯಕ್ರಮದಲ್ಲಿ ನಮನ ಅಕಾಡೆಮಿಯ ಅಧ್ಯಕ್ಷ ಗೋಪಾಲಕೃಷ್ಣ, ಕಾರ್ಯದರ್ಶಿ ಹಾಗೂ ನೃತ್ಯ ಗುರುಗಳಾದ ವಿದುಷಿ ಮಾಧವಿ ಡಿ ಕೆ, ಉಪಾಧ್ಯಕ್ಷ ಆರ್. ಎಲ್. ನಾಗಭೂಷಣ, ನಿರ್ದೇಶಕರಾದ ರಾಮನಾಥ ಪಿ ಸಿ, ಅನಿಲ್ ಬಾರಂಗಲ್,
ವೇದಬ್ರಹ್ಮ ನಾರಾಯಣ ಶಾಸ್ತ್ರಿ, ಕಲಾವಿದರಾದ ರವಿ ಹುದ್ದಾರ್, ನೃತ್ಯಸೇವೆ ಸಲ್ಲಿಸಿದ ನೀಲು ಅರೋರ್ ಎಸ್, ಋತು ಹಿರೇಮಠ್, ಸಂಸ್ಕೃತಿ ಆಚಾರ್, ಯುಕ್ತಿ ಎಸ್, ಗೌರಿ ಬಿ ಟಿ, ನಿಧಿ ಪಿ ಧೂಳೇಹೊಳೆ, ಪವನ್ ಕುಮಾರ್ ಎನ್ ಟಿ, ಸಂಜನಾ
ಎಸ್. ಉಪಸ್ಥಿತರಿದ್ದರು.

 

ಯೋಗರಾಜ್

ಇದು ಡಿಜಿಟಲ್ ಯುಗ. ಕೈ ಬೆರಳಿನಲ್ಲೇ ಸುದ್ದಿಗಳು ಜನರಿಗೆ ತಲುಪಬೇಕು ಎಂಬುದು ನಮ್ಮ ಸದುದ್ದೇಶ. ಈಗಾಗಲೇ ಲಕ್ಷಾಂತರ ಓದುಗರನ್ನೊಳಗೊಂಡ ಈ ಡಿಜಿಟಲ್ ಮಾಧ್ಯಮ ಜನಮನ ಗೆದ್ದಿದೆ. ಡೈಲಿಹಂಟ್ ನಲ್ಲಿಯೂ ಜನರ ಕೈಬೆರಳಿನಲ್ಲೇ ಸಿಗುತ್ತದೆ. ದಾವಣಗೆರೆ, ಕೃಷಿ, ಉದ್ಯೋಗ, ವಾಣಿಜ್ಯ, ಅಪರಾಧ ಜಗತ್ತಿನ, ರಾಷ್ಟ್ರ, ಅಂತಾರಾಷ್ಟ್ರೀಯ ಸೇರಿದಂತೆ ಓದುಗರಿಗೆ ಬೇಕಾದ ಮಾಹಿತಿ ಒದಗಿಸಲಾಗುತ್ತಿದೆ. ಭಾರೀ ಮಟ್ಟದಲ್ಲಿ ಪ್ರತಿಕ್ರಿಯೆಯೂ ಬಂದಿದೆ, ಬರುತ್ತಲೇ ಇದೆ. ಓದುಗರು ನೀಡಿದ ಪ್ರೋತ್ಸಾಹ, ತೋರಿದ ಪ್ರೀತಿ, ನೀಡುತ್ತಿರುವ ಮಾರ್ಗದರ್ಶನವೇ ಈ ಮಾಧ್ಯಮ ಇಷ್ಟೊಂದು ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ. ದಾವಣಗೆರೆಯಲ್ಲಿ ನಂಬರ್ ಒನ್ ನ್ಯೂಸ್ ಪೋರ್ಟಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಷ್ಟೋ ಮಂದಿ ನ್ಯೂಸ್ ಪ್ರಕಟಿಸುವಂತೆ ಹೇಳುತ್ತಲೇ ಇದ್ದಾರೆ. ದಾವಣಗೆರೆ ಜಿಲ್ಲೆ ಮಾತ್ರವಲ್ಲ, ಬೇರೆ ಜಿಲ್ಲೆಗಳಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸ್ಥಳೀಯ ಸಮಸ್ಯೆಗಳು, ಜನರಿಗೆ ಮತ್ತಷ್ಟು ಹತ್ತಿರವಾಗುವ ಸದುದ್ದೇಶದಿಂದ ಸುದ್ದಿಗಳನ್ನು ಪ್ರಕಟಿಸಲಾಗುವುದು. ವೈಯಕ್ತಿಕ ವಿಚಾರ, ಆಸ್ತಿ ವಿಚಾರ, ಗಂಡ ಹೆಂಡತಿ ಸಮಸ್ಯೆಯಂಥ ಸುದ್ದಿಗಳನ್ನ ಬಿತ್ತರಿಸಲಾಗುವುದಿಲ್ಲ. ನಿಜವಾದ ಸಮಸ್ಯೆಗಳಿದ್ದರೆ ಖಂಡಿತವಾಗಿಯೂ ಪ್ರಕಟಿಸಲಾಗುವುದು. ಹಾಗಾಗಿ, ಹೊಸ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ವಾಟ್ಸಪ್ ನಂಬರ್: 96869-97836, ಇ-ಮೇಲ್ ವಿಳಾಸ: suddikshana.com ಈ ವಿಳಾಸಕ್ಕೆ ಕಳುಹಿಸಿಕೊಡಿ. ಅರ್ಹವಿದ್ದ ಸುದ್ದಿಗಳನ್ನು ಖಂಡಿತವಾಗಿಯೂ ಪ್ರಕಟಿಸಲಾಗುತ್ತದೆ. ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment