ಮೀರತ್: ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದ ಮಟ ಮಟ ಮಧ್ಯಾಹ್ನವೇ ಬೆಚ್ಚಿಬೀಳಿಸುವ ‘ಬ್ಲೂ ಡ್ರಮ್’ ಕೊಲೆ ಪ್ರಕರಣದ ವಿಚಾರಣೆ ವೇಳೆ ಮೀರತ್ ಜಿಲ್ಲಾ ನ್ಯಾಯಾಲಯದಲ್ಲಿ ತೀವ್ರ ಹೈಡ್ರಾಮಾ ನಡೆದಿದೆ. ಮೃತ ಸೌರಭ್ ರಜಪೂತ್ ತಾಯಿ ರೇಣು ದೇವಿ, ತನ್ನ ಮಗನ ಕೊಲೆಗಡುಕರಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ನ್ಯಾಯಾಧೀಶರ ಮುಂದೆ ಕಣ್ಣೀರಿಟ್ಟಿದ್ದಾರೆ.
ಘಟನೆಯ ಹಿನ್ನೆಲೆ:
ಮರ್ಚೆಂಟ್ ನೇವಿಯಲ್ಲಿ ಅಧಿಕಾರಿಯಾಗಿದ್ದ ಸೌರಭ್ ರಜಪೂತ್ ಎಂಬುವವರನ್ನು ಅವರ ಪತ್ನಿ ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಎಂಬುವವರು ಸೇರಿ ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿದ್ದರು. ಸೌರಭ್ ದೇಹವನ್ನು 15 ತುಂಡುಗಳಾಗಿ ಕತ್ತರಿಸಿ, ನೀಲಿ ಬಣ್ಣದ ಡ್ರಮ್ನಲ್ಲಿ ಹಾಕಿ ಸಿಮೆಂಟ್ನಿಂದ ಸೀಲ್ ಮಾಡಲಾಗಿತ್ತು.
ನ್ಯಾಯಾಲಯದಲ್ಲಿ ನಡೆದಿದ್ದೇನು?
ವಿಚಾರಣೆಗೆ ಹಾಜರಾದ ಮುಸ್ಕಾನ್ ತನ್ನ ಆರು ತಿಂಗಳ ಮಗುವಿನೊಂದಿಗೆ ಬಂದಿದ್ದಳು. ಇದೇ ವೇಳೆ ಸೌರಭ್ ತಾಯಿ ರೇಣು ದೇವಿ ಮತ್ತು ಸಹೋದರ ರಾಹುಲ್ ಎದುರಾದಾಗ ಪರಿಸ್ಥಿತಿ ಉದ್ವಿಗ್ನಗೊಂಡಿತು.
ಆರೋಪಿಗಳ ವಾದ:
ಪ್ರಕರಣದ ಪ್ರಮುಖ ಆರೋಪಿ ಮುಸ್ಕಾನ್ ತನ್ನ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾಳೆ. ಇನ್ನೊಬ್ಬ ಆರೋಪಿ ಸಾಹಿಲ್ ತನ್ನ ಪರ ಸಾಕ್ಷಿಗಳನ್ನು ಹಾಜರುಪಡಿಸಲು ಅನುಮತಿ ಕೋರಿದ್ದಾನೆ.
ತಾಯಿಯ ಆಕ್ರೋಶ:
“ನನ್ನ ಮಗ ಅವರಿಗೆ ತಿಂಗಳಿಗೆ 50,000 ರೂಪಾಯಿ ನೀಡುತ್ತಿದ್ದ, ಆದರೂ ಆತನನ್ನು ಕೊಂದರು” ಎಂದು ರೇಣು ದೇವಿ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. ಅಲ್ಲದೆ, ಈ ಕೊಲೆಯಲ್ಲಿ ಮುಸ್ಕಾನ್ ಪೋಷಕರು ಮತ್ತು ಒಡಹುಟ್ಟಿದವರ ಕೈವಾಡವೂ ಇದೆ ಎಂದು ಅವರು ಆರೋಪಿಸಿದ್ದಾರೆ.
ಸದ್ಯ ನ್ಯಾಯಾಧೀಶರು ಆರೋಪಿಗಳಿಗೆ ಘಟನೆಗೆ ಸಂಬಂಧಿಸಿದಂತೆ 32 ಪ್ರಶ್ನೆಗಳನ್ನು ಕೇಳಿದ್ದು, ಪ್ರಕರಣದ ಮುಂದಿನ ವಿಚಾರಣೆ ಕುತೂಹಲ ಕೆರಳಿಸಿದೆ.
- Crime News India.
- Dismembered Body Case
- Love Marriage Crime
- Meerut Blue Drum Murder Case
- Meerut Court Hearing
- Merchant Navy Officer Killed
- Murder News Uttar Pradesh
- Muskaan Rajput
- Saurabh Rajput Murder
- ಉತ್ತರ ಪ್ರದೇಶ ಕ್ರೈಂ ನ್ಯೂಸ್.
- ಕ್ರೂರ ಹತ್ಯೆ
- ಪ್ರಿಯಕರನೊಂದಿಗೆ ಪತಿ ಕೊಲೆ
- ಬ್ಲೂ ಡ್ರಮ್ ಕೊಲೆ
- ಮರ್ಚೆಂಟ್ ನೇವಿ ಅಧಿಕಾರಿ ಕೊಲೆ
- ಮೀರತ್ ಕೊಲೆ ಪ್ರಕರಣ
- ಮೀರತ್ ಜಿಲ್ಲಾ ನ್ಯಾಯಾಲಯ
- ಮುಸ್ಕಾನ್ ರಜಪೂತ್
- ಸೌರಭ್ ರಜಪೂತ್ ಹತ್ಯೆ






Leave a comment