ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ಶಾಲೆಯೊಂದರಲ್ಲಿ ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ದಿನಾಚರಣೆಯ ಕ್ವಿಜ್ ಸ್ಪರ್ಧೆಯಲ್ಲಿ ವಿನಾಯಕ್ ದಾಮೋದರ್ ಸಾವರ್ಕರ್ (ವಿ.ಡಿ. ಸವರ್ಕರ್) ಅವರಿಗೆ ಸಂಬಂಧಿಸಿದ ಪ್ರಶ್ನೆಯೊಂದನ್ನು ಸೇರಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.
ಸೋಷಿಯಲ್ ಸೈನ್ಸ್ ಕ್ಲಬ್ ಅಸೋಸಿಯೇಷನ್ ವತಿಯಿಂದ ಮಂಜೇಶ್ವರ ಹಾಗೂ ಕುಂಬಳೆ ಉಪಜಿಲ್ಲೆಯ ಕಿರಿಯ ಪ್ರಾಥಮಿಕ (LP) ಶಾಲೆಗಳ ವಿದ್ಯಾರ್ಥಿಗಳಿಗೆ ನಡೆಸಲಾದ ಕ್ವಿಜ್ ಸ್ಪರ್ಧೆಯಲ್ಲಿ, “ಬ್ರಿಟಿಷರಿಂದ ಅತ್ಯಂತ ಕಠಿಣ ಶಿಕ್ಷೆಗೆ ಗುರಿಯಾದ ಸ್ವಾತಂತ್ರ್ಯ ಹೋರಾಟಗಾರ ಯಾರು?” ಎಂಬ ಟೈ-ಬ್ರೇಕರ್ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ “ವಿ.ಡಿ. ಸವರ್ಕರ್” ಎಂದು ಉತ್ತರಿಸಲಾಗಿತ್ತು.
ಈ ಪ್ರಶ್ನೆಪತ್ರಿಕೆಯನ್ನು ಸಹಾಯಕ ಶಿಕ್ಷಣಾಧಿಕಾರಿಗಳ (AEO) ಕಚೇರಿ ಮೂಲಕ ಶಾಲೆಗಳಿಗೆ ತಲುಪಿಸಲಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳಾದ ಡಿವೈಎಫ್ಐ (DYFI) ಹಾಗೂ ಎಸ್ಎಫ್ಐ (SFI) ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಸಂಘಪರಿವಾರದ ನಾಯಕರನ್ನು ವೈಭವೀಕರಿಸಲು ಮತ್ತು ಇತಿಹಾಸವನ್ನು ತಿಚಿತ್ರಿಸಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿವೆ.
ಘಟನೆ ಸೃಷ್ಟಿಸಿದ ವಿವಾದದ ಬೆನ್ನಲ್ಲೇ, ಕೇರಳ ಸಾರ್ವಜನಿಕ ಶಿಕ್ಷಣ ಸಚಿವ ಎನ್. ಶಂಸುದ್ದೀನ್ ಅವರು ಈ ಕುರಿತು ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
- DYFI protest Kasaragod
- Kasaragod quiz controversy
- Kerala school Independence Day quiz
- Manjeshwaram AEO quiz row
- Minister N Samsudheen report
- SFI Savarkar issue
- VD Savarkar Kerala controversy
- ಎಸ್ಎಫ್ಐ
- ಕಾಸರಗೋಡು ಕ್ವಿಜ್ ವಿವಾದ
- ಕೇರಳ ಶಿಕ್ಷಣ ಇಲಾಖೆ
- ಡಿವೈಎಫ್ಐ ಪ್ರತಿಭಟನೆ
- ವಿ ಡಿ ಸವರ್ಕರ್
- ಸಾರ್ವಜನಿಕ ಶಿಕ್ಷಣ ಸಚಿವ ಎನ್ ಶಂಸುದ್ದೀನ್
- ಸ್ವಾತಂತ್ರ್ಯ ದಿನಾಚರಣೆ ಕ್ವಿಜ್ಕಾಸರಗೋಡು ಕ್ವಿಜ್ ವಿವಾದ





Leave a comment