ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳಿಸಿದ್ದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಬಹುನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆ ಇಂದು (ಆಗಸ್ಟ್ 3) ನಡೆಯುವುದು ಅಂತಿಮಗೊಂಡಿದೆ. ದೆಹಲಿಯಲ್ಲಿ ಕಾಂಗ್ರೆಸ್ ಹೈಕಮಾಂಡ್ನೊಂದಿಗೆ ನಡೆದ ಸರಣಿ ಸಭೆಗಳ ನಂತರ ಅಂತಿಮ ಪಟ್ಟಿಗೆ ಹಸಿರು ನಿಶಾನೆ ಸಿಕ್ಕಿದೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಸದ ರಾಹುಲ್ ಗಾಂಧಿ ಅವರೊಂದಿಗೆ ನಡೆದ ಉನ್ನತ ಮಟ್ಟದ ಚರ್ಚೆಯ ಬಳಿಕ ಎಐಸಿಸಿ (AICC) ಇಂದು ಬೆಳಿಗ್ಗೆ 10 ಗಂಟೆಯ ಸುಮಾರಿಗೆ 20 ನೂತನ ಸಚಿವರ ಅಧಿಕೃತ ಪಟ್ಟಿಯನ್ನು ಬಿಡುಗಡೆ ಮಾಡಲಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಪಟ್ಟಿಯನ್ನು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರಿಗೆ ಸಲ್ಲಿಸಲಿದ್ದು, ಇಂದು ಸಂಜೆ 4 ಗಂಟೆಗೆ ರಾಜಭವನದಲ್ಲಿ ನೂತನ ಸಚಿವರ ಪ್ರಮಾಣ ವಚನ ಸಮಾರಂಭ ನಡೆಯಲಿದೆ.
ರಿಜ್ವಾಲ್ ಅರ್ಷದ್
ಮಂಕಾಳು ವೈದ್ಯ
ಎನ್. ಚಲುವರಾಯಸ್ವಾಮಿ
ಗಾಯತ್ರಿ ಶಾಂತೇಗೌಡ
ವಿಜಯಾನಂದ ಕಾಶಪ್ಪನವರ್
ಪಿ. ಎಂ. ನರೇಂದ್ರ ಸ್ವಾಮಿ
ಶಿವರಾಜ್ ತಂಗಡಗಿ
ರುದ್ರಪ್ಪ ಲಮಾಣಿ
ಟಿ. ರಘುಮೂರ್ತಿ
ಬಿ. ನಾಗೇಂದ್ರ
ಮಧು ಬಂಗಾರಪ್ಪ
ಕೆ. ಎಸ್. ಬಸವಂತಪ್ಪ
ಡಾ. ಅಜಯ್ ಸಿಂಗ್
ಕೆ. ಎಂ. ಶಿವಲಿಂಗೇಗೌಡ
ಬಸವರಾಜ ರಾಯರೆಡ್ಡಿ
ಜಮೀರ್ ಅಹ್ಮದ್
ಸಂತೋಷ್ ಲಾಡ್
ಲಕ್ಷ್ಮಣ ಸವದಿ
ಜಾತಿ ಮತ್ತು ಪ್ರಾದೇಶಿಕ ಸಮತೋಲನಕ್ಕೆ ಆದ್ಯತೆ:
ಪ್ರಸ್ತುತ ಮುಖ್ಯಮಂತ್ರಿ ಸೇರಿದಂತೆ 14 ಸಚಿವರು ಮಾತ್ರ ಕಾರ್ಯನಿರ್ವಹಿಸುತ್ತಿದ್ದು, ಸಂಪುಟದಲ್ಲಿ 20 ಸ್ಥಾನಗಳು ಖಾಲಿ ಉಳಿದಿದ್ದವು. ಜುಲೈ 31 ರಂದೇ ನಡೆಯಬೇಕಿದ್ದ ವಿಸ್ತರಣೆಯು ಪ್ರಾದೇಶಿಕ, ಜಾತಿ ಮತ್ತು ಸಮುದಾಯಗಳ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಮುಂದೂಡಲ್ಪಟ್ಟಿತ್ತು. ಮಾಜಿ ಸಿಎಂ ಸಿದ್ದರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲಾ ಸುದೀರ್ಘ ಚರ್ಚೆ ನಡೆಸಿ ಅಂತಿಮ ರೂಪುರೇಷೆ ಸಿದ್ಧಪಡಿಸಿದ್ದಾರೆ.
- AICC final list
- DK Shivakumar cabinet
- Karnataka Cabinet expansion
- Karnataka ministers list
- Karnataka Politics News
- Lakshmi Hebbalkar
- Laxman Savadi
- Madhu Bangarappa
- Mallikarjun Kharge
- Rahul Gandhi
- Raj Bhavan Bangalore
- Rizwan Arshad
- Santosh Lad
- Sharath Bachegowda
- Swearing-in Ceremony
- ಎಐಸಿಸಿ
- ಕರ್ನಾಟಕ ರಾಜಕೀಯ ಸುದ್ದಿ
- ಕರ್ನಾಟಕ ಸಚಿವ ಸಂಪುಟ ವಿಸ್ತರಣೆ
- ಡಿ. ಕೆ. ಶಿವಕುಮಾರ್
- ನೂತನ ಸಚಿವರ ಪಟ್ಟಿ
- ಪ್ರಮಾಣ ವಚನ ಸಮಾರಂಭ
- ಮಧು ಬಂಗಾರಪ್ಪ
- ಮಲ್ಲಿಕಾರ್ಜುನ ಖರ್ಗೆ
- ರಾಜಭವನ
- ರಾಹುಲ್ ಗಾಂಧಿ
- ರಿಜ್ವಾನ್ ಅರ್ಷದ್
- ಲಕ್ಷ್ಮಣ ಸವದಿ
- ಲಕ್ಷ್ಮಿ ಹೆಬ್ಬಾಳ್ಕರ್
- ಶರತ್ ಬಚ್ಚೇಗೌಡ
- ಸಂತೋಷ್ ಲಾಡ್





Leave a comment