SUDDIKSHANA KANNADA NEWS/ DAVANAGERE/ DATE-08-05-2025
ದಾವಣಗೆರೆ: ನಗರದ ಹದಡಿ ರಸ್ತೆಯ ಕ್ಲಬ್ ವೊಂದರಲ್ಲಿ ರೌಡಿಶೀಟರ್ ಹಾಗೂ ಕಾಂಗ್ರೆಸ್ ಮುಖಂಡ ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಹತ್ಯೆ ಪ್ರಕರಣ ಸಂಬಂಧ ಹತ್ತು ಆರೋಪಿಗಳನ್ನು ಬಂಧಿಸಿರುವುದಾಗಿ ಪೊಲೀಸರು ಅಧಿಕೃತ ಮಾಹಿತಿ ನೀಡಿದ್ದಾರೆ.
ಭಾರತ್ ಕಾಲೋನಿಯ ಬಸಪ್ಪನಗರ ಕಬ್ಬೂರು ನಾಲ್ಕನೇ ಕ್ರಾಸ್ ನ ಟೈಲ್ಸ್ ಕೆಲಸ ಮಾಡುತ್ತಿದ್ದ ಸಂತೋಷ ಅಲಿಯಾಸ್ ಚಾವಳಿ ಸಂತು (28), ಹಳೆಚಿಕ್ಕನಹಳ್ಳಿಯ ಹರಳಯ್ಯ ನಗರದ ನಾಲ್ಕನೇ ಕ್ರಾಸ್ ವಾಸಿ ಪೇಟಿಂಗ್ ಕೆಲಸ ಮಾಡುತ್ತಿದ್ದ ನವೀನ್ ಅಲಿಯಾಸ್ ಸೈಲೆಂಟ್ ನವೀನ್ (21), ಬಾಬು ಜಗಜೀವನ್ ರಾಂ ನಗರದ ಹಮಾಲಿ ಕೆಲಸ ಮಾಡುತ್ತಿದ್ದ ನವೀನ್ ಅಲಿಯಾಸ್ ಬ್ರಾಕಿ ನವೀನ (25), ಭಾರತ್ ಕಾಲೋನಿಯ ಟೈಲ್ಸ್ ಕೆಲಸ ಮಾಡುತ್ತಿದ್ದ ಎ. ಕಾರ್ತಿಕ್ (29), ಬೂದಾಳ್ ರಸ್ತೆಯ ರಾಜ ಅಲಿಯಾಸ್ ತಾರಕ್ (25) ಭಾರತ್ ಕಾಲೋನಿ ಆರ್ ಎಂಸಿ ರಸ್ತೆ ವಾಸಿ ಟೈಲ್ಸ್ ಕೆಲಸ ಮಾಡುತ್ತಿದ್ದ ಬಸವರಾಜ್ ಅಲಿಯಾಸ್ ಪಿಂಗಿ (20), ಹೊಟೇಲ್ ಕೆಲಸ ಮಾಡುತ್ತಿದ್ದ ಮಾರುತಿ (25), ಪ್ರಭು (30), ಮೊದಲ ವರ್ಷದ ಬಿಕಾಂ ವಿದ್ಯಾರ್ಥಿ ಜಯಸೂರ್ಯ ಅಲಿಯಾಸ್ ಪಿ.ಟಿ (20), ಡ್ರೈವರ್ ಕೆಲಸ ಮಾಡುತ್ತಿದ್ದ ಭರತ್ ಅಲಿಯಾಸ್ ಸ್ಲಂ ತಂದೆ (26) ಬಂಧಿತ ಆರೋಪಿಗಳು.
ಕಳೆದ 5ನೇ ತಾರೀಖಿನಂದು ಸಂಜೆ 5ರಿಂದ 5.30 ಗಂಟೆಯ ಮಧ್ಯದ ಅವಧಿಯಲ್ಲಿ ದಾವಣಗೆರೆ ನಗರ ಉಪ ವಿಭಾಗದ ವಿದ್ಯಾನಗರ ಪೊಲೀಸ್ ಠಾಣಾ ಸರಹದ್ದಿನ ದಾವಣಗೆರೆಯ ಹದಡಿ ರಸ್ತೆಯ ಸೋಮೇಶ್ವರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಂಭಾಗದ ತರಳಬಾಳು ನಗರ 16 ನೇ ಕ್ರಾಸ್ ನಲ್ಲಿರುವ # 1341/5 ರ ಪವರ್ ಸ್ಪೋರ್ಟ್ಸ ಅಂಡ್ ರಿಕ್ರಿಯೇಷನ್ ಕ್ಲಬ್ ಕಟ್ಟಡದಲ್ಲಿ ಕಣುಮಾ ಅಲಿಯಾಸ್ ಸಂತೋಷ್ ಕುಮಾರ್ ಇದ್ದರು.
ಈ ವೇಳೆ ಆರೋಪಿತರಾದ ಸಂತೋಷ ಅಲಿಯಾಸ್ ಚಾವಳಿ ಸಂತು ಮತ್ತು ಇತರರು ಸೇರಿ ಸಂತೋಷ ಕುಮಾರ ಕೆ ಅಲಿಯಾಸ್ ಕಣುಮಾನನ್ನು ಹರಿತವಾದ ಆಯುಧಗಳಿಂದ ಹೊಡೆದು ಕೊಲೆ ಮಾಡಿದ್ದರು. ಈ ಬಗ್ಗೆ ವಿದ್ಯಾನಗರ
ಪೊಲೀಸ್ ಠಾಣೆಯಲ್ಲಿ ಪಕರಣ ದಾಖಲಾಗಿತ್ತು.
ಈ ಕೇಸ್ ನಲ್ಲಿ ಕೇಸಿನಲ್ಲಿ ಆರೋಪಿತರನ್ನು ಪತ್ತೆ ಮಾಡಲು ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ ಸಂತೋಷ, ಜಿ. ಮಂಜುನಾಥ ರವರ ಮಾರ್ಗದರ್ಶನದಲ್ಲಿ ದಾವಣಗೆರೆ ನಗರ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಶರಣಬಸವೇಶ್ವರ ಬಿ. ಅವರ ನೇತೃತ್ವದಲ್ಲಿ 5 ಪ್ರತ್ಯೇಕ ತಂಡಗಳನ್ನು ರಚನೆ ಮಾಡಲಾಗಿತ್ತು.
ತಂಡದಲ್ಲಿ ವಿದ್ಯಾನಗರ ಪೊಲೀಸ್ ಠಾಣೆಯ ಪಿಐ ಶಿಲ್ಪಾ ವೈ.ಎಸ್, ಕೆಟಿಜೆ ನಗರ ಪೊಲೀಸ್ ಠಾಣೆಯ ಸುನೀಲ್ ಕುಮಾರ ಹೆಚ್.ಎಸ್, ಆಜಾದ್ ನಗರ ಠಾಣೆಯ ಅಶ್ವಿನ್ ಕುಮಾರ, ಆಜಾದ್ ನಗರ ವೃತ್ತ ಸಿಪಿಐ ಬಾಲಚಂದ್ರನಾಯ್ಕ, ಮಹಿಳಾ
ಠಾಣೆಯ ಪಿಐ ಸೈಯದ್ ದಾದಾ ನೂರ್ ಅಹ್ಮದ್, ಬಸವನಗರ ಪೊಲೀಸ್ ಠಾಣೆಯ ಪಿಐ ನಂಜುಂಡಸ್ವಾಮಿ ಹಾಗೂ ಅಧಿಕಾರಿ – ಸಿಬ್ಬಂದಿಗಳನ್ನು ಒಳಗೊಂಡ ತಂಡಗಳು ಆರೋಪಿತರ ಪತ್ತೆಗಾಗಿ ಕಾರ್ಯಚರಣೆ ನಡೆಸಿತ್ತು.
ಆರೋಪಿತರಲ್ಲಿ ಪ್ರಕರಣದ ಮೊದಲನೇ ಆರೋಪಿ ತಾನು ಕೃತ್ಯಕ್ಕೆ ಉಪಯೋಗಿಸಿದ್ದ ಮೊಬೈಲ್ ಬಿಸಾಕಿದ್ದ ಸ್ಥಳ ತೋರಿಸುವುದಾಗಿ ತಿಳಿಸಿ ದಾವಣಗೆರೆ ನಗರದ ಐಗೂರು ರಸ್ತೆಯಲ್ಲಿರುವ ಮೋರಿಯ ಹತ್ತಿರ ಕರೆದುಕೊಂಡು ಹೋಗಿ ತೋರಿಸಿ ನಿನ್ನೆ ದಿವಸ ಸಂಜೆ ಸಮಯದಲ್ಲಿ ಏಕಾಏಕಿ ಪೊಲೀಸ್ ವಶದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು, ಕೂಡಲೇ ಸಿಬ್ಬಂದಿಯವರ ಸಹಾಯದಿಂದ ಅವನನ್ನು ಹಿಡಿಯಲು ಪ್ರಯತ್ನಿಸಿದ್ದು, ಆರೋಪಿಯು ಕೂಡಲೇ ಕೆಳಗೆ ಬಿದ್ದಿದ್ದ ಹಿಡಿ ಗಾತ್ರದ ಕಲ್ಲಿನಿಂದ ತನಿಖಾಧಿಕಾರಿ ಶರಣಬಸವೇಶ್ವರ ವಿ ಅವರ ಮೇಲೆ ತೂರಿದ್ದು ಸಿಬ್ಬಂದಿ ಬೋಜಪ್ಪ ಕಿಚಡಿ, ಇವರು ಆರೋಪಿತನನ್ನು ಹಿಡಿದುಕೊಳ್ಳಲು ಪ್ರಯತ್ನಿಸಿದಾಗ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಹಿಡಿಗಾತ್ರದ ಕಲ್ಲಿನಿಂದ
ಸಿಬ್ಬಂದಿಯ ತಲೆಗೆ ಗುರಿಯಿಟ್ಟು ಹೊಡೆಯಲು ಪ್ರಯತ್ನಿಸಿದಾಗ ಬೋಜಪ್ಪ ಅವರು ಕೈ ಅಡ್ಡ ಹಿಡಿದಿದ್ದಾರೆ.
ಕಲ್ಲು ಅವರ ಬಲ ಭುಜಕ್ಕೆ ಮತ್ತು ಇನ್ನೊಂದು ಕಲ್ಲು ಬಲ ತೋಳಿಗೆ ಬಡಿದು ರಕ್ತಗಾಯವಾಗಿದ್ದು, ಡಿವೈಎಸ್.ಪಿ ರವರು ಆರೋಪಿತನಿಗೆ ಓಡಿಹೋಗದಂತೆ ಹೇಳಿದರೂ ಸಹ ಆತನು ಅವರ ಮೇಲೆಯೂ ಪುನಃ ಕಲ್ಲು ತೂರಿದ್ದು ಕಲ್ಲು ಡಿವೈಎಸ್.ಪಿ ಎಡಗೈಗೆ ಬಿದ್ದು ಪೆಟ್ಟಾಗಿದ್ದು ಡಿವೈಎಸ್.ಪಿ ಆರೋಪಿತನಿಗೆ ಓಡಿಹೋಗದಂತೆ ಎಚ್ಚರಿಕೆ ಕೊಟ್ಟರೂ ಸಹ ಆತನು ಪೊಲೀಸರಿಂದ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಕಲ್ಲು ತೂರಟ ಮಾಡುತ್ತಾ ಓಡುತ್ತಿದ್ದು, ಡಿವೈಎಸ್.ಪಿ ರವರು ಆತ್ಮರಕ್ಷಣೆಗಾಗಿ ಇಲಾಖೆಯಿಂದ ನೀಡಿರುವ ಸರ್ವೀಸ್ ಪಿಸ್ತೂಲ್ ನಿಂದ ಗಾಳಿಯಲ್ಲಿ ಒಂದು ಸುತ್ತು ಗಂಡು ಹಾರಿಸಿದ್ದಾರೆ. ಆದರೂ ಕೂಡ ಆರೋಪಿತನು ಓಡಿ ಹೋಗಲು ಪ್ರಯತ್ನಿಸಿದ ಕಾರಣ ಆತನ ಕಾಲಿಗೆ ಒಂದು ಸುತ್ತು ಫೈರಿಂಗ್ ಮಾಡಿ ಅವನನ್ನು ವಶಕ್ಕೆ ಪಡೆದು ಆರೋಪಿತ ಸಂತೋಷ ಅಲಿಯಾಸ್ ಚಾವಳಿ ಸಂತು ಈತನನ್ನು ಚಿಕಿತ್ಸೆಯ ಬಗ್ಗೆ ಸಿ.ಜಿ ಆಸ್ಪತ್ರೆಗೆ ದಾಖಲಿಸಿ ಆರೋಪಿತನ ವಿರುದ್ದ ಕ್ರಮ ಕೈಗೊಳ್ಳುವಂತೆ ಡಿವೈಎಸ್.ಪಿ ರವರು ಆರ್.ಎಂ.ಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಬಗ್ಗೆ ಆರ್.ಎಂ.ಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣದ ಆರೋಪಿತರಿಂದ ಕೃತ್ಯಕ್ಕೆ ಉಪಯೋಗಿಸಿದ್ದ ಆಟೋ, ಬೈಕ್ ಗಳು , ಲಾಂಗ್ ಗಳು, ಚಾಕುಗಳನ್ನು ಅಮಾನತ್ತುಪಡಿಸಿಕೊಳ್ಳಲಾಗಿದೆ.
ಆರೋಪಿತರುಗಳನ್ನು ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದು, ಕೊಲೆ ಪ್ರಕರಣದಲ್ಲಿ ಇನ್ನೂ ಕೆಲವು ಆರೋಪಿತರು ಭಾಗಿಯಾಗಿರುವ ಬಗ್ಗೆ ಮಾಹಿತಿ ತಿಳಿದಿದೆ. ಕೊಲೆಗೆ ಉದ್ದೇಶ ಮತ್ತು ಕೊಲೆ ಪ್ರಕರಣದ ಹಿನ್ನೆಲೆ ಹಾಗೂ ಭಾಗಿಯಾಗಿರುವ ವ್ಯಕ್ತಿಗಳ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿರುತ್ತದೆ.