SUDDIKSHANA KANNADA NEWS/ DAVANAGERE/ DATE:21-10-2024
ದಾವಣಗೆರೆ: ಪತ್ನಿ ಕೊಲೆ ಮಾಡಿದ್ದ ಅಪರಾಧಿಗೆ ಮೂರು ವರ್ಷ ಸಾದಾ ಕಾರಾಗೃಹ ಶಿಕ್ಷೆ ಹಾಗೂ ತಲಾ 5 ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ.
2021ರ ನವೆಂಬರ್ 9ರಂದು ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಸುಣಗಾರಕೇರಿ ಗ್ರಾಮದ ಮರಿದೇವಿ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದರು. ನನ್ನ ಪುತ್ರಿ ಚೌಡಮ್ಮ ಅಲಿಯಾಸ್ ಕವಿತಾಳನ್ನು ಜಗಳೂರು ತಾಲೂಕಿನ
ಅಸಗೋಡು ಗ್ರಾಮದ ಮಾರುತಿ ಜೊತೆಗೆ 2013ರ ಸೆಪ್ಬಂಬರ್ 9ರಂದು ಮದುವೆ ಮಾಡಿಕೊಟ್ಟಿದ್ದು 2 ವರ್ಷಗಳವರೆಗೆ ಅನ್ಯೋನ್ಯವಾಗಿದ್ದು ನಂತರ ಚೌಡಮ್ಮ ಅಲಿಯಾಸ್ ಕವಿತಾಳ ಗಂಡ ಮತ್ತು ಅವರ ಮಾವ ಮಾನಸಿಕ ಹಾಗೂ
ದೈಹಿಕವಾಗಿ ಹಿಂಸೆ ನೀಡುತ್ತಿದ್ದರು. ಆರೋಪಿ ಮಾರುತಿಯು ಹೆಂಡತಿಗೆ ಗೊತ್ತಿಲ್ಲದೇ ನೇತ್ರಾವತಿ ಎಂಬುವವರನ್ನು 2016 ರಲ್ಲಿ ಮದುವೆಯಾಗಿದ್ದ. ಈ ವಿಚಾರ ಗೊತ್ತಾಗಿ ಚೌಡಮ್ಮನು ಹರಪನಹಳ್ಳಿ ನ್ಯಾಯಾಲಯದಲ್ಲಿ ಜೀವನಾಂಶಕ್ಕಾಗಿ
ದೂರು ನೀಡಿದ್ದು ಸದರಿ ನ್ಯಾಯಾಲಯವು ಪ್ರತಿ ತಿಂಗಳು 4 ಸಾವಿರ ಹಣ ನೀಡುವಂತೆ ಆದೇಶ ಮಾಡಿತ್ತು.
2021ರ ಅಕ್ಟೋಬರ್ 12ರಂದು ನನ್ನ ಅಳಿಯ ಮಾರುತಿಯು ಪೋನ್ಮಾಡಿ ಚೌಡಮ್ಮಳನ್ನು ಬೆಳಿಗ್ಗೆ 6-00 ಗಂಟೆಗೆ ಬಸ್ಸಿಗೆ ಹತ್ತಿಸಿ ಊರಿಗೆ ಕಳುಹಿಸಿದ್ದೆ ಇನ್ನು ಯಾಕೆ ವಾಪಾಸ್ ಬಂದಿಲ್ಲ ಅಂತ ಕೇಳಿದ್ದು ನಾನು ಅಸಗೋಡು ಗ್ರಾಮಕ್ಕೆ ಬಂದು ಈ ಕುರಿತು ವಿಚಾರಿಸಲಾಗಿ ಯಾರು ಸರಿಯಾಗಿ ಹೇಳಲಿಲ್ಲ. ಆದ್ರೆ, ಅಕ್ಟೋಬರ್ 15ರಂದು ಪೇಪರಿನಲ್ಲಿ ಮಿಟ್ಲಕಟ್ಟೆ ಗ್ರಾಮದ ಚಾನಲ್ನಲ್ಲಿ ಅಪರಿಚಿತ ಮಹಿಳೆಯ ಶವ ದೊರಕಿದೆ. ಶವದ ಬಲಗೈಯಲ್ಲಿ ಕೊಟ್ರಮ್ಮ ಮತ್ತು ದುರ್ಗಪ್ಪ ಎಂಬ ಹಚ್ಚೆ ಗುರುತು ಇದೆ ಎಂತ ತಿಳಿದಿದ್ದು ನಾನು ನಮ್ಮ ಕಡೆಯವರೊಂದಿಗೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ಶವದ ಪೋಟೋಗಳು ಮತ್ತು ಸಿಜಿ ಆಸ್ಪತ್ರಯ ಶವಗಾರದಲ್ಲಿದ್ದ ಮೃತ ಶವವನ್ನು ನೋಡಿ ಗುರುತಿಸಿದ್ದು ಇದು ನನ್ನ ಮಗಳಾದ ಚೌಡಮ್ಮಳ ಶವವಾಗಿದ್ದು ಗೊತ್ತಾಯಿತು.
ನನ್ನ ಮಗಳಿಗೆ ಜೀವನಾಂಶ ಕೊಡಬೇಕಾಗುತ್ತದೆ, ದೈಹಿಕ ಹಾಗೂ ಮಾನಸಿಕ ಹಿಂಸೆನೀಡಿ ನನ್ನ ಅಳಿಯ ಮಾರುತಿಯು ಅಕ್ಟೋಬರ್ 11ರಂದು ಚೌಡಮ್ಮನನ್ನು ತನ್ನ ಬೈಕ್ನಲ್ಲಿ ಕರೆದುಕೊಂಡು ಕುರ್ಕಿ ಗ್ರಾಮದ ಹೊರವಲಯದ ಚಾನಲ್
ಬಳಿ ವಿಸ್ಕಿ ಕುಡಿಸಿ ಕೈ ಕಾಲುಗಳಿಂದ ಹೊಡೆದು ಕುತ್ತಿಗೆ ಹಿಸುಕಿ ಕೊಲೆಮಾಡಿ ಚಾನಲ್ಗೆ ಶವವನ್ನು ಎಸೆದಿದ್ದು, ಕ್ರಮ ಕೈಗೊಳ್ಳಬೇಕು ಎಂದು ಹರಿಹರ ಗ್ರಾಮಾಂತರ ಠಾಣೆ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಮನವಿ ಮಾಡಿದ್ದರು.
ಕೃತ್ಯ ನಡೆದ ಸ್ಥಳದ ಆಧಾರದ ಮೇಲೆ ವರ್ಗಾವಣೆ ನೀಡಿದ್ದನ್ನು ಸ್ವೀಕರಿಸಿ ಹದಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಈ ಪ್ರಕರಣದಲ್ಲಿ ತನಿಖಾಧಿಕಾರಿಯಾದ ಮಾಯಕೊಂಡ ಸಿಪಿಐ ಬಿ. ಮಂಜುನಾಥ್ ತನಿಖೆ ಕೈಗೊಂಡು
ಆರೋಪಿತರ ವಿರುದ್ಧ ಘನ ನ್ಯಾಯಾಲಯಕ್ಕೆ ದೋಷರೋಪಣಾಪಟ್ಟಿ ಸಲ್ಲಿಸಿದ್ದರು.
ಈ ಸಂಬಂಧ 1 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಮಂಜಪ್ಪ ಹನುಮಂತಪ್ಪ ಅಣ್ಣಯ್ಯನವರ್ ಅವರು ಪ್ರಕರಣದ ಮೊದಲ ಆರೋಪಿ ಮಾರುತಿ ಎಂ. ಮೇಲಿನ ಆರೋಪ ಸಾಬೀತಾಗಿದ್ದರಿಂದ
ಅಪರಾಧಿಗೆ 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ಮತ್ತು 5,000 ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಪಿರ್ಯಾದಿ ಪರ ಪರವಾಗಿ ಸರ್ಕಾರಿ ವಕೀಲ ಕೆ. ಎಸ್. ಸತೀಶ್ ಅವರು ವಾದ ಮಂಡಿಸಿದ್ದರು.