Home ದಾವಣಗೆರೆ ಐಐಟಿ ಕಾನ್ಪುರ ವಿದ್ಯಾರ್ಥಿಗಳಿಂದ ಅಪರೂಪದ ಕಾವಡ್ ಯಾತ್ರೆ: ಗಂಗಾಜಲ ತಂದು ಆನಂದೇಶ್ವರ ದೇವರಿಗೆ ಜಲಾಭಿಷೇಕ!
ದಾವಣಗೆರೆನವದೆಹಲಿಬೆಂಗಳೂರು

ಐಐಟಿ ಕಾನ್ಪುರ ವಿದ್ಯಾರ್ಥಿಗಳಿಂದ ಅಪರೂಪದ ಕಾವಡ್ ಯಾತ್ರೆ: ಗಂಗಾಜಲ ತಂದು ಆನಂದೇಶ್ವರ ದೇವರಿಗೆ ಜಲಾಭಿಷೇಕ!

Share
ಕಾನ್ಪುರ
Share

ಕಾನ್ಪುರ: ಶ್ರಾವಣ ಮಾಸದ ಪವಿತ್ರ ಸಂದರ್ಭದಲ್ಲಿ ಐಐಟಿ ಕಾನ್ಪುರದ (IIT Kanpur) ವಿದ್ಯಾರ್ಥಿಗಳು ಮತ್ತು ಪ್ರೊಫೆಸರ್‌ಗಳು ಭಾಗವಹಿಸಿ ವಿಶೇಷ ಕಾವಡ್ ಯಾತ್ರೆಯನ್ನು ಕೈಗೊಂಡಿದ್ದಾರೆ. ಸರಸಯ್ಯ ಘಾಟ್‌ನಿಂದ ಪವಿತ್ರ ಗಂಗಾಜಲವನ್ನು ಹೊತ್ತು ತಂದ ಯಾತ್ರಿಕರು, ಪರಮಟ್‌ನಲ್ಲಿರುವ ಪ್ರಸಿದ್ಧ ಆನಂದೇಶ್ವರ ಮಹಾದೇವ ದೇವಾಲಯಕ್ಕೆ ತೆರಳಿ ಶ್ರೀ ಶಿವನಿಗೆ ಸಾಂಪ್ರದಾಯಿಕ ಜಲಾಭಿಷೇಕ ನೆರವೇರಿಸಿದರು.

ಈ ಕಾರ್ಯಕ್ರಮದಲ್ಲಿ ಪ್ರೊ. ನಚಿಕೇತಾ ತಿವಾರಿ, ಪ್ರೊ. ಅಖಿಲೇಶ್ ವಿರ್ಮನಿ ಸೇರಿದಂತೆ ಅನೇಕ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಶ್ರದ್ಧೆ, ಶಿಸ್ತು ಮತ್ತು ಸಾಂಸ್ಕೃತಿಕ ಒಕ್ಕೂಟವನ್ನು ಪ್ರದರ್ಶಿಸಿದರು. ವಿದ್ಯಾರ್ಥಿಗಳ ಈ ಉಪಕ್ರಮವನ್ನು ಮೆಚ್ಚಿದ ಪ್ರೊ. ನಚಿಕೇತಾ ತಿವಾರಿ, ಮುಂಬರುವ ದಿನಗಳಲ್ಲಿ ಈ ಯಾತ್ರೆಯನ್ನು ಬರಿ ಧಾರ್ಮಿಕ ಚಟುವಟಿಕೆಯಾಗಿರಿಸದೆ, ನೀರು ಸಂರಕ್ಷಣೆ ಮತ್ತು ಜಲ ಸಂಪನ್ಮೂಲ ಜಾಗೃತಿ ಅಭಿಯಾನವನ್ನಾಗಿ ಬೆಳೆಸಲು ಸಲಹೆ ನೀಡಿದರು.

ಇಂದಿನ ಯುವ ಪೀಳಿಗೆ (Gen-Z & Gen-Alpha) ಕೇವಲ ಸೋಶಿಯಲ್ ಮೀಡಿಯಾ ಮತ್ತು ತಂತ್ರಜ್ಞಾನಕ್ಕೆ ಮಾತ್ರ ಸೀಮಿತವಾಗಿರದೆ, ದೇಶದ ಸಂಸ್ಕೃತಿ, ಪರಂಪರೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಬಲ್ಲರು ಎಂಬುದಕ್ಕೆ ಈ ಘಟನೆ ಉದಾಹರಣೆಯಾಗಿದೆ ಎಂದು ವಿದ್ಯಾರ್ಥಿ ಶಿವಂ ತ್ರಿವೇದಿ ತಿಳಿಸಿದರು. ಪೂಜೆಯ ನಂತರ ಮಹಂತ್ ಬಾಲ್ ಯೋಗಿ ಅರುಣ್ ಪುರಿ ಚೈತನ್ಯ ಜೀ ಮಹಾರಾಜ್ ವಿದ್ಯಾರ್ಥಿಗಳಿಗೆ ಆಶೀರ್ವಾದ ನೀಡಿದರು.

Share

Leave a comment

Leave a Reply

Your email address will not be published. Required fields are marked *