Home ದಾವಣಗೆರೆ ಜಿಎಂ ವಿಶ್ವವಿದ್ಯಾಲಯದಲ್ಲಿ ‘ಎಚ್‌ಆರ್ ಕಾನ್‌ಕ್ಲೇವ್ 2026’ ಸಂಭ್ರಮ: ದೇಶದ 75ಕ್ಕೂ ಹೆಚ್ಚು ಎಚ್‌ಆರ್ ದಿಗ್ಗಜರ ಸಂಗಮ !
ದಾವಣಗೆರೆನವದೆಹಲಿಬೆಂಗಳೂರು

ಜಿಎಂ ವಿಶ್ವವಿದ್ಯಾಲಯದಲ್ಲಿ ‘ಎಚ್‌ಆರ್ ಕಾನ್‌ಕ್ಲೇವ್ 2026’ ಸಂಭ್ರಮ: ದೇಶದ 75ಕ್ಕೂ ಹೆಚ್ಚು ಎಚ್‌ಆರ್ ದಿಗ್ಗಜರ ಸಂಗಮ !

Share
ಜಿಎಂ ವಿಶ್ವವಿದ್ಯಾಲಯ
Share

ದಾವಣಗೆರೆ: ಕೃತಕ ಬುದ್ಧಿಮತ್ತೆಯ (AI) ಈ ಕ್ರಾಂತಿಕಾರಿ ಯುಗದಲ್ಲಿ ಯುವ ಪದವೀಧರರ ಭವಿಷ್ಯಕ್ಕೆ ಹೊಸ ದಿಕ್ಸೂಚಿ ತೋರಲು ದಾವಣಗೆರೆಯ ಹೆಮ್ಮೆಯ ಜಿಎಂ ವಿಶ್ವವಿದ್ಯಾಲಯ (GMU) ಸಜ್ಜಾಗಿದೆ! ವಿಶ್ವವಿದ್ಯಾಲಯದ ಆವರಣದಲ್ಲಿ ಆಗಸ್ಟ್ 14, 2026ರ ಶುಕ್ರವಾರದಂದು ಬೆಳಿಗ್ಗೆ 10:30 ರಿಂದ ಅತ್ಯಂತ ವೈಭವೋಪೇತವಾಗಿ ‘ಎಚ್‌ಆರ್ ಕಾನ್‌ಕ್ಲೇವ್ 2026’ (HR Conclave 2026) ಮಹಾಸಮಾವೇಶ ಆಯೋಜಿಸಲಾಗಿದೆ ಎಂದು ಪ್ಲೇಸ್ಮೆಂಟ್ ಆಫೀಸರ್ ವಿಲಾಸ್ ವಾಟ್ವೀ ತಿಳಿಸಿದರು.

ದಾವಣಗೆರೆ ಜಿಲ್ಲಾ ವರದಿಗಾರರ ಕೂಟದಲ್ಲಿ ಆಗಸ್ಟ್ 12,2026 ರಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮುಖ್ಯ ಅತಿಥಿಗಳು ಹಾಗೂ ಪ್ರಮುಖ ವಕ್ತಾರರು:

ಈ ಮಹತ್ವದ ಸಮಾವೇಶಕ್ಕೆ ದಿವ್ಯ ಉಪಸ್ಥಿತಿ ಹಾಗೂ ಮಾರ್ಗದರ್ಶನ ನೀಡಲು ಕಾರ್ಪೊರೇಟ್ ಮತ್ತು ತಂತ್ರಜ್ಞಾನ ಕ್ಷೇತ್ರದ ಪ್ರಮುಖರು ಆಗಮಿಸುತ್ತಿದ್ದಾರೆ:

ಮುಖ್ಯ ಅತಿಥಿಗಳು : ಮಹಾದೇಶ ವಿ, ಡೈರೆಕ್ಟರ್ – ಎಸ್‌ಟಿಪಿಐ (STPI), ಬೆಂಗಳೂರು.

ಮುಖ್ಯ ಭಾಷಣಕಾರರು : ಕೃಷ್ಣಸ್ವಾಮಿ ಸುಬ್ಬರಾವ್ : ಗ್ಲೋಬಲ್ ಹೆಡ್, ಪ್ರಾಡಕ್ಟ್ ಮ್ಯಾನೇಜ್‌ಮೆಂಟ್ & ಸ್ಟ್ರಾಟಜಿ – ಇನ್ಫೋಸಿಸ್ ಫಿನಾಕಲ್.

ಸಂಕೇತ್ ರಾಮಕೃಷ್ಣ ಮೂರ್ತಿ : ಗ್ಲೋಬಲ್ ಹೆಡ್ – ಆಟೋರ್ಯಾಬಿಟ್ (AutoRabit).

ಪ್ಯಾನಲಿಸ್ಟ್‌ಗಳು (ಸಂವಾದಕರು):

75ಕ್ಕೂ ಹೆಚ್ಚು ವಿವಿಧ ಸಂಸ್ಥೆಗಳ ಹೆಚ್.ಆರ್ (HR) ನಾಯಕರು, ಕೈಗಾರಿಕಾ ತಜ್ಞರು, ಶೈಕ್ಷಣಿಕ ತಜ್ಞರು ಮತ್ತು ಇನ್ನೂ ಅನೇಕ ಪ್ರಮುಖರು ಜಿ.ಎಂ. ವಿಶ್ವವಿದ್ಯಾಲಯ, ದಾವಣಗೆರೆಯಲ್ಲಿ ನಡೆಯುತ್ತಿರುವ ಈ ಐತಿಹಾಸಿಕ ಕಾರ್ಯಕ್ರಮದ ಸಂವಾದಕರಾಗಿ ಭಾಗವಹಿಸಲಿದ್ದಾರೆ – ಬೆಂಗಳೂರು ಹಾಗೂ ಇತರ ಮೆಟ್ರೋಪಾಲಿಟನ್ ನಗರಗಳನ್ನು ಹೊರತುಪಡಿಸಿ ನಡೆಯುತ್ತಿರುವ ಪ್ರಮುಖ ಕಾರ್ಯಕ್ರಮ ಇದಾಗಿದೆ.

‘ಎಐ ಯುಗದಲ್ಲಿ ಉದ್ಯೋಗ ಮತ್ತು ಶಿಕ್ಷಣ’ — ವಿಶೇಷ ವಿಷಯಾಧಾರಿತ ಮಂಥನ:

“ಕೃತಕ ಬುದ್ಧಿಮತ್ತೆ (AI) ಯುಗದಲ್ಲಿ ಪದವೀಧರರಿಗೆ ಉದ್ಯೋಗಾವಕಾಶಗಳು, ಕೌಶಲ್ಯಾಭಿವೃದ್ಧಿ ಹಾಗೂ ಶಿಕ್ಷಣದ ಹೊಸ ಮಾದರಿಗಳು” ಎಂಬ ಪರಿಕಲ್ಪನೆಯಡಿಯಲ್ಲಿ ಈ ಬೃಹತ್ ವಿಚಾರಸಂಕಿರಣ ನಡೆಯಲಿದೆ. ಬರೀ ಪಠ್ಯ ಆಧಾರಿತ ಶಿಕ್ಷಣಕ್ಕೆ ಸೀಮಿತವಾಗದೆ, ಕಾರ್ಪೊರೇಟ್ ಜಗತ್ತಿನ ನೈಜ ಸವಾಲುಗಳನ್ನು ಎದುರಿಸಲು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಹಾಗೂ ತಾಂತ್ರಿಕವಾಗಿ ಸಜ್ಜುಗೊಳಿಸುವುದು ಈ ಕಾರ್ಯಕ್ರಮದ ರೂಪುರೇಷೆಯಾಗಿದೆ.

ಈ ಸಮಾವೇಶಕ್ಕೆ ದೇಶದ ಮೂಲೆ ಮೂಲೆಗಳಿಂದ ಬೃಹತ್ ಕಂಪನಿಗಳ ಶ್ರೇಷ್ಠ ಎಚ್‌ಆರ್ ಮುಖ್ಯಸ್ಥರು ಆಗಮಿಸುತ್ತಿದ್ದು, ನವದೆಹಲಿ, ಮುಂಬೈ, ಪುಣೆ, ಹೈದರಾಬಾದ್, ಚೆನ್ನೈ, ಬೆಂಗಳೂರು, ಹುಬ್ಬಳ್ಳಿ ಸೇರಿದಂತೆ ಪ್ರಮುಖ ನಗರಗಳ ಪ್ರಸಿದ್ಧ ಸಂಸ್ಥೆಗಳಿಂದ 75ಕ್ಕೂ ಹೆಚ್ಚು ಎಚ್‌ಆರ್ ನಾಯಕರು (HR Leaders) ಒಂದೇ ಸೂರಿನಡಿ ಒಂದಾಗಲಿದ್ದಾರೆ.

ವಿದ್ಯಾರ್ಥಿಗಳ ಭವಿಷ್ಯಕ್ಕೊಂದು ಭದ್ರ ಬುನಾದಿ:

ಅಸೋಸಿಯೇಟ್ ಪ್ರೊಫೆಸರ್ ಡಾ. ಅರುಣ್ ಕುಮಾರ್ ಕೆ.ಎಂ ವಿವರಣೆ ನೀಡುತ್ತಾ, ಉದ್ಯಮ ರಂಗ (Industry) ಹಾಗೂ ಶಿಕ್ಷಣ ಕ್ಷೇತ್ರದ (Academia) ನಡುವೆ ಬಲವಾದ ಸೇತುವೆ ನಿರ್ಮಿಸುವುದು ಈ ಸಮಾವೇಶದ ಪ್ರಮುಖ ಉದ್ದೇಶ ಎಂದು ಹೇಳಿದರು.

ಭವಿಷ್ಯದ ಕೌಶಲ್ಯಗಳು (Future-Ready Skills):

ಎಐ ತಂತ್ರಜ್ಞಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕಾದ ಹೊಸ ಕೌಶಲ್ಯಗಳ ಕುರಿತು ನೇರ ಸಂವಾದ.

ನೇರ ಮಾರ್ಗದರ್ಶನ:

ದೇಶದ ಪ್ರಮುಖ ಉದ್ಯೋಗದಾತರಿಂದಲೇ ನೇರವಾಗಿ ಉದ್ಯೋಗ ಮಾರುಕಟ್ಟೆಯ ಸ್ಪರ್ಧೆ ಹಾಗೂ ಅವಕಾಶಗಳ ಮಾಹಿತಿ.
ಸಂಶೋಧನೆ ಮತ್ತು ನಾವೀನ್ಯತೆ: ಹೊಸ ಯುಗದ ಸವಾಲುಗಳಿಗೆ ಪರಿಹಾರ ಕಂಡುಕೊಳ್ಳುವ ಚಿಂತನ-ಮಂಥನ.

ವಿದ್ಯಾರ್ಥಿಗಳ ಕನಸುಗಳಿಗೆ ಹೊಸ ರೆಕ್ಕೆ ಕಟ್ಟಿ, ಅವರನ್ನು ಜಾಗತಿಕ ಮಟ್ಟದ ಸವಾಲುಗಳಿಗೆ ಸಜ್ಜುಗೊಳಿಸುವ ನಿಟ್ಟಿನಲ್ಲಿ ಜಿಎಂ ವಿಶ್ವವಿದ್ಯಾಲಯ ಆಯೋಜಿಸಿರುವ ಈ ‘ಎಚ್‌ಆರ್ ಕಾನ್‌ಕ್ಲೇವ್ 2026’ ಶೈಕ್ಷಣಿಕ ವಲಯದಲ್ಲಿ ಹೊಸ ಮೈಲಿಗಲ್ಲಾಗಲಿದೆ ಎಂದರು.

ಗೋಷ್ಠಿಯಲ್ಲಿ ಮಾರ್ಕೆಟಿಂಗ್ ಮತ್ತು ಪ್ರಮೋಷನ್ ವಿಭಾಗದ ಡೀನ್ ಡಾ. ವೀರಗಂಗಾಧರ ಸ್ವಾಮಿ ಟಿ.ಎಂ, ಅಸಿಸ್ಟೆಂಟ್ ಪಿಆರ್ ಓ ಜಿ.ಎಸ್. ವಸಂತ್ ಕುಮಾರ್ ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *