ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರುಳೀಧರ್ ರಿಗೆ “ಉಚಿತ ಭೂಮಿ ಭಾಗ್ಯ”: ವಿಪಕ್ಷ ಕೆಂಡಾಮಂಡಲ!

On: March 9, 2025 12:22 PM
Follow Us:
---Advertisement---

SUDDIKSHANA KANNADA NEWS/ DAVANAGERE/ DATE:09-03-2025

ಜಮ್ಮು ಕಾಶ್ಮೀರ: ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರುಳೀಧರ್ ರಿಗೆ ‘ಉಚಿತ’ ಭೂಮಿ ನೀಡಲಾಗಿಯಾ? ಇಂಥದ್ದೊಂದು ಸುದ್ದಿ ಹೊರ ಬಿದ್ದಿದೆ. ವಿರೋಧಪಕ್ಷಗಳು ಆಡಳಿತ ಪಕ್ಷದ ವಿರುದ್ಧ ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ.

ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರ ಕಂಪನಿಯಾದ ಸಿಲೋನ್ ಬೆವರೇಜಸ್‌ಗೆ ಕಥುವಾ ಜಿಲ್ಲೆಯಲ್ಲಿ 1,600 ಕೋಟಿ ರೂ.ಗಳ ಬಾಟಲ್-ಫಿಲ್ಲಿಂಗ್ ಮತ್ತು ಅಲ್ಯೂಮಿನಿಯಂ ಕ್ಯಾನ್-ತಯಾರಣಾ ಘಟಕಕ್ಕಾಗಿ 25.75 ಎಕರೆಗಳನ್ನು ಮಂಜೂರು ಮಾಡಲಾಗಿದೆ. ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರಿಗೆ ಯಾವ ಆಧಾರದಲ್ಲಿ ಭೂ ಮಂಜೂರಾತಿ ಮಾಡಲಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ವಿರೋಧ ಪಕ್ಷ ಪ್ರಶ್ನಿಸಿದೆ. ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರದಿಂದ ಪ್ರತಿಕ್ರಿಯೆಗೆ ಕಾಂಗ್ರೆಸ್, ಸಿಪಿಐ(ಎಂ) ಆಗ್ರಹಿಸಿದೆ. ಭಾರತೀಯರಲ್ಲದವರಿಗೆ ‘ಉಚಿತವಾಗಿ’ ಭೂಮಿ ನೀಡಿದ ಬಗ್ಗೆ ವಿರೋಧ ಪಕ್ಷ ಕಳವಳ ವ್ಯಕ್ತಪಡಿಸಿದೆ.

ಶ್ರೀಲಂಕಾದ ಮಾಜಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್ ಅವರ ಪಾನೀಯ ಕಂಪನಿಗೆ ಬಾಟಲ್ ಘಟಕ ಸ್ಥಾಪಿಸಲು ಕಥುವಾ ಜಿಲ್ಲೆಯಲ್ಲಿ “ಉಚಿತವಾಗಿ” ಭೂಮಿ ನೀಡಲಾಗಿದೆ ಎಂಬ ಮಾಹಿತಿ ಹೊರ ಬಿದ್ದ ಬಳಿಕ ಜಮ್ಮು ಮತ್ತು ಕಾಶ್ಮೀರದ ವಿರೋಧ ಪಕ್ಷದ ಶಾಸಕರು ಆತಂಕ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ, ಒಮರ್ ಅಬ್ದುಲ್ಲಾ ನೇತೃತ್ವದ ಸರ್ಕಾರವು ಈ ವಿಷಯದ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಸ್ಪಷ್ಟಪಡಿಸಿದೆ.

ವರದಿಗಳ ಪ್ರಕಾರ, ಮುರಳೀಧರನ್ ಅವರ ಕಂಪನಿಯಾದ ಸಿಲೋನ್ ಬೆವರೇಜಸ್‌ಗೆ ಕಥುವಾದಲ್ಲಿ 1,600 ಕೋಟಿ ರೂ.ಗಳ ಬಾಟಲ್-ಫಿಲ್ಲಿಂಗ್ ಮತ್ತು ಅಲ್ಯೂಮಿನಿಯಂ ಕ್ಯಾನ್-ತಯಾರಣಾ ಘಟಕಕ್ಕಾಗಿ 25.75 ಎಕರೆಗಳನ್ನು ಮಂಜೂರು ಮಾಡಲಾಗಿದೆ. ಬಜೆಟ್ ಅಧಿವೇಶನದ ಪ್ರಶ್ನೋತ್ತರ ಅವಧಿಯಲ್ಲಿ ವಿರೋಧ ಪಕ್ಷದ ಕಾಂಗ್ರೆಸ್ ಮತ್ತು ಸಿಪಿಐ(ಎಂ)ನ ಹಲವಾರು ಶಾಸಕರು ಕಳವಳ ವ್ಯಕ್ತಪಡಿಸಿದರು.

ಸಿಪಿಐ (ಎಂ) ಶಾಸಕ ಎಂ.ವೈ. ತಾರಿಗಾಮಿ “ಉಚಿತವಾಗಿ” ಭೂಮಿ ಹಂಚಿಕೆಯನ್ನು ಪ್ರಶ್ನಿಸಿ ಸರ್ಕಾರದಿಂದ ಉತ್ತರವನ್ನು ಕೋರಿದರೆ, ಕಾಂಗ್ರೆಸ್ ಶಾಸಕ ಜಿಎ ಮಿರ್ ಈ ವಿಷಯವನ್ನು “ಗಂಭೀರ” ಎಂದು ಬಣ್ಣಿಸಿದರು.

ಭಾರತೀಯರಲ್ಲದವರಿಗೆ “ಒಂದು ಪೈಸೆ ಖರ್ಚು ಮಾಡದೆ” ಹೇಗೆ ಭೂಮಿ ನೀಡಲಾಗಿದೆ ಎಂಬುದರ ಕುರಿತು ತನಿಖೆ ನಡೆಸಬೇಕು ಎಂದು ಮಿರ್ ಒತ್ತಿ ಹೇಳಿದರು. ವಿರೋಧ ಪಕ್ಷದ ಶಾಸಕರ ಕಳವಳಗಳಿಗೆ ಉತ್ತರಿಸಿದ ಕೃಷಿ ಉತ್ಪಾದನಾ ಸಚಿವ ಜಾವೇದ್ ಅಹ್ಮದ್ ದಾರ್, “ಇದು ಕಂದಾಯ ಇಲಾಖೆಗೆ ಸಂಬಂಧಿಸಿದ ವಿಷಯ. ನಮಗೆ ಯಾವುದೇ ಮಾಹಿತಿ ಇಲ್ಲ, ಈ ಬಗ್ಗೆ ಪರಿಶೀಲಿಸುತ್ತೇವೆ ಎಂದರು.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment