ದಾವಣಗೆರೆ: ನಗರದ ಪಿ.ಬಿ. ರಸ್ತೆಯಲ್ಲಿರುವ ಲಿಕ್ಕರ್ ಸ್ಟೋರ್ ಒಂದರಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿ ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಕೆ.ಟಿ.ಜೆ. ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಭಾರತ್ ಕಾಲೋನಿ ನಿವಾಸಿಗಳಾದ ಕಿರಣ್ಕುಮಾರ್ (ಅಲಿಯಾಸ್ ಅಳಿಲು) ಹಾಗೂ ರೌಡಿ ಆಸಾಮಿ ಆಕಾಶ್ (ಅಲಿಯಾಸ್ ಮುರುಗ) ಬಂಧಿತ ಆರೋಪಿಗಳು.
ಘಟನೆಯ ವಿವರ:
ಸೆ. 17ರಂದು ದಾವಣಗೆರೆ ನಗರದ ಕೆ.ಟಿ.ಜೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪಿ.ಬಿ. ರಸ್ತೆಯ ಲಿಕ್ಕರ್ ಸ್ಟೋರ್ ಬಳಿ ಆಂಜನೇಯ ಎಂಬುವವರ ಮೇಲೆ ಆರೋಪಿಗಳು ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ್ದರು. ಈ ಕುರಿತು ಕೆ.ಟಿ.ಜೆ. ನಗರ ಪೊಲೀಸ್ ಠಾಣೆಯಲ್ಲಿ ಬಿ.ಎನ್.ಎಸ್. ಕಾಯ್ದೆಯ ಕಲಂ 109(1), 115(2), 351(2), 352 ಜೊತೆಗೆ 3(5) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಕಾರ್ಯಾಚರಣೆ ಹಾಗೂ ಜಪ್ತಿ:
ದಾವಣಗೆರೆ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ಪರಮೇಶ್ವರ ಹೆಗಡೆ ಹಾಗೂ ನಗರ ಉಪವಿಭಾಗದ ಡಿವೈಎಸ್ಪಿ ಶರಣಬಸವೇಶ್ವರ ಅವರ ಮಾರ್ಗದರ್ಶನದಲ್ಲಿ, ಕೆ.ಟಿ.ಜೆ. ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮೇಘರಾಜ್ ಎಂ.ವಿ. ನೇತೃತ್ವದ ವಿಶೇಷ ತಂಡವು ತನಿಖೆ ಕೈಗೊಂಡು ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಮಾಡಿದೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಡ್ಯಾಗರ್ (ಚಾಕು) ಹಾಗೂ ಇತರೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪೊಲೀಸ್ ತಂಡಕ್ಕೆ ಪ್ರಶಂಸೆ:
ಆರೋಪಿಗಳನ್ನು ಶೀಘ್ರ ಬಂಧಿಸುವಲ್ಲಿ ಯಶಸ್ವಿಯಾದ ಪಿಐ ಮೇಘರಾಜ್ ಎಂ., ಪಿಎಸ್ಐ ಶಿವಾನಂದ ಧರೆನ್ನವರ್, ಸಿಬ್ಬಂದಿಗಳಾದ ಮಂಜನಗೌಡ, ಮಾರುತಿ, ಹನುಮಂತಪ್ಪ ಮಡ್ಡಿ, ನಿಂಗರಾಜ್, ಸಿದ್ದಪ್ಪ, ರವಿನಾಯ್ಕ್, ಗೌರಮ್ಮ ಹಾಗೂ ಅಮರೇಶ್ ಅವರ ಕಾರ್ಯಾಚರಣೆಯನ್ನು ದಾವಣಗೆರೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಶೇಖರ್ ಹೆಚ್.ಟಿ. ಅವರು ಶ್ಲಾಘಿಸಿ, ಪ್ರಶಂಸಿದ್ದಾರೆ.
- Attempted Murder Davangere
- BNS Case Davangere
- Davangere crime news
- Davangere police arrest
- Kiran Kumar Alilu
- KTJ Nagar Police Station
- PB Road Liquor Store Attack
- Rowdy Sheeter Akash Muruga
- ಕಿರಣ್ ಕುಮಾರ್ ಅಳಿಲು
- ಕೆಟಿಜೆ ನಗರ ಪೊಲೀಸ್ ಠಾಣೆ
- ಕೊಲೆ ಯತ್ನ
- ದಾವಣಗೆರೆ ಕ್ರೈಮ್ ನ್ಯೂಸ್
- ದಾವಣಗೆರೆ ಪೊಲೀಸರು
- ಬಿಎನ್ಎಸ್ ಪ್ರಕರಣ.
- ಮಾರಣಾಂತಿಕ ಹಲ್ಲೆ
- ರೌಡಿ ಆಕಾಶ್ ಮುರುಗ





Leave a comment