ದಾವಣಗೆರೆ: ಜಿಲ್ಲೆಯ ವಿವಿಧೆಡೆ ಇಸ್ಫೀಟ್ ಜೂಜಾಟದ ಅಡ್ಡೆಗಳ ಮೇಲೆ ಪೊಲೀಸರು ಭರ್ಜರಿ ದಾಳಿ ನಡೆಸಿದ್ದಾರೆ. ಪ್ರತ್ಯೇಕ ಸ್ಥಳಗಳಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಒಟ್ಟು 28 ಜನರನ್ನು ವಶಕ್ಕೆ ಪಡೆಯಲಾಗಿದ್ದು, ಅವರಿಂದ 27,260 ರೂ. ನಗದು ಹಣವನ್ನು ಜಪ್ತಿ ಮಾಡಲಾಗಿದೆ.
ಡಿವೈಎಸ್ಪಿಗಳ ಮಾರ್ಗದರ್ಶನದಲ್ಲಿ ಆಯಾ ಠಾಣಾ ವ್ಯಾಪ್ತಿಯ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿ ವರ್ಗದವರು ಖಚಿತ ಮಾಹಿತಿ ಮೇರೆಗೆ ಈ ದಾಳಿಗಳನ್ನು ಸಂಘಟಿಸಿದ್ದರು.
ಸಂತೇಬೆನ್ನೂರು:
ಚಿಕ್ಕಬೆನ್ನೂರು ಗ್ರಾಮದ ಶಾಲೆಯ ಬಳಿ ಸಿಪಿಐ ಶ್ರೀಮತಿ ಮಲ್ಲಮ್ಮ ಚೌಬೆ ನೇತೃತ್ವದಲ್ಲಿ ದಾಳಿ ನಡೆಸಿ, 3 ಜನರನ್ನು ಬಂಧಿಸಿ 6,300 ರೂ. ವಶಪಡಿಸಿಕೊಳ್ಳಲಾಗಿದೆ.
ಬಿಳಿಚೋಡು:
ಅಸಗೋಡು ಹೊಸೂರು ಗ್ರಾಮದಲ್ಲಿ ಪೊಲೀಸ್ ನಿರೀಕ್ಷಕ ನೂರ್ ಅಹಮದ್ ನೇತೃತ್ವದಲ್ಲಿ ದಾಳಿ ನಡೆಸಿ, 5 ಜನರನ್ನು ಬಂಧಿಸಿ 3,210 ರೂ. ಜಪ್ತಿ ಮಾಡಲಾಗಿದೆ.
ಚನ್ನಗಿರಿ:
ಮಲಹಾಳ್ ಗೊಲ್ಲರಹಟ್ಟಿ ರಸ್ತೆ ಪಕ್ಕದಲ್ಲಿ ನಿರೀಕ್ಷಕ ರವೀಶ್ ಕೆ.ಎನ್ ನೇತೃತ್ವದಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿ, ಬರೋಬ್ಬರಿ 14 ಜನರನ್ನು ವಶಕ್ಕೆ ಪಡೆದು 13,150 ರೂ. ಹಣ ವಶಪಡಿಸಿಕೊಳ್ಳಲಾಗಿದೆ.
ಹೊನ್ನಾಳಿ:
ಬೇಲಿ ಮಲ್ಲೂರು-ಅರಕೆರೆ ರಸ್ತೆಯ ಹೊರವಲಯದಲ್ಲಿ ನಿರೀಕ್ಷಕ ಸುನೀಲ್ ಕುಮಾರ ನೇತೃತ್ವದಲ್ಲಿ ದಾಳಿ ನಡೆಸಿ, 6 ಜನರನ್ನು ಬಂಧಿಸಿ 5,200 ರೂ. ವಶಪಡಿಸಿಕೊಳ್ಳಲಾಗಿದೆ.
ಎಲ್ಲಾ ನಾಲ್ಕು ಪ್ರಕರಣಗಳಿಗೆ ಸಂಬಂಧಿಸಿದಂತೆ ಆಯಾ ಪೊಲೀಸ್ ಠಾಣೆಗಳಲ್ಲಿ ಕಾನೂನು ಬಾಹಿರ ಜೂಜಾಟದ ಅಡಿಯಲ್ಲಿ ಮೊಕದ್ದಮೆ ದಾಖಲಿಸಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ.
- Bilichodu gambling
- Cash Seized
- Channagiri police raid
- Davanagere gambling raid
- Gambling arrests
- Honnali gambling case
- Playing cards gambling
- Police raid Karnataka
- Santhebennur police
- ಇಸ್ಫೀಟ್ ಜೂಜಾಟ
- ಕರ್ನಾಟಕ ಜೂಜಾಟ ಪ್ರಕರಣ
- ಚನ್ನಗಿರಿ ಪೊಲೀಸ್ ದಾಳಿ
- ದಾವಣಗೆರೆ ಜೂಜಾಟ ದಾಳಿ
- ನಗದು ವಶ
- ಪೊಲೀಸ್ ದಾಳಿ
- ಬಿಳಿಚೋಡು ಜೂಜಾಟ
- ಸಂತೇಬೆನ್ನೂರು ಪೊಲೀಸ್
- ಹೊನ್ನಾಳಿ ಜೂಜಾಟ ಕೇಸ್





Leave a comment