ನವದೆಹಲಿ: ಬಾಬಾ ರಾಮದೇವ್ ಅವರು ನಟಿ ಹಾಗೂ ಬಿಜೆಪಿ ಸಂಸದೆ ಕಂಗನಾ ರಣಾವತ್ ಅವರಿಗೆ ರಕ್ಷಾ ಬಂಧನದ ಉಡುಗೊರೆ ಮತ್ತು ಸಿಹಿ ತಿನಿಸುಗಳನ್ನು ಅಂಚೆ ಮೂಲಕ ಕಳುಹಿಸಿಕೊಡುವ ಮೂಲಕ ತಮ್ಮ ನಡುವಿನ ವೈರತ್ವಕ್ಕೆ ಅಂತ್ಯಹಾಡಿದ್ದಾರೆ.
‘ವಿವಾದ ಬೇಡ, ಸಂವಾದ ಇರಲಿ’: “ದೇಶದಲ್ಲಿ ಯಾವುದೇ ಕಾರಣಕ್ಕೂ ದ್ವೇಷ ಅಥವಾ ವೈರತ್ವ ಇರಬಾರದು. ಯಾವುದೇ ಭಿನ್ನಾಪ್ರಾಯಗಳಿದ್ದರೂ ಮಾತನಾಡಿ ಬಗೆಹರಿಸಿಕೊಳ್ಳಬೇಕು” ಎಂದು ಬಾಬಾ ರಾಮದೇವ್ ತಿಳಿಸಿದ್ದಾರೆ.
ಸಹೋದರನ ಪ್ರೀತಿ ಸ್ವೀಕರಿಸಿದ ಕಂಗನಾ: ರಾಮದೇವ್ ಅವರ ಈ ನಿರ್ಧಾರವನ್ನು ಪ್ರಶಂಸಿಸಿ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿರುವ ಕಂಗನಾ, “ಹಬ್ಬಗಳು ಹಳೆಯ ತಪ್ಪುಗಳನ್ನು ಮರೆಯಲು ಇರುವುದು. ರಾಮದೇವ್ ಅವರನ್ನು ಹಿರಿಯ ಸಹೋದರನೆಂದು ಭಾವಿಸಿ ಅವರ ಪ್ರೀತಿ ಮತ್ತು ಸಿಹಿಯನ್ನು ಸ್ವೀಕರಿಸುತ್ತಿದ್ದೇನೆ” ಎಂದಿದ್ದಾರೆ.
ವಿವಾದದ ಹಿನ್ನೆಲೆ
ಕಂಗನಾ ರಣಾವತ್ ಅವರು ಜೆನ್ ಝಿ (Gen Z) ಪ್ರತಿಭಟನಾಕಾರರನ್ನು ಉದ್ದೇಶಿಸಿ “ಗಟರ್ ಜನರೇಷನ್” ಎಂದು ಕರೆದಿದ್ದು ಈ ವಿವಾದಕ್ಕೆ ಮುಖ್ಯ ಕಾರಣವಾಗಿತ್ತು. ಇದಕ್ಕೆ ಬಾಬಾ ರಾಮದೇವ್ ಬಹಿರಂಗವಾಗಿ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ಕೆರಳಿದ ಕಂಗನಾ, ಸುಪ್ರೀಂ ಕೋರ್ಟ್ ರಾಮದೇವ್ ಅವರ ಜಾಹೀರಾತು ಪ್ರಕರಣದಲ್ಲಿ ನೀಡಿದ್ದ ಎಚ್ಚರಿಕೆಯನ್ನು ನೆನಪಿಸಿ ತೀವ್ರ ವಾಗ್ದಾಳಿ ನಡೆಸಿದ್ದರು. ಅಂತಿಮವಾಗಿ ರಕ್ಷಾ ಬಂಧನದ ಪವಿತ್ರ ದಿನದಂದು ಇಬ್ಬರೂ ತಮ್ಮ ನಡುವಿನ ಕಟುತನವನ್ನು ಮರೆತು ಒಂದಾಗಿದ್ದಾರೆ.





Leave a comment