SUDDIKSHANA KANNADA NEWS/ DAVANAGERE/ DATE:11-11-2023
ದಾವಣಗೆರೆ (Davanagere): ಟೀಕೆಗಳು ಸಾಯುತ್ತವೆ, ಕೆಲಸಗಳು ಉಳಿಯುತ್ತವೆ. ಇದು ರಾಷ್ರಕವಿ ಡಾ. ಕುವೆಂಪು ಅವರು ಬರೆದ ಈ ಸಾಲು. ಇಂದು- ಮುಂದು ಶಾಶ್ವತವಾಗಿ ಉಳಿಯುವಂತದ್ದು. ಈ ಮಾತು ನಿಜಕ್ಕೂ ಈ ಸಂಸ್ಥೆಗೆ ಅಕ್ಷರಕ್ಷಃ ಒಪ್ಪುತ್ತೆ.
ಕಳೆದ ಐದು ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಸಂಸ್ಥೆ ಮಾಡಿರುವ ಸಮಾಜಸೇವಾ ಕಾರ್ಯಗಳು ಅದ್ವಿತೀಯ, ಸ್ಮರಣೀಯ. ಮಹಿಳೆಯರು, ನಿರುದ್ಯೋಗಿಗಳು, ಬಡವರು, ಆರ್ಥಿಕವಾಗಿ ಸಂಕಷ್ಟವಾಗಿರುವವರ ಪಾಲಿನ ಪ್ರೇರಣೆಯೂ ಹೌದು. ಅದರಲ್ಲಿಯೂ ಸ್ತ್ರೀಕುಲದ ಸಬಲೀಕರಣದತ್ತ ಮಹತ್ತರ ಹೆಜ್ಜೆ ಇಟ್ಟಿದೆ. ಕಷ್ಟದಲ್ಲಿರುವವರಿಗೆ ನೆರವಾಗುವ ಪ್ರೇರಣಾ ಸಾಂಸ್ಕೃತಿಕ ಸಂಸ್ಥೆಯ ಸೃಷ್ಟಿಕರ್ತರು, ಸಂಸ್ಥಾಪಕರು ಚೇತನಾ ಶಿವಕುಮಾರ್. ಆಂಜನೇಯ ದೇವಸ್ಥಾನದ ಹತ್ತಿರ ಇರುವ ಜಾಲಿನಗರದ ಎರಡನೇ ಮುಖ್ಯ ರಸ್ತೆಯ ಎರಡನೇ ತಿರುವಿನಲ್ಲಿ ಪ್ರೇರಣಾ ಸಾಂಸ್ಕೃತಿಕ ಸಂಸ್ಥೆಯ ಕಚೇರಿ ಇದೆ.
READ ALSO THIS STORY:
ನಾಲ್ಕೈದು ತಲೆಮಾರುಗಳಿಂದ ಈ ಗ್ರಾಮದಲ್ಲಿ ಯಾಕೆ ದೀಪಾವಳಿ ಆಚರಿಸೋಲ್ಲ: ಕರಾಳ ದಿನ ಆಗಿರುವುದೇಕೆ ಬೆಳಕಿನ ಹಬ್ಬ…?
ಚೇತನಾ ಶಿವಕುಮಾರ್ ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಸಾಂಸ್ಕೃತಿಕ ರಾಜಧಾನಿ ಎಂದು ಕರೆಯಲ್ಪಡುವ ತರೀಕೆರೆ ತಾಲೂಕಿನ ಅಜ್ಜಂಪುರ ಅರೆಮಲೆನಾಡಿನ ಪುಟ್ಟ ಗ್ರಾಮದಲ್ಲಿ ಜನಿಸಿದವರು. ಶಿವಕುಮಾರ್ ಅವರನ್ನು ವರಿಸಿದ ಬಳಿಕ ದಾವಣಗೆರೆಗೆ ಬಂದು ನೆಲೆಸಿದವರು. ಓದಿದ್ದು ಬೆಳೆದಿದ್ದು ಅಜ್ಜಂಪುರದಲ್ಲಿಯೇ. ಸಮಾಜ ಸೇವೆ ಶುರು ಮಾಡಿದ್ದು ದಾವಣಗೆರೆಯಲ್ಲಿ. ತಂದೆ ಅಣ್ಣೋಜಿರಾವ್ ಮತ್ತು ದೇವಿಕಾ ದಂಪತಿ ಪುತ್ರಿಯಾದ ಚೇತನಾ ಶಿವಕುಮಾರ್ ಅವರ ಮಾನವೀಯ, ಸಮಾಜ ಸೇವೆ, ಸಶಕ್ತಗೊಳಿಸುವ ಯೋಜನೆಗಳು ಸೇರಿದಂತೆ ಜನಪರ ಕೆಲಸಗಳು ಪ್ರತಿಯೊಬ್ಬರಿಗೂ ಮಾದರಿ ಎಂದರೆ ಅತಿಶಯೋಕ್ತಿಯಲ್ಲ.
ದಾವಣಗೆರೆಗೆ ಬಂದ ಬಳಿಕ ಮಹಿಳಾ ಸಂಘಗಗಳಲ್ಲಿ ಸಂಪೂರ್ಣ ತೊಡಗಿಸಿಕೊಂಡವರು. ಸಮಾಜಸೇವೆ, ಆರೋಗ್ಯ ತಪಾಸಣೆ ಶಿಬಿರ, ಬಾಲ್ಯ ವಿವಾಹ ತಡೆಗಟ್ಟುವಿಕೆ, ಪರಿಸರ ಜಾಗೃತಿ ಶಿಬಿರ, ಸ್ತನ ಕ್ಯಾನ್ಸರ್, ಕಾನೂನು ಅರಿವು, ವೃದ್ಧಾಪ್ಯ ವೇತನ, ಗರ್ಭಿಣಿ ಸ್ತ್ರೀಯರಿಗೆ ಪೌಷ್ಠಿಕ ಆಹಾರ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಏರ್ಪಡಿಸಿ ಸೈ ಎನಿಸಿಕೊಂಡವರು.
ಎಷ್ಟೋ ಸಂಘಸಂಸ್ಥೆಗಳು ಹುಟ್ಟುತ್ತವೆ. ಆರ್ಥಿಕವಾಗಿ ಸಬಲೀಕರಣವಾಗುವುದು ಆ ಸಂಸ್ಥೆಗಳೇ. ಆದ್ರೆ, ಪ್ರೇರಣಾ ಸಾಂಸ್ಕೃತಿಕ ಸಂಸ್ಥೆಯು ಇದಕ್ಕೆ ತದ್ವಿರುದ್ಧ. ಇಂದಿಗೂ ನಡೆಸಿಕೊಂಡು ಬಂದಿರುವ ಕಾರ್ಯಗಳು, ಮಾನವೀಯ ಕೆಲಸಗಳು,
ಸಮಾಜ ಸೇವೆಗಳು ಎಲ್ಲಾ ಸಂಘಸಂಸ್ಥೆಗಳಿಗೂ ಮಾದರಿ.
ಪ್ರೇರಣಾ ಪ್ರತಿಭಾ ಪುರಸ್ಕಾರ:
ಎಸ್. ಎಸ್. ಎಲ್. ಸಿ. ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಜಿಲ್ಲಾಮಟ್ಟದ ಪ್ರೇರಣಾ ಪ್ರತಿಭಾ ಪುರಸ್ಕಾರ ನೀಡಿರುವ ಈ ಸಂಸ್ಥೆಯು ಸಾವಿರ ಮಕ್ಕಳಿಗೆ ನೀಡಿರುವ ಹೆಗ್ಗಳಿಕೆ ಹೊಂದಿದೆ. ಬಡವರು, ದೀನದಲಿತರು, ಜಾತಿ ತಾರತಮ್ಯ ಇಲ್ಲದೇ ಎಲ್ಲಾ ಸಮುದಾಯ, ಧರ್ಮದವರಿಗೂ ಸಹಾಯಹಸ್ತ ಚಾಚಿರುವ ಸಮಾಜಸೇವೆಯು ಪ್ರತಿ ಸಂಸ್ಥೆಗೂ ಮಾದರಿ.
ಕೋವಿಡ್ ನಲ್ಲಿ ಅದ್ವಿತೀಯ ಸೇವೆ:
ಕೊರೊನಾ ಬಂದಾಗ ಇಡೀ ವಿಶ್ವವೇ ಸಂಕಷ್ಟದಲ್ಲಿತ್ತು. ನೆರವಿನ ಹಸ್ತ ಚಾಚಿದವರು ಹೆಚ್ಚು. ಅದರಲ್ಲಿಯೂ ಯಾವುದೇ ಪ್ರತಿಫಲಾಕ್ಷೆ ಇಲ್ಲದೇ ನಿಸ್ವಾರ್ಥ ಸೇವೆ ಮಾಡಿದ ಈ ಸಂಸ್ಥೆ ಕಷ್ಟದಲ್ಲಿರುವವರಿಗೆ ನೆರವಾಗುವ ಮೂಲಕ ಮಾನವೀಯತೆ ಸಾಬೀತುಪಡಿಸಿತು. ಸಾವಿರಾರು ಮನೆಗಳಿಗೆ ಆಹಾರ ಕಿಟ್, ಆಹಾರ ಸೇವೆ, ತರಕಾರಿ ಸೇವೆ, ಹಾಲು, ಬಿಸ್ಕೆಟ್, ಸಂಸ್ಥೆಯಿಂದ 1 ಸಾವಿರ ಮಾಸ್ಕ್ ವಿತರಣೆ, ಮಹಿಳೆಯರಿಂದ ತಯಾರಿಸಿ ಜೈಲಿನಲ್ಲಿರುವ ಸಿಬ್ಬಂದಿ ಮತ್ತು ಖೈದಿಗಳಿಗೆ ಮಾಸ್ಕ್ ವಿತರಿಸಲಾಯಿತು. ಟ್ರಾಫಿಕ್ ಪೊಲೀಸರಿಗೆ ಫೇಸ್ ಶೀಲ್ಡ್ ಅನ್ನು 200 ಸಿಬ್ಬಂದಿಗೆ ನೀಡಿದ ಈ ಸಂಸ್ಥೆಯು ಕೋವಿಡ್ ನಲ್ಲಿ ಸಲ್ಲಿಸಿರುವ ಸೇವೆ ನೆನಪಿನಲ್ಲಿ ಉಳಿಯುವಂಥದ್ದು.
ಕೋವಿಡ್ ವಿರುದ್ಧ ಹೋರಾಡಿದ ಸರ್ಕಾರಿ ನೌಕರರು, ಆಶಾ ಕಾರ್ಯಕರ್ತೆಯರು, ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ ಸೇರಿದಂತೆ ಸಾವಿರಾರು ಮಂದಿ ಗುರುತಿಸಿ ಸನ್ಮಾನಿಸಿ, ಗೌರವಿಸಿದೆ. ಮಾತ್ರವಲ್ಲ, ಸಾವಿರಾರು ಮಂದಿಗೆ ಕೊರೊನಾ ಲಸಿಕೆ ಕೊಡಿಸಿದ ಕಳಕಳಿ ಅನನ್ಯ.
ಕೊರೊನಾದ ವೇಳೆಯಲ್ಲಿ ಮನೆಯಿಂದ ಹೊರ ಬರಲು ಜನರು ಹೆದರುವಂಥ ಪರಿಸ್ಥಿತಿಯಲ್ಲಿ ಚೇತನಾ ಶಿವಕುಮಾರ್ ಅವರ ಪತಿ ಶಿವಕುಮಾರ್, ಆನಂದ್, ಸುಶೀಲಮ್ಮ, ಅಕ್ಕಮ್ಮ ಸೇರಿದಂತೆ 15ರಿಂದ 20 ಜನರು ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಕಾರ್ಯ ಮಾಡುವ ಮೂಲಕ ಕರುಣಾಮಯಿಗಳು ಎನಿಸಿಕೊಂಡರು.
ಸಮಾಜ ಸೇವೆಗೆ ಸಂದ ಗೌರವಗಳು:
ಗೋ ಗ್ರೀನ್ ಅರ್ಛ್ ಅವಾರ್ಡ್, ಭಾರತ ವಿಭೂಷಣ ರಾಷ್ಟ್ರ ಪ್ರಶಸ್ತಿ, ಮಹಿಳಾ ಆರೋಗ್ಯ ಜಾಗೃತಿದಗೆ ಅಭಿನಂದನಾ ಪತ್ರ, ಸ್ಟಾರ್ ಸುವರ್ಣ ಚಾನಲ್ ನ ಪ್ರಶಸ್ತಿ ಪತ್ರ, ಕೋವಿಡ್ -19 ನಿರ್ವಹಣೆಗೆ ಜಿಲ್ಲಾ ಪೊಲೀಸ್ ಇಲಾಖೆಯಿಂದ ಪ್ರಶಂಸನೀಯ ಪತ್ರ, ನಮ್ಮ ಬೆಂಗಳೂರು ಮಹಿಳಾ ಸಾಧಕರ ಪ್ರಶಸ್ತಿ, ಲೇಡಿಸ್ ಕ್ಲಬ್ ದಾವಣಗೆರೆ ಸೂಪರ್ ಮ್ಯಾಮ್ ಪ್ರಶಸ್ತಿ, ಹಿಮಾಲಯನ್ ಅಡ್ವೆಂಚರ್ ಅಂಡ್ ನೇಚರ್ ಅಕಾಡೆನಿ ಸಂಸ್ಥೆಯಿಂದ ಅಭಿನಂದನಾ ಪತ್ರ ಸೇರಿದಂತೆ ಅನೇಕ ಪ್ರಶಂಸನೀಯ ಪತ್ರ ಚೇತನಾ ಶಿವಕುಮಾರ್ ಅವರಿಗೆ ಸಿಕ್ಕಿದೆ.
ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ, ಕೋವಿಡ್ -19 ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಪ್ರಶಂಸಾ ಪತ್ರ, ಅಜಾಧಿಕ ಅಮೃತ್ ಮಹೋತ್ಸವದ ಪ್ರಮಾಣ ಪತ್ರ, ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆಯು ಮಹಿಳಾ ಸಾಂಸ್ಕೃತಿಕ ಉತ್ಸವದ ಅಭಿನಂದನಾ ಪತ್ರ, ಅಂತರ್ ರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಮಾಣ ಪತ್ರ, ಶ್ರೀ ಪರಮೇಶ್ವರ ಸ್ವಾಮೀಜಿ ಅವರಿಂದ ಮಹಿಳಾ ರಥೋತ್ಸವದ ಗೌರವ ರಕ್ಷೆ ಪತ್ರ, ದೆಹಲಿಯ ರಾಷ್ಟ್ರೀಯ ವಿಕಾಸ ರತ್ನ ಅವಾರ್ಡ್, ಹಿಂದೂ ರಾಷ್ಟ್ರಸೇನೆ ಗುರು ರಕ್ಷೆ, ನಮ್ಮ ಹೆಮ್ಮೆಯ ಕನ್ನಡಿಗ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ತುಮಕೂರಿನ ಅಖಿಲ ಕರ್ನಾಟಕ ವೀರಶೈವ ಪುರೋಹಿತ ಮಹಾಸಭಾದ ರಾಜ್ಯ, ದ್ವಿತೀಯ ಅಧಿವೇಶನ ಹಾಗೂ ವೀರಶೈವ ಫೆಡರೇಷನ್ ನ ಸಂಸ್ಕಾರಗಳ ವಿಚಾರ ಸಂಕಿರಣದಲ್ಲಿ ಸವಿಸ್ಕೃತಿ ಸ್ವರ್ಣಫಲಕ, ದಾವಣಗೆರೆಯಲ್ಲಿ 67 ನೇ ಕನ್ನಡ ರಾಜ್ಯೋತ್ಸವದ ಅಭಿನಂದನಾ ಪತ್ರ, ದಾವಣಗೆರೆ ಮಹಾನಗರ ಪಾಲಿಕೆಯ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ದಾವಣಗೆರೆ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ರಾಜ್ಯೋತ್ಸವ ಪ್ರಶಸ್ತಿ, ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ಎಂಜಿನಿಯರ್ ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ಕೊಡಮಾಡಲ್ಪಡುವ ಭಾರತ ವಿಭೂಷಣ ರಾಷ್ಟ್ರಪ್ರಶಸ್ತಿ ವಿಶೇಶವಾದದ್ದು. ಆಷಾಢ ಮಾಸದ ಶ್ರೀ ರಂಭಾಪುರಿ ಜಗದ್ಗುರು ಗುರುರಕ್ಷಾ ಫಲಕ ಸೇರಿದಂತೆ ಇನ್ನು ಹಲವು ಪ್ರಶಂಸನೀಯ ಪತ್ರ ಹಾಗೂ ಗೌರವಗಳು ಚೇತನಾ ಶಿವಕುಮಾರ್ ಅವರಿಗೆ ಸಿಕ್ಕಿದೆ.
ಪ್ರೇರಣಾ ಪ್ರತಿಭಾ ಪುರಸ್ಕಾರ:
ಬಡ ವಿದ್ಯಾರ್ಥಿಗಳಿಗೆ ಶಾಲಾ ನೋಟ್ ಬುಕ್ ಮತ್ತು ಬ್ಯಾಗ್ ವಿತರಣೆ ಸುಮಾರು ಮಕ್ಕಳಿಗೆ ನೀಡಿದೆ. ಮಾತ್ರವಲ್ಲ, ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ಪ್ರೇರಣಾ ಪ್ರತಿಭಾ ಪುರಸ್ಕಾರ ನೀಡಲಾಗಿದ್ದು, ಜಿಲ್ಲೆಯ ಸುಮಾರು 2 ಸಾವಿರ ವಿದ್ಯಾರ್ಥಿಗಳಿಗೆ ಈ ಗೌರವ ನೀಡಿದೆ.
ಮಹಿಳೆಯರ ಸಶಕ್ತಿಗೆ ಶ್ರಮ:
ಮಹಿಳೆಯರು, ಯುವತಿಯರ ಸಬಲೀಕರಣ ಬದುಕು, ಆರ್ಥಿಕ ಸಶಕ್ತಗೊಳಿಸಲು ಅನೇಕ ವೃತ್ತಿಪರ ತರಬೇತಿ ನೀಡುತ್ತಿರುವ ಈ ಸಂಸ್ಥೆಯು, ಉಚಿತ ಉದ್ಯಮ ಶೀಲತಾ ವ್ಯಕ್ತಿ ತರಬೇತಿ ಕೇಂದ್ರ, ಟೈಲರಿಂಗ್, ಬ್ಯೂಟಿಷಿಯನ್, ಮೆಹಂದಿ, ಕೈ ಕುಸೂತಿ, ಯುವಕರಿಗೆ ತರಬೇತಿ ಸೇರಿದಂತೆ ಹತ್ತು ಹಲವು ತರಬೇತಿ ನೀಡುವ ಮೂಲಕ ಎಲ್ಲರ ಮನ ಗೆಲ್ಲುವ ಜೊತೆಗೆ ಸಾರ್ಥಕ ಸೇವೆಯನ್ನೂ ಸಲ್ಲಿಸುತ್ತಿದೆ.
ಮೃತರ ಮನೆಗೆ ಅನ್ನಪ್ರಸಾದ:
ಮೃತರ ಮನೆಗೆ ಅನ್ನಪ್ರಸಾದ ಈ ಕಾರ್ಯಕ್ರಮದ ವಿಭಿನ್ನ ಮತ್ತು ವಿಶಿಷ್ಟ. ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಯ 45 ವಾರ್ಡ್ ಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುತ್ತಿದೆ. ಇದಕ್ಕಾಗಿ ವಾರ್ಡ್ ಗೆ ಒಬ್ಬರಂತೆ ನೇಮಕ ಮಾಡಲಾಗಿದೆ. ಶ್ರೀಮಂತರಿಗೆ ಈ ಸೇವೆ ಕಡಿಮೆ. ಕಡು ಬಡವರು, ತುಂಬಾ ಕಷ್ಟದಲ್ಲಿರುವವರ ಮನೆಯಲ್ಲಿ ಯಾರಾದರೂ ಮೃತರಾದರೆ ಅವರ ಮನೆಯಲ್ಲಿನ ಅನ್ನಪ್ರಸಾದ ಸೇವೆಯನ್ನು ಪ್ರೇರಣಾ ಸಂಸ್ಥೆ ವಹಿಸಿಕೊಳ್ಳುತ್ತದೆ. ಇದಕ್ಕೆ ತಗುಲುವ ವೆಚ್ಚವನ್ನೂ ಭರಿಸುತ್ತಿದೆ. ಈ ಮೂಲಕ ಮಾನವೀಯ ಕಾರ್ಯ ಮಾಡುತ್ತಿರುವುದು ನಿಜಕ್ಕೂ ಪ್ರಶಂಸನೀಯ.
ಉಡಿ ತುಂಬುವ ಕಾರ್ಯಕ್ರಮ:
ಜೋಗತಿ ಮಂಜಮ್ಮ ಅವರಿಗೆ ಉಡಿ ತುಂಬುವ ಕಾರ್ಯಕ್ರಮ ಆಯೋಜನೆ ಮಾಡಿದ್ದ ಚೇತನಾ ಶಿವಕುಮಾರ್ ಅವರ ಕಾರ್ಯ ಪ್ರತಿಯೊಬ್ಬರ ಮೆಚ್ಚುಗೆಗೆ ಪಾತ್ರವಾಗಿತ್ತು. ಅದೇ ರೀತಿಯಲ್ಲಿ ಸಾಲು ಮರದ ತಿಮ್ಮಕ್ಕ ಅವರಿಗೂ ಉಡಿ ತುಂಬಿ ಸನ್ಮಾನಿಸಿ ಗೌರವಿಸಿದ್ದರು. ದಾವಣಗೆರೆಗೆ ಯಾರೇ ಕಲಾವಿದರು ಬಂದರೂ ಸನ್ಮಾನಿಸಿ ಗೌರವಿಸುವ ಪ್ರೇರಣಾ ಸಾಂಸ್ಕೃತಿಕ ಸಂಸ್ಥೆಯು ಮುಂದುವರಿಸಿಕೊಂಡು ಬಂದಿದೆ.
ನನ್ನ ತವರು ಮನೆ ಚಿಕ್ಕಮಗಳೂರು ಆದರೂ ಕಲೆ, ಸಾಂಸ್ಕೃತಿಕತೆ, ಆರ್ಥಿಕ ಸಬಲೀಕರಣ, ಸ್ತ್ರೀಯರಿಗೆ ಶಕ್ತಿ, ಅಶಕ್ತರಿಗೆ ನೆರವು, ಸಮಾಜ ಸೇವೆ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲು ಪ್ರೇರಣಾ ಸಾಂಸ್ಕೃತಿಕ ಸಂಸ್ಥೆ ಕಾರಣ. ಈ ಸಂಸ್ಥೆ ಆರಂಭಿಸಿದ ಮೇಲೆ ಜನರಿಂದ ಸಿಗುತ್ತಿರುವ ವಿಶ್ವಾಸ, ಪ್ರೀತಿ ಬಣ್ಣಿಸಲಾಗದು. ಕಲೆ ಗುರುತಿಸುವಂಥ ವೇದಿಕೆ ಇದಾಗಿದೆ. ನಮ್ಮ ಕೈಯಲ್ಲಾದಷ್ಟು ಸಹಾಯ ಮಾಡುತ್ತಿದ್ದೇವೆ. ಬಡವರು, ಆರ್ಥಿಕವಾಗಿ ಹಿಂದುಳಿದವರು, ಸಂಕಷ್ಟದಲ್ಲಿರುವವರ ನೆರವಿಗೆ ಸ್ಪಂದಿಸಿದರೆ ಮನಸ್ಸಿಗೆ ನೆಮ್ಮದಿ. ಸಮಾಜ ಸೇವೆ ಎಂಬುದು ಆಡಂಬರವಲ್ಲ, ಇದೊಂದು ಬದುಕಿನಲ್ಲಿನ ಒಂದು ಭಾಗ. ಅವರ ಆಶೀರ್ವಾದವೇ ನಮಗೆ ಶ್ರೀರಕ್ಷೆ. ನನ್ನೆಲ್ಲಾ ಕೆಲಸಗಳಿಗೆ ಪತಿ ಶಿವಕುಮಾರ್ ರ ಸಂಪೂರ್ಣ ಸಹಕಾರ ಇದೆ. ಇದರಿಂದಲೇ ಇದೆಲ್ಲಾ ಸಾಧ್ಯವಾಗುತ್ತಿರುವುದು ಎನ್ನುತ್ತಾರೆ ಚೇತನಾ ಶಿವಕುಮಾರ್.
ಚೇತನಾ ಶಿವಕುಮಾರ್, ಪ್ರೇರಣಾ ಸಾಂಸ್ಕೃತಿಕ ಸಂಸ್ಥೆ ಸಂಸ್ಥಾಪಕರು
ಒಟ್ಟಿನಲ್ಲಿ ಇಂದಿನ ದಿನಗಳಲ್ಲಿ ಸಂಸ್ಥೆಗಳು ಹೆಚ್ಚಿನದ್ದಾಗಿ ಬೆಳೆಯಬೇಕೆಂಬ ಓಟದಲ್ಲಿ ಹಣ ಹಿಂದೆ ಬೀಳುತ್ತಿರುವುದನ್ನು ನೋಡಿದ್ದೇವೆ. ಆದ್ರೆ, ಪ್ರೇರಣಾ ಸಾಂಸ್ಕೃತಿಕ ಸಂಸ್ಥೆಯು ಸಮಾಜಸೇವೆ, ಮಹಿಳೆಯರ ಸಬಲೀಕರಣದತ್ತ ಪ್ರಮುಖ ಹೆಜ್ಜೆ ಇಟ್ಟಿದ್ದು, ಮತ್ತಷ್ಟು ಎತ್ತರಕ್ಕೆ ಬೆಳೆಯಬೇಕು ಎಂಬ ಎಲ್ಲರದ್ದು.