Home ಕ್ರೈಂ ನ್ಯೂಸ್ ಪ್ರವಾಹಕ್ಕೆ ಶಾಲೆಗಳು ಜಲಾವೃತವಾದರೂ ನಿಲ್ಲದ ಪಾಠ: ದೋಣಿಯನ್ನೇ ಕ್ಲಾಸ್‌ರೂಮ್ ಮಾಡಿದ ಶಿಕ್ಷಕ ಸಾಹಿಬ್!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಪ್ರವಾಹಕ್ಕೆ ಶಾಲೆಗಳು ಜಲಾವೃತವಾದರೂ ನಿಲ್ಲದ ಪಾಠ: ದೋಣಿಯನ್ನೇ ಕ್ಲಾಸ್‌ರೂಮ್ ಮಾಡಿದ ಶಿಕ್ಷಕ ಸಾಹಿಬ್!

Share
ದೋಣಿ
Share

ಕಟಿಹಾರ್ (ಬಿಹಾರ): ಪ್ರಕೃತಿ ವಿಕೋಪಕ್ಕೂ ಸವಾಲೆಸೆದು ಶಿಕ್ಷಣ ಮುಂದುವರಿಸಿರುವ ಹೃದಯಸ್ಪರ್ಶಿ ಘಟನೆಯೊಂದು ಬಿಹಾರದ ಕಟಿಹಾರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ನಿರಂತರ ಮಳೆಯಿಂದಾಗಿ ರಘುನಾಥಪುರ ಗ್ರಾಮದಲ್ಲಿ ಮನೆಗಳು, ರಸ್ತೆಗಳು, ಖಾಸಗಿ ತರಬೇತಿ ಕೇಂದ್ರಗಳು ಮತ್ತು ಶಾಲಾ ಕಟ್ಟಡಗಳು ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿಹೋಗಿವೆ. ಆದರೆ, ಈ ಕಷ್ಟಕರ ಪರಿಸ್ಥಿತಿಯಲ್ಲೂ ಮಕ್ಕಳ ಶಿಕ್ಷಣ ನಿಲ್ಲಬಾರದು ಎಂಬ ಉದ್ದೇಶದಿಂದ ಖಾಸಗಿ ಟ್ಯೂಷನ್ ಶಿಕ್ಷಕರೊಬ್ಬರು ದೋಣಿಯನ್ನೇ ಶಾಲಾ ಕೊಠಡಿಯನ್ನಾಗಿ ಮಾರ್ಪಡಿಸಿದ್ದಾರೆ.

ಖಾಸಗಿ ಟ್ಯೂಷನ್ ಕೇಂದ್ರ ನಡೆಸುತ್ತಿರುವ ಮಹಮ್ಮದ್ ಸಾಹಿಬ್ ಎಂಬ ಶಿಕ್ಷಕರು ಈ ವಿಶಿಷ್ಟ ಹೆಜ್ಜೆಯಿಟ್ಟಿದ್ದಾರೆ. “ಪ್ರವಾಹದ ನೀರು ನಮ್ಮ ತರಬೇತಿ ಕೇಂದ್ರಕ್ಕೆ ನುಗ್ಗಿದಾಗ 2-3 ದಿನ ತರಗತಿಗಳನ್ನು ಸ್ಥಾಪಿಸಲಾಗಲಿಲ್ಲ. ಆದರೆ, ತರಗತಿಗಳನ್ನು ನಿಲ್ಲಿಸಿದರೆ ಮಕ್ಕಳ ಭವಿಷ್ಯ ಹಾಗೂ ಕಲಿಕೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವರು ಕಲಿತದ್ದನ್ನು ಮರೆಯಬಹುದು ಎಂಬ ಆತಂಕವಿತ್ತು. ಹಾಗಾಗಿ ದೋಣಿಯಲ್ಲೇ ತರಗತಿ ಆರಂಭಿಸಲು ನಿರ್ಧರಿಸಿದೆವು” ಎಂದು ಸಾಹಿಬ್ ತಿಳಿಸಿದ್ದಾರೆ.

ಈ ಸಾಹಸಕ್ಕೆ ಕೈಹಾಕುವ ಮೊದಲು ಶಿಕ್ಷಕರು ಸ್ವತಃ ಮಕ್ಕಳ ಮನೆಗಳಿಗೆ ತೆರಳಿ ಪೋಷಕರ ಅನುಮತಿ ಪಡೆದಿದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಶಾಲೆಯ ಪಕ್ಕದಲ್ಲೇ ನೀರು ಆಳವಿಲ್ಲದ ಹಾಗೂ ಶಾಂತವಾಗಿರುವ ಪ್ರದೇಶದಲ್ಲಿ ದಿನಕ್ಕೆ 1 ರಿಂದ 1.5 ಗಂಟೆಗಳ ಕಾಲ ತರಗತಿಗಳನ್ನು ನಡೆಸಲಾಗುತ್ತಿದೆ. ಮಕ್ಕಳನ್ನು ಮನೆಗಳಿಂದ ಸುರಕ್ಷಿತವಾಗಿ ಕರೆತಂದು, ಪಾಠ ಮುಗಿದ ನಂತರ ವಾಪಸ್ ಬಿಡುವ ಜವಾಬ್ದಾರಿಯನ್ನೂ ಶಿಕ್ಷಕರೇ ಹೊತ್ತಿದ್ದಾರೆ.

೫ ಮತ್ತು ೬ ನೇ ತರಗತಿಯ ಸತ್ಯಂ ಕುಮಾರ್ ಮತ್ತು ಅನ್ನು ಕುಮಾರಿ ಎಂಬ ವಿದ್ಯಾರ್ಥಿಗಳು ಮಾತನಾಡಿ, “ಮನೆಗಳಲ್ಲಿ ಮತ್ತು ರಸ್ತೆಗಳಲ್ಲಿ ನೀರಿದ್ದರೂ ನಮಗೆ ಕಲಿಯುವುದು ಮುಖ್ಯವಾಗಿದೆ. ಇಲ್ಲಿ ನೀರು ಆಳವಾಗಿಲ್ಲದಿರುವುದರಿಂದ ನಮಗೆ ಯಾವುದೇ ಭಯವಿಲ್ಲ” ಎಂದು ಧೈರ್ಯದಿಂದ ಹೇಳಿದ್ದಾರೆ.

Share

Leave a comment

Leave a Reply

Your email address will not be published. Required fields are marked *

Related Articles