ಪೋಷಕರ ಮಾತನ್ನು ಮೀರಿ, ಕುಟುಂಬದ ಮರ್ಯಾದೆಯನ್ನು ಪಣಕ್ಕಿಟ್ಟು ಪ್ರೀತಿಸಿದವನನ್ನೇ ನಂಬಿ ಹೋದ ಯುವತಿಯೊಬ್ಬಳಿಗೆ ಪ್ರಿಯಕರನೇ ದ್ರೋಹ ಬಗೆದ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ನಿರ್ಜನ ಅರಣ್ಯ ಪ್ರದೇಶದಲ್ಲಿ ಪ್ರಿಯಕರ ಹಾಗೂ ಆತನ ಸ್ನೇಹಿತರ ದುಷ್ಟ ಕೃತ್ಯದಿಂದ ಯುವತಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾಳೆ.
ಘಟನೆಯ ವಿವರ
ಯುವತಿಯು ತನ್ನ ಪ್ರಿಯಕರನೊಂದಿಗೆ ನಿರ್ಜನ ಅರಣ್ಯ ಪ್ರದೇಶಕ್ಕೆ ತೆರಳಿದ್ದಳು. ಆದರೆ ಆ ಯುವಕ ಮುಂಚಿತವಾಗಿ ತನ್ನ ಸ್ನೇಹಿತರನ್ನೂ ಅಲ್ಲಿಗೆ ಕರೆಸಿಕೊಂಡಿದ್ದನು. ಎಲ್ಲರೂ ಸೇರಿ ಸಮಯ ಕಳೆಯುತ್ತಿದ್ದ ಸಂದರ್ಭದಲ್ಲಿ, ಯುವತಿ ಮದ್ಯದ ಅಮಲಿನಲ್ಲಿ ಪ್ರಜ್ಞೆ ತಪ್ಪಿದ್ದಾಳೆ.
ಇದನ್ನೇ ಅವಕಾಶವನ್ನಾಗಿ ಬಳಸಿಕೊಂಡ ಕಾಮಾಂಧ ಯುವಕರು ಆಕೆಯ ಮೇಲೆ ದೌರ್ಜನ್ಯವೆಸಗಲು ಮುಂದಾಗಿದ್ದಾರೆ. ವಿಶೇಷವೆಂದರೆ, ನಂಬಿ ಬಂದ ಪ್ರಿಯಕರನೇ ಯುವಕರಿಗೆ ಅಡ್ಡಿಪಡಿಸದೆ ಅವರೊಂದಿಗೆ ಕೈಜೋಡಿಸಿದ್ದಾನೆ.
ಕೂಲಿ ಕಾರ್ಮಿಕರ ಮಾನವೀಯತೆ:
ಯುವತಿ ಭಯದಿಂದ ಜೋರಾಗಿ ಕಿರುಚಿಕೊಂಡಾಗ, ಅತ್ತ ಕಡೆಗೆ ಕೆಲಸದ ನಿಮಿತ್ತ ಬರುತ್ತಿದ್ದ ಕೆಲವು ಕೂಲಿ ಕಾರ್ಮಿಕರು ಶಬ್ದ ಕೇಳಿ ಧಾವಿಸಿ ಬಂದಿದ್ದಾರೆ. ಇದನ್ನು ಕಂಡು ಹೆದರಿದ ಯುವಕರು ಆಕೆಯನ್ನು ಬಿಟ್ಟು ಪರಾರಿಯಾಗಿದ್ದಾರೆ. ಮಾನವೀಯತೆ ಮೆರೆದ ಕೂಲಿ ಕಾರ್ಮಿಕರು ಯುವತಿಯನ್ನು ತಮ್ಮ ಗ್ರಾಮಸ್ಥರ ಬಳಿಗೆ ಕರೆದೊಯ್ದು ರಕ್ಷಣೆ ನೀಡಿದ್ದಾರೆ.
ಪೋಷಕರ ಬಳಿ ಕ್ಷಮೆಯಾಚಿಸಿದ ಯುವತಿ:
ಪ್ರಜ್ಞೆ ಮರಳಿ ಬಂದ ಬಳಿಕ ನಡೆದ ಕರಾಳ ಸತ್ಯ ತಿಳಿದ ಗ್ರಾಮಸ್ಥರು, ಆಕೆಯ ಪೋಷಕರಿಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಯಾರ ಮಾತನ್ನೂ ಕೇಳದೆ ಪೋಷಕರನ್ನು ಎದುರಿಸಿ ಹೋದ ಪ್ರಿಯಕರನೇ ತನ್ನ ಜೀವನದೊಂದಿಗೆ ಚೆಲ್ಲಾಟವಾಡಲು ಹೊರಟಿದ್ದನೆಂದು ತಿಳಿದು ಯುವತಿ ಕಣ್ಣೀರಿಟ್ಟಿದ್ದಾಳೆ. ಬಳಿಕ ತನ್ನ ತಪ್ಪಿನ ಅರಿವಾಗಿ ತಂದೆ-ತಾಯಿಯ ಕಾಲುಗಳ ಮೇಲೆ ಬಿದ್ದು ಕ್ಷಮೆ ಯಾಚಿಸಿದ್ದಾಳೆ. ಏನೇ ಆದರೂ ಈ ಕಥೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.





Leave a comment