Home ಕ್ರೈಂ ನ್ಯೂಸ್ ಪತ್ನಿ ಖಾಸಗಿ ವಿಡಿಯೋ, ಆಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್: ಪ್ರೊಟೀನ್ ಪೌಡರ್‌ನಲ್ಲಿ ಸೈನೈಡ್ ಬೆರೆಸಿ ಪತಿ ಕೊಲೆ, ಸಾಧಿಕ್ ಖಾನ್ ಬಲೆಗೆ ಬಿದ್ದ ಬಳಿಕ ಸ್ಫೋಟಕ ವಿಚಾರ ಬೆಳಕಿಗೆ!
ಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಪತ್ನಿ ಖಾಸಗಿ ವಿಡಿಯೋ, ಆಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್: ಪ್ರೊಟೀನ್ ಪೌಡರ್‌ನಲ್ಲಿ ಸೈನೈಡ್ ಬೆರೆಸಿ ಪತಿ ಕೊಲೆ, ಸಾಧಿಕ್ ಖಾನ್ ಬಲೆಗೆ ಬಿದ್ದ ಬಳಿಕ ಸ್ಫೋಟಕ ವಿಚಾರ ಬೆಳಕಿಗೆ!

Share
ಪತ್ನಿ
Share

ಕಾಕಿನಾಡ/ರಾಜಮಂಡ್ರಿ: ಖಾಸಗಿ ವಿಡಿಯೋ ಮತ್ತು ವೀಡಿಯೋ ಸಂಭಾಷಣೆಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಆರೋಪಿ ಸಾಧಿಕ್ ಖಾನ್ ಕಿರುಕುಳ ತಾಳಲಾರದೆ ಸಹಾಯಕ ಎಂಜಿನಿಯರ್ ನೂಕರಾಜು ಹಾಗೂ ಅವರ ಕುಟುಂಬ ಗೋದಾದಾವರಿ ನದಿಗೆ ಜಿಗಿದು ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ತೀವ್ರಗೊಂಡಿದೆ.

ಸೌಜನ್ಯಳ ಪತಿ ಜಗದೀಶ್ ರೆಡ್ಡಿ ಅವರ ಸಾವಿನ ಹಿಂದೆಯೂ ಸಾಧಿಕ್ ಖಾನ್ ಕೈವಾಡ ಇರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಅನಾರೋಗ್ಯದಿಂದ ಆಸ್ಪತ್ರೆಯಲ್ಲಿದ್ದ ಜಗದೀಶ್ ರೆಡ್ಡಿಗೆ ಪ್ರೋಟೀನ್ ಪೌಡರ್‌ನಲ್ಲಿ ಸೈನೈಡ್ ಬೆರೆಸಿ ಕೊಲೆ ಮಾಡಲಾಗಿತ್ತು.

ಪ್ರೋಟೀನ್ ಪೌಡರ್‌ನಲ್ಲಿ ಸೈನೈಡ್ ಬೆರೆಸಿ ಕೃತ್ಯ

ಸೌಜನ್ಯ ಪತಿ ಜಗದೀಶ್ ರೆಡ್ಡಿ ನರ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಹೈದರಾಬಾದ್‌ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಷ್ಟರಲ್ಲಾಗಲೇ ಸೌಜನ್ಯಗೆ ಹತ್ತಿರವಾಗಿದ್ದ ಸಾಧಿಕ್, ಆಕೆಯ ಕುಟುಂಬದ ಆಸ್ತಿಯ ಮೇಲೆ ಕಣ್ಣಿಟ್ಟು ಜಗದೀಶ್ ರೆಡ್ಡಿಯನ್ನು ಕೊಲ್ಲಲು ಸಂಚು ರೂಪಿಸಿದ್ದ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಮರುದಿನವೇ ಜಗದೀಶ್ ರೆಡ್ಡಿಗೆ ಪ್ರೋಟೀನ್ ಪೌಡರ್‌ನಲ್ಲಿ ಸೈನೈಡ್ ಬೆರೆಸಿ ನೀಡಿರುವ ವಿಚಾರ ಪೊಲೀಸ್ ತನಿಖೆಯಲ್ಲಿ ತಿಳಿದುಬಂದಿದೆ.
ಚಿನ್ನದ ವ್ಯಾಪಾರಿಯೊಬ್ಬನಿಂದ ಈ ಸೈನೈಡ್ ಖರೀದಿಸಲಾಗಿತ್ತು ಎನ್ನಲಾಗಿದ್ದು, ಇದನ್ನು ನೇರವಾಗಿ ಸಾಧಿಕ್ ಬೆರೆಸಿದ್ನಾ ಅಥವಾ ಸೌಜನ್ಯ ಹಾಗೂ ಬೇರೆ ಯಾರಾದರೂ ಇದಕ್ಕೆ ಸಹಕರಿಸಿದ್ದಾರಾ ಎಂಬ ಆಯಾಮದಲ್ಲಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣದ ಪ್ರಮುಖ ಮುಖ್ಯಾಂಶಗಳು

ಸೈನೈಡ್ ನೀಡಿ ಕೊಲೆ:

ಸೌಜನ್ಯಳ ಪತಿ ಜಗದೀಶ್ ರೆಡ್ಡಿಗೆ ಪ್ರೋಟೀನ್ ಪೌಡರ್‌ನಲ್ಲಿ ಸೈನೈಡ್ ಬೆರೆಸಿ ಕೊಲೆ ಮಾಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸೈನೈಡ್ ಅನ್ನು ಚಿನ್ನದ ವ್ಯಾಪಾರಿಯೊಬ್ಬನಿಂದ ಖರೀದಿಸಲಾಗಿತ್ತು.

ಆಸ್ತಿ ಕಬಳಿಕೆಯ ಸಂಚು: ಜಗದೀಶ್ ರೆಡ್ಡಿ ಮಗ ರಿಯಾನ್ಶ್ ಹೆಸರಿಗೆ ವಾರಸುದಾರರ ಸರ್ಟಿಫಿಕೇಟ್  ಪಡೆದು, ಸೌಜನ್ಯಳನ್ನು ಮದುವೆಯಾಗುವ ಮೂಲಕ ಇಡೀ ಕುಟುಂಬದ ಆಸ್ತಿಯನ್ನು ವಶಪಡಿಸಿಕೊಳ್ಳಲು ಸಾಧಿಕ್ ಸಂಚು ರೂಪಿಸಿದ್ದ.

ತಲೆಮರೆಸಿಕೊಂಡಿದ್ದ ಆರೋಪಿ: ಘಟನೆಯ ನಂತರ ಗಡ್ಡ ಬೋಳಿಸಿಕೊಂಡು ಶೂಟಿಂಗ್ ತರಬೇತಿಯಲ್ಲಿದ್ದ ಸ್ನೇಹಿತರ ಬಳಿ ಆಶ್ರಯ ಪಡೆದಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕುಟುಂಬದವರ ಆರೋಪ: ಜಗದೀಶ್ ರೆಡ್ಡಿ ತಂದೆಯು ಈ ಕೊಲೆಯಲ್ಲಿ ಸೊಸೆ ಸೌಜನ್ಯಳ ಪಾತ್ರವೂ ಇದೆ ಎಂದು ಆರೋಪಿಸಿದ್ದು, ಮೊಮ್ಮಗ ರಿಯಾನ್ಶ್‌ನ ರಕ್ಷಣೆಗೆ ಮನವಿ ಮಾಡಿದ್ದಾರೆ.

ಜಗದೀಶ್ ಮರಣದ ನಂತರ ಆತನ ಮಗ ರಿಯಾನ್ಶ್ ಹೆಸರಿಗೆ ವಾರಸುದಾರರ ಪ್ರಮಾಣಪತ್ರ ಪಡೆದು, ಸೌಜನ್ಯಳನ್ನು ಮದುವೆಯಾಗುವ ಮೂಲಕ ಇಡೀ ಆಸ್ತಿಯನ್ನು ತನ್ನ ವಶಕ್ಕೆ ಪಡೆಯಲು ಸಾಧಿಕ್ ಯೋಜಿಸಿದ್ದ ಎಂಬುದು ಬೆಳಕಿಗೆ
ಬಂದಿದೆ.

ಸದ್ಯ ತಲೆಮರೆಸಿಕೊಂಡಿದ್ದ ಆರೋಪಿ ಸಾಧಿಕ್ ಖಾನ್‌ನನ್ನು ಪೊಲೀಸರು ಬಂಧಿಸಿದ್ದು, ಈ ಕೊಲೆ ಕೃತ್ಯದಲ್ಲಿ ಸೌಜನ್ಯ ಹಾಗೂ ಇತರರ ಪಾತ್ರದ ಕುರಿತು ತನಿಖೆ ಮುಂದುವರಿಸಿ

Share

Leave a comment

Leave a Reply

Your email address will not be published. Required fields are marked *