Home ದಾವಣಗೆರೆ ಸ್ವಾತಂತ್ರ್ಯ ದಿನೋತ್ಸವ ಮುನ್ನಾ ದಿನ 13 ಯೋಧರಿಗೆ ಮರಣೋತ್ತರ ಕೀರ್ತಿ ಚಕ್ರ, 78 ಶೌರ್ಯ ಪ್ರಶಸ್ತಿಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ
ದಾವಣಗೆರೆನವದೆಹಲಿಬೆಂಗಳೂರು

ಸ್ವಾತಂತ್ರ್ಯ ದಿನೋತ್ಸವ ಮುನ್ನಾ ದಿನ 13 ಯೋಧರಿಗೆ ಮರಣೋತ್ತರ ಕೀರ್ತಿ ಚಕ್ರ, 78 ಶೌರ್ಯ ಪ್ರಶಸ್ತಿಗಳಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅನುಮೋದನೆ

Share
ಸ್ವಾತಂತ್ರ್ಯ
Share

ನವದೆಹಲಿ: 80ನೇ ಸ್ವಾತಂತ್ರ್ಯ ದಿನೋತ್ಸವದ ಮುನ್ನಾದಿನದಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಕ್ಷಣಾ ಪಡೆ ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) ಸಿಬ್ಬಂದಿಗೆ 78 ಶೌರ್ಯ ಪ್ರಶಸ್ತಿಗಳು ಮತ್ತು 89 ‘ಮೆನ್ಷನ್-ಇನ್-ಡಿಸ್ಪ್ಯಾಚಸ್’ (Mention-in-Despatches) ಗೌರವಗಳಿಗೆ ಅನುಮೋದನೆ ನೀಡಿದ್ದಾರೆ. ಇದರಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ 13 ಯೋಧರಿಗೆ ಮರಣೋತ್ತರ ಗೌರವ ಸಲ್ಲಿಕೆಯಾಗಿದೆ.

ಭಾರತೀಯ ಭೂಸೇನೆ, ನೌಕಾಪಡೆ, ವಾಯುಪಡೆ ಹಾಗೂ ಗೃಹ ಸಚಿವಾಲಯದ ವ್ಯಾಪ್ತಿಗೆ ಒಳಪಡುವ ವಿವಿಧ ಸಶಸ್ತ್ರ ಪಡೆಗಳ ಯೋಧರು ತೋರಿದ ಅಪ್ರತಿಮ ಸಾಹಸ ಮತ್ತು ಅತ್ಯುನ್ನತ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.

ಪ್ರಶಸ್ತಿಗಳ ವಿವರ:

ಕೀರ್ತಿ ಚಕ್ರ (9): ಶೌರ್ಯಕ್ಕೆ ನೀಡಲಾಗುವ ದೇಶದ ಎರಡನೇ ಅತ್ಯುನ್ನತ ಶಾಂತಿಕಾಲದ ಪ್ರಶಸ್ತಿಯಾದ ಕೀರ್ತಿ ಚಕ್ರವನ್ನು 9 ಯೋಧರಿಗೆ ಘೋಷಿಸಲಾಗಿದ್ದು, ಇದರಲ್ಲಿ 7 ಜನರಿಗೆ ಮರಣೋತ್ತರ ಗೌರವ ನೀಡಲಾಗಿದೆ. ಲೆಫ್ಟಿನೆಂಟ್ ಕರ್ನಲ್ ಮನೋಜ್ ಫ್ರಾನ್ಸಿಸ್ ಮತ್ತು ಮೇಜರ್ ಜಿತೇಂದ್ರ ರಾಠಿ ಸೇರಿದಂತೆ ಹಲವು ವೀರರು ಈ ಪಟ್ಟಿಯಲ್ಲಿದ್ದಾರೆ.

ಬಾರ್ ಟು ಶೌರ್ಯ ಚಕ್ರ (1): 44 ಅಸ್ಸಾಂ ರೈಫಲ್ಸ್‌ನ ಮೇಜರ್ ಆದಿತ್ಯ ಪ್ರತಾಪ್ ಸಿಂಗ್ ಅವರಿಗೆ ಲಭಿಸಿದೆ.

ಶೌರ್ಯ ಚಕ್ರ (19): 19 ಶೌರ್ಯ ಚಕ್ರ ಪ್ರಶಸ್ತಿಗಳಲ್ಲಿ ಒಬ್ಬರಿಗೆ ಮರಣೋತ್ತರ ಗೌರವ ನೀಡಲಾಗಿದೆ.

ಸೇನಾ ಪದಕಗಳು: 5 ಬಾರ್ ಟು ಸೇನಾ ಪದಕ (ಸಾಹಸ) ಹಾಗೂ 36 ಸೇನಾ ಪದಕಗಳನ್ನು (5 ಮರಣೋತ್ತರ) ಪ್ರಕಟಿಸಲಾಗಿದೆ.

ನೌಕಾ & ವಾಯು ಸೇನಾ ಪದಕಗಳು: ನೌಕಾಪಡೆಯ 3 ಅಧಿಕಾರಿಗಳಿಗೆ ‘ನೌ ಸೇನಾ ಪದಕ’ ಹಾಗೂ ವಾಯುಪಡೆಯ 5 ಸಿಬ್ಬಂದಿಗೆ ‘ವಾಯು ಸೇನಾ ಪದಕ’ಗಳನ್ನು ಪ್ರಕಟಿಸಲಾಗಿದೆ.

ಇದರೊಂದಿಗೆ, ‘ಆಪರೇಷನ್ ರಕ್ಷಕ್’, ‘ಹಿಫಾಜತ್’, ‘ಸ್ನೋ ಲೆಪರ್ಡ್’ ಹಾಗೂ ‘ಚಕ್ರವ್ಯೂಹ್’ ನಂತಹ ಕಠಿಣ ಮಿಲಿಟರಿ ಕಾರ್ಯಾಚರಣೆಗಳಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ 89 ಯೋಧರಿಗೆ ‘ಮೆನ್ಷನ್-ಇನ್-ಡಿಸ್ಪ್ಯಾಚಸ್’ ಗೌರವ ನೀಡಲಾಗಿದೆ. ಇದರಲ್ಲಿ 2 ಪಾರಾ (ಸ್ಪೆಷಲ್ ಫೋರ್ಸಸ್) ವಿಭಾಗದ ‘ಟೈಸನ್’ ಎಂಬ ಸೇನಾ ನಾಯಿಯೂ ಸೇರಿದೆ.

ಮುಂದಿನ ದಿನಗಳಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಈ ಪ್ರಶಸ್ತಿಗಳನ್ನು ಅಧಿಕೃತವಾಗಿ ಪ್ರಧಾನ ಮಾಡಲಿದ್ದಾರೆ.

Share

Leave a comment

Leave a Reply

Your email address will not be published. Required fields are marked *