Home ದಾವಣಗೆರೆ ಹೈದರಾಬಾದ್‌ನಲ್ಲಿ ಲಿವ್-ಇನ್ ರಿಲೇಶನ್‌ಶಿಪ್: ಸ್ವಗ್ರಾಮದಲ್ಲಿ ವಿವಾಹಿತೆಯ ಭೀಕರ ಗೌರವ ಹತ್ಯೆ, ಹೆತ್ತ ತಾಯಿ, ಪತಿ, ತಾತ ಅರೆಸ್ಟ್!
ದಾವಣಗೆರೆಕ್ರೈಂ ನ್ಯೂಸ್ನವದೆಹಲಿಬೆಂಗಳೂರು

ಹೈದರಾಬಾದ್‌ನಲ್ಲಿ ಲಿವ್-ಇನ್ ರಿಲೇಶನ್‌ಶಿಪ್: ಸ್ವಗ್ರಾಮದಲ್ಲಿ ವಿವಾಹಿತೆಯ ಭೀಕರ ಗೌರವ ಹತ್ಯೆ, ಹೆತ್ತ ತಾಯಿ, ಪತಿ, ತಾತ ಅರೆಸ್ಟ್!

Share
ಹೈದರಾಬಾದ್‌
Share

ಶ್ರೀಕಾಕುಳಂ: ಹೈದರಾಬಾದ್‌ಗೆ ಸ್ಪರ್ಧಾತ್ಮಕ ಪರೀಕ್ಷೆಗಳ ಕೋಚಿಂಗ್‌ಗಾಗಿ ಬಂದ ವಿವಾಹಿತ ಮಹಿಳೆಯೊಬ್ಬಳು, ಬೇರೆ ಯುವಕನೊಂದಿಗೆ ಪ್ರೇಮಪಾಶಕ್ಕೆ ಬಿದ್ದ ಕಾರಣಕ್ಕೆ ಆಕೆಯ ಹೆತ್ತ ತಾಯಿ, ಪತಿ ಮತ್ತು ತಾತ ಸೇರಿ ಆಕೆಯನ್ನು ಯೋಜಿತವಾಗಿ ಕೊಲೆ ಮಾಡಿರುವ ಭೀಕರ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ಜಿಲ್ಲೆಯ ಟೆಕ್ಕಲಿ ಮಂಡಲದ ಸೋರ್ಲಿಗಾಂ ಗ್ರಾಮದಲ್ಲಿ ಬೆಳಕಿಗೆ ಬಂದಿದೆ.

ಮೃತರನ್ನು ದುಂಪಲ ಹರಿಣಿ (24) ಎಂದು ಗುರುತಿಸಲಾಗಿದೆ. ಈಕೆಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ತಾಯಿ ಪೈಲ ವಿಜಯಕುಮಾರಿ (A1), ತಾತ ಬಲುಸಾಕು (A2) ಮತ್ತು ಪತಿ ದುಂಪಲ ದಂತೇಶ್ವರ ರಾವ್ (A3) ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ಹಿನ್ನೆಲೆ:

2020ರಲ್ಲಿ ಹರಿಣಿಗೆ ಆಕೆಯ ಸ್ವಂತ ಸೋದರಮಾವ ದಂತೇಶ್ವರ ರಾವ್ ಜೊತೆ ವಿವಾಹವಾಗಿತ್ತು. ಇವರಿಗೆ 4 ವರ್ಷದ ಮಗನಿದ್ದಾನೆ. ಪದವಿ ಮುಗಿಸಿದ ನಂತರ ಹರಿಣಿ ಗ್ರೂಪ್ಸ್ (Groups) ಪರೀಕ್ಷೆಗಳ ತಯಾರಿಗಾಗಿ ಹೈದರಾಬಾದ್‌ಗೆ ತೆರಳಿದ್ದಳು. ಮಗನನ್ನು ತಾಯಿಯ ಬಳಿ ಬಿಟ್ಟು, ಹೈದರಾಬಾದ್‌ನ ಎಸ್‌ಆರ್ ನಗರದ ಹಾಸ್ಟೆಲ್‌ನಲ್ಲಿದ್ದುಕೊಂಡು ಕೋಚಿಂಗ್ ಪಡೆಯುತ್ತಿದ್ದಳು.

ಲಿವ್-ಇನ್ ರಿಲೇಶನ್‌ಶಿಪ್ ಮತ್ತು ಕೌಟುಂಬಿಕ ಕಲಹ:

ಕೋಚಿಂಗ್ ಸೆಂಟರ್‌ನಲ್ಲಿ ಹರಿಣಿಗೆ ಸುಧಾ ನಾಗೇಂದ್ರ ಎಂಬ ಯುವಕನ ಪರಿಚಯವಾಗಿ, ಇಬ್ಬರ ನಡುವೆ ಪ್ರೀತಿ ಬೆಳೆದಿದೆ. ಇಬ್ಬರೂ ಹೈದರಾಬಾದ್‌ನಲ್ಲಿ ಲಿವ್-ಇನ್ ರಿಲೇಶನ್‌ಶಿಪ್‌ನಲ್ಲಿದ್ದರು ಎನ್ನಲಾಗಿದೆ. ಈ ವಿಷಯ ತಿಳಿದ ಪತಿ ಮತ್ತು ತಾಯಿ ಹರಿಣಿಗೆ ಬುದ್ಧಿವಾದ ಹೇಳಿದ್ದಾರೆ. ಆದರೆ, ಹರಿಣಿ ತನ್ನ ಪತಿಗೆ ವಿಚ್ಛೇದನ ನೀಡಿ, ಪ್ರಿಯಕರನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದಾಳೆ. ಅಷ್ಟೇ ಅಲ್ಲದೆ, ತನ್ನ ಕುಟುಂಬದವರು ಕಿರುಕುಳ ನೀಡುತ್ತಿದ್ದಾರೆಂದು ಹೈದರಾಬಾದ್‌ನ ಬಾಲಾನಗರ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲಿಸಿದ್ದಳು.

ಹೃದಯಾಘಾತದ ನಾಟಕ, ಗುಟ್ಟಾಗಿ ಶವಸಂಸ್ಕಾರ!

ಕುಟುಂಬದ ಗೌರವ ಹೋದೀತು ಎಂಬ ಕಾರಣಕ್ಕೆ ಆರೋಪಿಗಳು ಹರಿಣಿಯನ್ನು ಕೊಲೆ ಮಾಡಲು ಸಂಚು ರೂಪಿಸಿದ್ದಾರೆ. ಯೋಜನೆಯಂತೆ ಆಕೆಯನ್ನು ಸ್ವಗ್ರಾಮ ಸೋರ್ಲಿಗಾಂಗೆ ಕರೆಯಿಸಿಕೊಂಡಿದ್ದಾರೆ. ಜೂನ್ 1ರ ರಾತ್ರಿ ತಾಯಿ, ಪತಿ ಮತ್ತು ತಾತ ಸೇರಿ ಮನೆಯಲ್ಲೇ ಹರಿಣಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ. ಕೃತ್ಯದ ವೇಳೆ ಪತಿ ದಂತೇಶ್ವರ ರಾವ್ ಯಾರಿಗೆ ಅನುಮಾನ ಬಾರದಿರಲಿ ಎಂದು ಸಿನಿಮಾಗೆ ಹೋಗಿ ನಾಟಕವಾಡಿದ್ದ ಎನ್ನಲಾಗಿದೆ.

ತದನಂತರ, ಹರಿಣಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ನಂಬಿಸಿ, ಯಾರಿಗೂ ಅನುಮಾನ ಬಾರದಂತೆ ಮುಂಜಾನೆಯೇ ಆಕೆಯ ಅಂತ್ಯಸಂಸ್ಕಾರವನ್ನೂ ಮುಗಿಸಿದ್ದಾರೆ.

ಪೊಲೀಸರ ತನಿಖೆಯಿಂದ ಬಯಲಾದ ಸತ್ಯ:

ಹರಿಣಿಯ ಸಾವಿನ ಬಗ್ಗೆ ಅನುಮಾನಗೊಂಡ ಪೊಲೀಸರು ಮತ್ತು ತಾಂತ್ರಿಕ ಆಧಾರಗಳು (Shakti App) ತನಿಖೆಗೆ ನೆರವಾಗಿದ್ದು, ಇದು ಸಹಜ ಸಾವಲ್ಲ, ಕೊಲೆ ಎಂಬುದು ಪತ್ತೆಯಾಗಿದೆ. ಪೊಲೀಸರು ತೀವ್ರ ವಿಚಾರಣೆ ನಡೆಸಿದಾಗ ಆರೋಪಿಗಳು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು ಅವರನ್ನು ರಿಮಾಂಡ್‌ಗೆ ಒಪ್ಪಿಸಿದ್ದಾರೆ. ಈ ಘಟನೆ ಸದ್ಯ ಆಂಧ್ರಪ್ರದೇಶದಲ್ಲಿ ತೀವ್ರ ಸಂಚಲನ ಮೂಡಿಸಿದೆ.

Share

Leave a comment

Leave a Reply

Your email address will not be published. Required fields are marked *

Recent Posts

Recent Comments

No comments to show.
Related Articles