ಕೋಲ್ಕತ್ತಾ: ಪಶ್ಚಿಮ ಬಂಗಾಳದ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಮುನ್ನ ಬಂಗಾಂನಲ್ಲಿ ನಡೆದ ಬೃಹತ್ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಟಿಎಂಸಿಯ ಪ್ರಸಿದ್ಧ ಘೋಷಣೆಯಾದ “ಮಾ ಮಾತಿ ಮಾನುಷ್” (ತಾಯಿ, ಮಣ್ಣು ಮತ್ತು ಜನರು) ಎಂಬ ತತ್ವಕ್ಕೆ ಪಕ್ಷವು ದ್ರೋಹ ಬಗೆದಿದೆ ಎಂದು ಅವರು ಟೀಕಿಸಿದರು.
ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಹೆಚ್ಚಾಗಿದ್ದು ‘ತಾಯಿ’ ಅಳುತ್ತಿದ್ದಾಳೆ, ರಾಜ್ಯದ ‘ಮಣ್ಣು’ ನುಸುಳುಕೋರರ ಪಾಲಾಗಿದೆ ಮತ್ತು ಸಾಮಾನ್ಯ ‘ಜನರು’ ಭಯದ ನೆರಳಿನಲ್ಲಿ ಬದುಕುತ್ತಿದ್ದಾರೆ ಎಂದು ಮೋದಿ ಕಿಡಿಕಾರಿದರು.
ಬಂಗಾಳದ ಅಭಿವೃದ್ಧಿಗಾಗಿ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಬಿಜೆಪಿಯನ್ನು ಬೆಂಬಲಿಸುವಂತೆ ಅವರು ಜನರಲ್ಲಿ ಮನವಿ ಮಾಡಿದರು.






Leave a comment