Home ದಾವಣಗೆರೆ ಜನನ-ಮರಣ ನೋಂದಣಿ ವಿಳಂಬ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಖಡಕ್ ಎಚ್ಚರಿಕೆ
ದಾವಣಗೆರೆಬೆಂಗಳೂರು

ಜನನ-ಮರಣ ನೋಂದಣಿ ವಿಳಂಬ: ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಖಡಕ್ ಎಚ್ಚರಿಕೆ

Share
ಜನನ
Share

ದಾವಣಗೆರೆ: ಜನನ ಮತ್ತು ಮರಣ ನೋಂದಣಿಯನ್ನು ನಿಗದಿತ ಅವಧಿಯೊಳಗೆ ಮಾಡದ ಅಧಿಕಾರಿಗಳ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಎಚ್ಚರಿಕೆ ನೀಡಿದ್ದಾರೆ.

ನಾಗರಿಕ ನೋಂದಣಿ ಪದ್ಧತಿಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕೆಳಗಿನ ಪ್ರಮುಖ ಸೂಚನೆಗಳನ್ನು ನೀಡಿದರು.

ಶಿಸ್ತು ಕ್ರಮ:

ನೋಂದಣಿ ವಿಳಂಬ ಮಾಡುತ್ತಿರುವ ಪಿಡಿಒಗಳು ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳ ವಿವರವಾದ ವರದಿ ಸಲ್ಲಿಸಲು ಸೂಚನೆ.

ದಾಖಲೆಗಳ ಮಹತ್ವ:

ಜನನ-ಮರಣ ಪ್ರಮಾಣಪತ್ರಗಳು ಗೃಹಲಕ್ಷ್ಮಿ, ವಿಧವಾ ವೇತನ ಮತ್ತು ಪಡಿತರ ಚೀಟಿ ಪರಿಷ್ಕರಣೆಗೆ ಅತ್ಯಗತ್ಯ. ಮರಣ ಹೊಂದಿದವರ ಮಾಹಿತಿ ಅಪ್‌ಡೇಟ್ ಆಗದಿದ್ದರೆ ಸರ್ಕಾರಿ ಹಣ ದುರುಪಯೋಗವಾಗುವ ಸಾಧ್ಯತೆಯಿದೆ.

ಇ-ಜನ್ಮ ತಂತ್ರಾಂಶ:

ಪ್ರತಿಯೊಂದು ನೋಂದಣಿಯ ನಂತರ ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಹೋಗುವಂತೆ ಕ್ರಮ ವಹಿಸಬೇಕು. ನಿರ್ಜೀವ ಜನನಗಳನ್ನೂ ಕಡ್ಡಾಯವಾಗಿ ದಾಖಲಿಸಬೇಕು.

ಬೆಳೆ ಸಮೀಕ್ಷೆ ಲೋಪ:

ಪಾಂಡವರಗೆರೆ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೆಳೆ ಸಮೀಕ್ಷೆಯಲ್ಲಿ ತಪ್ಪು ಮಾಹಿತಿ (ಜೋಳದ ಬದಲು ಅಡಿಕೆ ಎಂದು ನಮೂದು) ನೀಡಿದ ಗ್ರಾಮಲೆಕ್ಕಾಧಿಕಾರಿಗಳ ವಿರುದ್ಧ ಕ್ರಮಕ್ಕೆ ಆದೇಶಿಸಲಾಗಿದೆ.

ಸಭೆಯಲ್ಲಿ ಡಿಹೆಚ್‌ಓ ಡಾ. ಷಣ್ಮುಖಪ್ಪ ಮತ್ತು ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *