ಬೆಂಗಳೂರು: “ಕೋಮುವಾದವು ಸಾಮಾಜಿಕ ಅನ್ಯಾಯದ ರಾಜಕೀಯ ಮಾದರಿ” ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜನರಿಗೆ ತಲ್ವಾರು-ಕತ್ತಿ-ತ್ರಿಶೂಲ ಹಂಚುವುದು, ದೇವಸ್ಥಾನ, ಮಸೀದಿ, ಚರ್ಚ್ ಗಳ ಮೇಲೆ ದಾಳಿ ಮಾಡುವುದು, ಪ್ರಜೆಗಳ ಊಟದ ತಟ್ಟೆಯಲ್ಲಿ, ಮನೆಯ ಫ್ರಿಜ್ ಗಳಲ್ಲಿ ಆಹಾರ ಏನಿದೆ ಎಂದು ಇಣುಕಿ ನೋಡಿ ಹಲ್ಲೆ
ನಡೆಸುವುದು, ಜಾತಿ-ಧರ್ಮದ ಹೆಸರಲ್ಲಿ ದ್ವೇಷ, ಅಸೂಯೆ, ಹಿಂಸೆಯನ್ನು ಹರಡುವುದು ಸಂವಿಧಾನ ವಿರೋಧಿ, ಕಾನೂನು ವಿರೋಧಿ ಮತ್ತು ಜನವಿರೋಧಿಯಾದುದು ಎಂದಿದ್ದಾರೆ.
ಇದು ‘’ಸಾಮಾಜಿಕ ಅನ್ಯಾಯ’’ದ ರಾಜಕೀಯ ಮಾದರಿ. ವಿಪರ್ಯಾಸದ ಸಂಗತಿಯೆಂದರೆ ಈ ರೀತಿ ದ್ವೇಷ ಹಂಚುವುದರಲ್ಲಿ ನಿರತರಾಗಿರುವ ಮತ್ತು ಜಾತಿ ಧರ್ಮಗಳ ನಡುವೆ ಕಲಹ ಹುಟ್ಟಿಸುತ್ತಿರುವ ಪಕ್ಷ-ಸಂಘಟನೆಗಳೆಲ್ಲ ಇಂದು
ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿವೆ ಎಂದು ಸಿದ್ದರಾಮಯ್ಯ ಪೋಸ್ಟ್ ನಲ್ಲಿ ಹೇಳಿದ್ದಾರೆ.
- Anti-Constitutional
- Anti-People Policy
- Communalism
- Guarantee Schemes
- Human Rights
- Karnataka Politics
- Political Model
- Politics of Hate
- Religious Harmony
- Social Equality.
- Social Injustice
- ಕರ್ನಾಟಕ ರಾಜಕೀಯ
- ಕೋಮುವಾದ
- ಗ್ಯಾರಂಟಿ ಯೋಜನೆಗಳು
- ಜನವಿರೋಧಿ ನೀತಿ
- ದ್ವೇಷದ ರಾಜಕೀಯ
- ಧಾರ್ಮಿಕ ಸಾಮರಸ್ಯ
- ಮಾನವ ಹಕ್ಕುಗಳು
- ರಾಜಕೀಯ ಮಾದರಿ
- ಸಂವಿಧಾನ ವಿರೋಧಿ
- ಸಾಮಾಜಿಕ ಅನ್ಯಾಯ
- ಸಿದ್ದರಾಮಯ್ಯ





Leave a comment