Home ಕ್ರೈಂ ನ್ಯೂಸ್ ದಾವಣಗೆರೆಯ ಡ್ರಗ್ಸ್ ದಂಧೆಗೆ ಕಾಂಗ್ರೆಸ್ ಸಚಿವರ ಶ್ರೀರಕ್ಷೆ! ಬಿಜೆಪಿ ಗಂಭೀರ ಆರೋಪ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

ದಾವಣಗೆರೆಯ ಡ್ರಗ್ಸ್ ದಂಧೆಗೆ ಕಾಂಗ್ರೆಸ್ ಸಚಿವರ ಶ್ರೀರಕ್ಷೆ! ಬಿಜೆಪಿ ಗಂಭೀರ ಆರೋಪ

Share
ದಾವಣಗೆರೆ
Share

SUDDIKSHANA KANNADA NEWS/DAVANAGERE/DATE:23_12_2025

ಬೆಂಗಳೂರು: ದಾವಣಗೆರೆಯ ಡ್ರಗ್ಸ್ ದಂಧೆಗೆ ಕಾಂಗ್ರೆಸ್ ಸಚಿವರ ಶ್ರೀರಕ್ಷೆ ಇದೆ ಎಂದು ರಾಜ್ಯ ಬಿಜೆಪಿ ಗಂಭೀರ ಆರೋಪ ಮಾಡಿದೆ.

READ ALSO THIS STORY: ದಾವಣಗೆರೆಯಲ್ಲಿ 1 ಲಕ್ಷ ನಗದು ಸೇರಿ 11 ಲಕ್ಷ ರೂ. ಮೌಲ್ಯದ ಡ್ರಗ್ಸ್ ವಶ: ಆರೋಪಿಗಳ ಹಿನ್ನೆಲೆ ಬಗ್ಗೆ ಪೊಲೀಸರಿಂದ ಮಹತ್ವದ ಮಾಹಿತಿ!

ದಾವಣಗೆರೆ

ಈ ಸಂಬಂಧ ವಿಡಿಯೋವೊಂದನ್ನು ಹಂಚಿಕೊಂಡಿರುವ ಬಿಜೆಪಿಯು ದಾವಣಗೆರೆಯಲ್ಲಿ ಬೇರೂರಿರುವ ಡ್ರಗ್ಸ್ ದಂಧೆಯ ಹಿಂದೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಆಪ್ತ ಶಾಮನೂರು ವೇದಮೂರ್ತಿ ಹಸ್ತವಿರುವುದು ಸ್ಪಷ್ಟವಾಗಿದೆ ಎಂದು ಹೇಳಿದೆ.

READ ALSO THIS STORY: ಡ್ರಗ್ಸ್ ಕೇಸಲ್ಲಿ ದಾವಣಗೆರೆ ಕಾಂಗ್ರೆಸ್ ಮುಖಂಡ, ರಿಯಲ್ ಎಸ್ಟೇಟ್ ಉದ್ಯಮಿ ಶಾಮನೂರು ವೇದಮೂರ್ತಿ ಸೇರಿ ನಾಲ್ವರ ಬಂಧನ!

ಸಿಎಂ ಸಿದ್ದರಾಮಯ್ಯ ಅವರೇ, ಡಿಸಿಎಂ ಡಿ. ಕೆ. ಶಿವಕುಮಾರ್ ಅವರೇ, ಗೃಹ ಸಚಿವ ಡಾ. ಪರಮೇಶ್ವರ್ ಅವರೇ ನಿಮ್ಮ ಸಂಪುಟದ ಸಹೋದ್ಯೋಗಿಯ ಆಪ್ತನೇ ಡ್ರಗ್ಸ್ ಮಾಫಿಯಾದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ ಅಂದರೆ, ಇದರಲ್ಲಿ ಸಚಿವರ ಪಾಲೆಷ್ಟು? ಎಂದು ಬಿಜೆಪಿ ಪ್ರಶ್ನಿಸಿದೆ.

ರಾಜ್ಯದ 1749 ಊರುಗಳು ಸರ್ಕಾರಿ ಬಸ್‌ಗಳ ಮುಖ ನೋಡದೇ ಇರುವುದು ಕಾಂಗ್ರೆಸ್‌ ಆಡಳಿತ ವ್ಯವಸ್ಥೆಯ ದೌರ್ಭಾಗ್ಯ. ಕಾಂಗ್ರೆಸ್‌ ಸರ್ಕಾರ ಜಾರಿಗೊಳಿಸಿರುವ ಶಕ್ತಿ ಯೋಜನೆ ಸಾರಿಗೆ ವ್ಯವಸ್ಥೆಯನ್ನೇ ಬುಡಮೇಲು ಮಾಡುತ್ತಿದೆ ಎಂದು ಆರೋಪಿಸಿದೆ.

ಸಾರಿಗೆ ಸಂಸ್ಥೆಗಳು ನಷ್ಟದಲ್ಲಿರುವುದು, ಬಸ್‌ಗಳ ಸಂಖ್ಯೆ ಹೆಚ್ಚಿಸದೇ ಇರುವುದು, ಸಾರಿಗೆ ನೌಕರರ ಬೇಡಿಕೆ ಈಡೇರಿಸದಿರುವುದು ಇದೆಲ್ಲವೂ ಕಾಂಗ್ರೆಸ್ ಗ್ಯಾರಂಟಿಗಳ ಫಲಶ್ರುತಿಗಳಾಗಿದೆ.‌ ಮಾನ್ಯ ಸಾರಿಗೆ ಸಚಿವರೇ, ಇನ್ನೆಷ್ಟು ವರ್ಷ ಬೇಕು ರಾಜ್ಯದ ಪ್ರತೀ ಗ್ರಾಮಕ್ಕೂ ಬಸ್‌ ತಲುಪಲು? ಎಂದು ಪ್ರಶ್ನಿಸಿದೆ.

Share

Leave a comment

Leave a Reply

Your email address will not be published. Required fields are marked *