SUDDIKSHANA KANNADA NEWS/ DAVANAGERE/ DATE-10-06-2025
ದಾವಣಗೆರೆ: ನ್ಯಾಮತಿ ತಾಲೂಕಿನ ರಾಮೇಶ್ವರ ಗ್ರಾಮದಲ್ಲಿ ಸ್ಕೂಟಿಯಲ್ಲಿ ಹೋಗಿ ಬರುವಾಗ ರಸ್ತೆಯಲ್ಲಿ ಅಡ್ಡಬಂದ ಶ್ವಾನವನ್ನು ತಪ್ಪಿಸಲು ಹೋಗಿ ಬೈಕ್ ನಿಯಂತ್ರಣ ತಪ್ಪಿ ಅಪಘಾತವಾಗಿದ್ದು, ಬೈಕ್ನಲ್ಲಿದ್ದ ಇಬ್ಬರಿಗೂ ತೀವ್ರ ಪೆಟ್ಟು ಬಿದ್ದ ಘಟನೆ ನಡೆದಿದ್ದು, ಓರ್ವ ಯುವಕ ಸಾವು ಕಂಡಿದ್ದಾನೆ.
ನ್ಯಾಮತಿ ಪಟ್ಟಣದ ತಿಲಕ್ ರಸ್ತೆಯ ರವಿಕುಮಾರ್ಅವರ ಸುಪುತ್ರ ಸಚ್ಚಿನ್(24) ಮೃತ ಯುವಕ. ಮೊಹಮ್ಮದ್ ರಿಜ್ವಾನ್ಅವರ ಪತ್ರ ಮೊಹಮ್ಮದ್ ಸೀರಾಜ್ ಜೂನ್ 8 ರ ಭಾನುವಾರ ಕಾರ್ಯ ನಿಮಿತ್ತ ಸವಳಂಗ ಗ್ರಾಮಕ್ಕೆ ಹೋಗಿ ನ್ಯಾಮತಿ ಪಟ್ಟಣಕ್ಕೆ ವಾಪಸ್ ಬರುವಾಗ ಮೂಕ ಚೌಡಮ್ಮ ದೇಗುಲದ ರಸ್ತೆಯಿಂದ ನ್ಯಾಮತಿ ತಾಲೂಕಿನ ರಾಮೇಶ್ವರ – ಬಿದರಹಳ್ಳಿ ಗ್ರಾಮದ ಮುಖ್ಯರಸ್ತೆ ಬಳಿ ಬರುವಾಗ ಹಠಾತನೆ ಶ್ವಾನ ಆಡ್ಡಲಾಗಿ ಬಂದದೆ. ನಾಯಿಯನ್ನು ತಪ್ಪಿಸಲು ಹೋಗಿ ಅಪಘಾತ ಸಂಭವಿಸಿದೆ.
ಸ್ಕೂಟಿಯಿಂದ ಬಿದ್ದ ಪರಿಣಾಮ ಸಚಿನ್ ಕೈ, ಕಾಲು, ತಲೆಗೆ ಸೇರಿದಂತೆ ದೇಹಕ್ಕೆ ತೀವ್ರ ಪೆಟ್ಟು ಬಿದ್ದಿದ್ದು ಆ್ಯಂಬುಲೆನ್ಸ್ ಮೂಲಕ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು.
ವೈದ್ಯರ ಸೂಚನೆ ಮೇರೆಗೆ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿ ಆಗದೇ ಇಂದು ಮೃತಪಟ್ಟಿದ್ದಾನೆ. ಬೈಕ್ನ ಹಿಂದೆ ಕುಳಿತಿದ್ದ ಮೊಹಮ್ಮದ್ ಸೀರಾಜ್ಅವರಿಗೂ ಸೊಂಟ, ಮುಖ, ಕಣ್ಣಿನ ಹತ್ತಿರ ಹಾಗೂ ಕಾಲುಗಳಿಗೆ ಪೆಟ್ಟು ಬಿದ್ದಿದೆ. ಅಪಘಾತ ಹಿನ್ನೆಲೆ ಬೈಕ್ ಹಿಂಬದಿ ಸವಾರನ ಮೊಹಮ್ಮದ್ ಸಿರಾಜ್ಅವರ ತಂದೆ ಮೊಹಮ್ಮದ್ ರಿಜ್ವಾನ್ ನ್ಯಾಮತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.