ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಜಬರ್ದಸ್ತ್ ಬ್ಯಾಟಿಂಗ್.. ಅದ್ಭುತ ಕ್ಯಾಚ್ ಗಳು… ಶಿಸ್ತುಬದ್ಧ ಫೀಲ್ಡಿಂಗ್.. ನಿಖರ ದಾಳಿ: ವಿಶ್ವಕಪ್ ಗೆದ್ದ ಭಾರತ ವನಿತೆಯರಿಗೆ ಭರ್ಜರಿ ಗಿಫ್ಟ್!

On: November 3, 2025 8:59 AM
Follow Us:
ಭಾರತ
---Advertisement---

SUDDIKSHANA KANNADA NEWS/DAVANAGERE/DATE:03_11_2025

ನವಿ ಮುಂಬೈ: ಭಾರತದ ವನಿತೆಯರ ಜಬರ್ದಸ್ತ್ ಬ್ಯಾಟಿಂಗ್… ಅದ್ಭುತ ಕ್ಯಾಚ್ ಗಳು… ಶಿಸ್ತು ಬದ್ಧ ಫೀಲ್ಡಿಂಗ್… ನಿಖರ ದಾಳಿ… ಮೊದಲ ಬಾರಿಗೆ ವಿಶ್ವಕಪ್ ಗೆದ್ದು ಇತಿಹಾಸ ಸೃಷ್ಟಿಸಿದ ಭಾರತದ ಮಹಿಳಾ ಏಕದಿನ ತಂಡ.

READ ALSO THIS STORY: ರಾಜ್ಯದಲ್ಲೇ ಹೈ ಸ್ಪೀಡ್ ಖ್ಯಾತಿಯ “ಮಣಿ” ಕುರಿ ಕಾಳಗದಲ್ಲಿ ವೀರ ಮರಣ!

ಮಹಿಳಾ ಕ್ರಿಕೆಟ್ ಜಗತ್ತಿನ ನೂತನ ಸಾಮ್ರಾಟರಾಗಿ ಹೊರ ಹೊಮ್ಮಿದ ಟೀಂ ಇಂಡಿಯಾ ಗೆಲುವಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ನವಿ ಮುಂಬೈನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಮಹಿಳಾ ಏಕದಿನ ಟೀಂ ಎರಡು ದಶಕಗಳ ಕನಸು ನನಸು ಮಾಡಿಕೊಂಡಿದೆ. ಭಾರತ ಐತಿಹಾಸಿಕ ಮಹಿಳಾ ವಿಶ್ವಕಪ್ ಕಿರೀಟವನ್ನು ಎತ್ತಿ ಹಿಡಿದಿದೆ

ನವಿ ಮುಂಬೈನ ಡಾ. ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ ಭಾರತ ತನ್ನ ಚೊಚ್ಚಲ ಮಹಿಳಾ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಶಫಾಲಿ ವರ್ಮಾ ಮತ್ತು ದೀಪ್ತಿ ಶರ್ಮಾ ಅವರ ಅತ್ಯುತ್ತಮ ಆಟದ ನೆರವಿನಿಂದ ಪ್ರಶಸ್ತಿಗೆ ಮುತ್ತಿಟ್ಟಿತು.

ವಿಶ್ವಕಪ್ ಗೆಲ್ಲುವ ದೀರ್ಘ ಮತ್ತು ನೋವಿನ ಕಾಯುವಿಕೆ ಕೊನೆಗೂ ಅದ್ಭುತ ಅಂತ್ಯ ಕಂಡಿತು. ಐತಿಹಾಸಿಕ ಭಾನುವಾರ ರಾತ್ರಿ, ಹರ್ಮನ್ಪ್ರೀತ್ ಕೌರ್ ಅವರ ನಿರ್ಭೀತ ಬ್ರಿಗೇಡ್, ನವಿ ಮುಂಬೈನ ಡಾ. ಡಿ.ವೈ. ಪಾಟೀಲ್ ಕ್ರೀಡಾಂಗಣದಿಂದ ಹರ್ಷೋದ್ಗಾರಗಳ ನಡುವೆ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಸೋಲಿಸಿ, ವಿಶ್ವ ಸಾಮ್ರಾಟರಾದರು.

2005 ರಲ್ಲಿ ಸೆಂಚುರಿಯನ್‌ನಲ್ಲಿ ಕರೆನ್ ರೋಲ್ಟನ್ ಅವರ ಶತಕ ಅವರ ಭಾರತದ ಕನಸು ನನಸಾಗಲಿಲ್ಲ. 2017 ರಲ್ಲಿ ಲಾರ್ಡ್ಸ್‌ನಲ್ಲಿ ಅನ್ಯಾ ಶ್ರಬ್ಸೋಲ್ ಅವರ ಮಾಂತ್ರಿಕ ಸಿಕ್ಸರ್ ಟೀಂ ಇಂಡಿಯಾಕ್ಕೆ ನಿರಾಸೆ ಮೂಡಿಸಿತ್ತು.

ಶಫಾಲಿ ವರ್ಮಾ ಅವರ ಆಲ್ ರೌಂಡರ್ ಆಟ ಮತ್ತು ದೀಪ್ತಿ ಶರ್ಮಾ ಅತ್ಯುತ್ತಮ ಬೌಲಿಂಗ್ ಮುಂದೆ ದಕ್ಷಿಣ ಆಫ್ರಿಕಾ ಆಟಗಾರ್ತಿಯರು ಶರಣಾದರು. ನ್ಯೂಜಿಲೆಂಡ್, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ನೊಂದಿಗೆ ODI ವಿಶ್ವ ಚಾಂಪಿಯನ್‌ ಪಟ್ಟಿಯಲ್ಲಿ ಭಾರತದ ಮಹಿಳಾ ಏಕದಿನ ತಂಡವೂ ಸೇರಿಕೊಂಡಿತು.

ಕೊನೆಯ ವಿಕೆಟ್ ಪತನವಾಗುತ್ತಿದ್ದಂತೆ, ಮೈದಾನದ ತುಂಬೆಲ್ಲಾ ಹರ್ಷೋದ್ಘಾರ ಮುಗಿಲು ಮುಟ್ಟಿದವು. ಹರ್ಮನ್ಪ್ರೀತ್ ಕೌರ್ ವಿಜಯೋತ್ಸವದಲ್ಲಿ ಕುಣಿದು ಕುಪ್ಪಳಿಸಿದರು. ಕಣ್ಣಂಚಲ್ಲಿ ನೀರು ಜಿನುಗಿತು.

ಮೊದಲು ಬ್ಯಾಟಿಂಗ್ ಗೆ ಇಳಿದ ಭಾರತವು ಏಳು ವಿಕೆಟ್‌ಗಳಿಗೆ 298 ರನ್ ಗಳಿಸಿತು. ಸ್ಮೃತಿ ಮಂಧಾನ ಮತ್ತು ಶಫಾಲಿ ವರ್ಮಾ 17.4 ಓವರ್‌ಗಳಲ್ಲಿ 104 ರನ್‌ಗಳ ಜೊತೆಯಾಟದೊಂದಿಗೆ ಇನ್ನಿಂಗ್ಸ್‌ಗೆ ಉತ್ತಮ ಆರಂಭ ನೀಡಿದರು. ಇದರಿಂದ ಹೆಚ್ಚಿನ ರನ್ ಪೇರಿಸಲು ಸಾಧ್ಯವಾಯಿತು.

ಆಸ್ಟ್ರೇಲಿಯಾ ವಿರುದ್ಧದ ವೈಫಲ್ಯದ ನಂತರ ಒತ್ತಡದಲ್ಲಿದ್ದ ಶಫಾಲಿ, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಅರ್ಧಶತಕ ಗಳಿಸಿದ ಅತ್ಯಂತ ಕಿರಿಯ ಪುರುಷ ಅಥವಾ ಮಹಿಳಾ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಅವರು 49 ಎಸೆತಗಳಲ್ಲಿ ಅರ್ಧಶತಕವನ್ನು ತಲುಪಿದರು ಮತ್ತು ವಿಶ್ವಕಪ್‌ನಲ್ಲಿ ತಮ್ಮ ಅತ್ಯಧಿಕ ವೈಯಕ್ತಿಕ ಸ್ಕೋರ್ ಅನ್ನು ದಾಖಲಿಸಿದರು. ಮತ್ತೊಂದೆಡೆ, ಮಂಧಾನ ಆರಂಭದಲ್ಲಿ ಜಾಗರೂಕರಾಗಿದ್ದರು ಆದರೆ ಲಯ ಕಂಡುಕೊಂಡರೂ, 58 ಎಸೆತಗಳಲ್ಲಿ 45 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.

ಶಫಾಲಿ ಅವರ 78 ಎಸೆತಗಳಲ್ಲಿ 87 ರನ್‌ಗಳು ಏಳು ಬೌಂಡರಿಗಳು ಮತ್ತು ಎರಡು ಸಿಕ್ಸರ್‌ಗಳನ್ನು ಸಿಡಿಸಿದರು. ದೀಪ್ತಿ ಶರ್ಮಾ ತಾಳ್ಮೆಯಿಂದ 58 ರನ್ ಗಳಿಸಿದರು, ಆದರೆ ಭಾರತ ಕೊನೆಯ 10 ಓವರ್‌ಗಳಲ್ಲಿ ಕೇವಲ 69 ರನ್ ಗಳಿಸಲು ಮಾತ್ರ ಸಾಧ್ಯವಾಯಿತು.

ರಿಚಾ ಘೋಷ್ ಅವರ 24 ಎಸೆತಗಳಲ್ಲಿ 34 ರನ್ ಗಳಿಸಿ ಭಾರತವನ್ನು 300 ರನ್‌ಗಳ ಗಡಿ ಸಮೀಪ ತಂದರು.

299 ರನ್ ಗಳ ಕಠಿಣ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಆರಂಭಿಕ ಆಘಾತ ಆಯಿತು. ಆದರೂ ತಂಡದ ನಾಯಕಿ ಅತ್ಯುತ್ತಮ ಶತಕ ಬಾರಿಸುವ ಮೂಲಕ ಭಾರತೀಯ ಆಟಗಾರ್ತಿಯ ಎದೆಯಲ್ಲಿ ನಡುಕ ಹುಟ್ಟಿಸಿದರು. ಲಾರಾ ವೋಲ್ವಾರ್ಡ್ 98 ಎಸೆತಗಳಲ್ಲಿ 11 ಬೌಂಡರಿ ಮತ್ತು ಒಂದು ಸಿಕ್ಸರ್‌ನೊಂದಿಗೆ 101 ರನ್ ಗಳಿಸಿದರು. ದೀಪ್ತಿ ಬೌಲಿಂಗ್‌ನಲ್ಲಿ ಅಮನ್‌ಜೋತ್ ಕೌರ್ ಜಗ್ಲಿಂಗ್ ಕ್ಯಾಚ್ ಪಡೆದು ದಕ್ಷಿಣ ಆಫ್ರಿಕಾದ ನಾಯಕಿಯನ್ನು ಔಟ್ ಮಾಡಿದರು. ವಿಶ್ವಕಪ್ ಸೆಮಿಫೈನಲ್ ಮತ್ತು ಫೈನಲ್ ಎರಡರಲ್ಲೂ ಶತಕ ಗಳಿಸಿದ ಎರಡನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಆಟಗಾರ್ತಿ ಔಟ್ ಆದ ಬಳಿಕ ಭಾರತದ ಹಾದಿ ಸುಗಮವಾಯಿತು. ಕರಾರುವಕ್ ಬೌಲಿಂಗ್, ಶಿಸ್ತು ಬದ್ಧ ಫೀಲ್ಡಿಂಗ್ ಮತ್ತು ಅತ್ಯುತ್ತಮ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಆಟಗಾರ್ತಿಯರು ವಿಶ್ವಕಪ್ ಗೆದ್ದರು. ಇನ್ನು ಟೀಂ ಇಂಡಿಯಾಕ್ಕೆ ಬಿಸಿಸಿಐ, ಐಸಿಸಿ ಸೇರಿದಂತೆ ಕೋಟ್ಯಂತರ ರೂಪಾಯಿ ಹರಿದು ಬರಲಿದೆ.

ಯೋಗರಾಜ್

ಇದು ಡಿಜಿಟಲ್ ಯುಗ. ಕೈ ಬೆರಳಿನಲ್ಲೇ ಸುದ್ದಿಗಳು ಜನರಿಗೆ ತಲುಪಬೇಕು ಎಂಬುದು ನಮ್ಮ ಸದುದ್ದೇಶ. ಈಗಾಗಲೇ ಲಕ್ಷಾಂತರ ಓದುಗರನ್ನೊಳಗೊಂಡ ಈ ಡಿಜಿಟಲ್ ಮಾಧ್ಯಮ ಜನಮನ ಗೆದ್ದಿದೆ. ಡೈಲಿಹಂಟ್ ನಲ್ಲಿಯೂ ಜನರ ಕೈಬೆರಳಿನಲ್ಲೇ ಸಿಗುತ್ತದೆ. ದಾವಣಗೆರೆ, ಕೃಷಿ, ಉದ್ಯೋಗ, ವಾಣಿಜ್ಯ, ಅಪರಾಧ ಜಗತ್ತಿನ, ರಾಷ್ಟ್ರ, ಅಂತಾರಾಷ್ಟ್ರೀಯ ಸೇರಿದಂತೆ ಓದುಗರಿಗೆ ಬೇಕಾದ ಮಾಹಿತಿ ಒದಗಿಸಲಾಗುತ್ತಿದೆ. ಭಾರೀ ಮಟ್ಟದಲ್ಲಿ ಪ್ರತಿಕ್ರಿಯೆಯೂ ಬಂದಿದೆ, ಬರುತ್ತಲೇ ಇದೆ. ಓದುಗರು ನೀಡಿದ ಪ್ರೋತ್ಸಾಹ, ತೋರಿದ ಪ್ರೀತಿ, ನೀಡುತ್ತಿರುವ ಮಾರ್ಗದರ್ಶನವೇ ಈ ಮಾಧ್ಯಮ ಇಷ್ಟೊಂದು ಪ್ರಮಾಣದಲ್ಲಿ ಬೆಳೆಯಲು ಸಾಧ್ಯವಾಗಿದೆ. ದಾವಣಗೆರೆಯಲ್ಲಿ ನಂಬರ್ ಒನ್ ನ್ಯೂಸ್ ಪೋರ್ಟಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಷ್ಟೋ ಮಂದಿ ನ್ಯೂಸ್ ಪ್ರಕಟಿಸುವಂತೆ ಹೇಳುತ್ತಲೇ ಇದ್ದಾರೆ. ದಾವಣಗೆರೆ ಜಿಲ್ಲೆ ಮಾತ್ರವಲ್ಲ, ಬೇರೆ ಜಿಲ್ಲೆಗಳಿಂದಲೂ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಸ್ಥಳೀಯ ಸಮಸ್ಯೆಗಳು, ಜನರಿಗೆ ಮತ್ತಷ್ಟು ಹತ್ತಿರವಾಗುವ ಸದುದ್ದೇಶದಿಂದ ಸುದ್ದಿಗಳನ್ನು ಪ್ರಕಟಿಸಲಾಗುವುದು. ವೈಯಕ್ತಿಕ ವಿಚಾರ, ಆಸ್ತಿ ವಿಚಾರ, ಗಂಡ ಹೆಂಡತಿ ಸಮಸ್ಯೆಯಂಥ ಸುದ್ದಿಗಳನ್ನ ಬಿತ್ತರಿಸಲಾಗುವುದಿಲ್ಲ. ನಿಜವಾದ ಸಮಸ್ಯೆಗಳಿದ್ದರೆ ಖಂಡಿತವಾಗಿಯೂ ಪ್ರಕಟಿಸಲಾಗುವುದು. ಹಾಗಾಗಿ, ಹೊಸ ವೇದಿಕೆ ಕಲ್ಪಿಸಿಕೊಡಲಾಗುತ್ತಿದೆ. ವಾಟ್ಸಪ್ ನಂಬರ್: 96869-97836, ಇ-ಮೇಲ್ ವಿಳಾಸ: suddikshana.com ಈ ವಿಳಾಸಕ್ಕೆ ಕಳುಹಿಸಿಕೊಡಿ. ಅರ್ಹವಿದ್ದ ಸುದ್ದಿಗಳನ್ನು ಖಂಡಿತವಾಗಿಯೂ ಪ್ರಕಟಿಸಲಾಗುತ್ತದೆ. ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

Leave a Comment