Home ಕ್ರೈಂ ನ್ಯೂಸ್ ರಾಜಕೀಯ ಲಾಭಕ್ಕೆ ಮಹಿಳೆಯರ ನಿಂದನೆ ಸರಿಯಲ್ಲ: ಉದಯನಿಧಿ ವಿರುದ್ಧ ಗಾಯಕಿ ಚಿನ್ಮಯಿ, ನಟಿ ಖುಷ್ಬು ತೀವ್ರ ಆಕ್ರೋಶ
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ರಾಜಕೀಯ ಲಾಭಕ್ಕೆ ಮಹಿಳೆಯರ ನಿಂದನೆ ಸರಿಯಲ್ಲ: ಉದಯನಿಧಿ ವಿರುದ್ಧ ಗಾಯಕಿ ಚಿನ್ಮಯಿ, ನಟಿ ಖುಷ್ಬು ತೀವ್ರ ಆಕ್ರೋಶ

Share
ಉದಯನಿಧಿ
Share

ಚೆನ್ನೈ: ತಮಿಳುನಾಡಿನಲ್ಲಿ ಕಾವೇರಿ ನೀರು ವಿವಾದಕ್ಕೆ ಸಂಬಂಧಿಸಿದ ಪ್ರತಿಭಟನೆಯ ವೇಳೆ ಡಿಎಂಕೆ ಮುಖಂಡ ಉದಯನಿಧಿ ಸ್ಟಾಲಿನ್ ನಟಿ ತ್ರಿಶಾ ಅವರನ್ನು ಉದ್ದೇಶಿಸಿ ನೀಡಿದ್ದಾರೆನ್ನಲಾದ ವಿವಾದಾತ್ಮಕ ಮತ್ತು ಅಸಭ್ಯ ಹೇಳಿಕೆಯು ರಾಜಕೀಯ ವಲಯದಲ್ಲಿ ಭಾರೀ ಬಿರುಗಾಳಿ ಎಬ್ಬಿಸಿದೆ.

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರನ್ನು ತರಾಟೆಗೆ ತೆಗೆದುಕೊಳ್ಳುವಷ್ಟರಲ್ಲಿ, ಸಭೆಯಲ್ಲಿದ್ದ ಕೆಲವರು ‘ತ್ರಿಶಾ’ ಎಂದು ಘೋಷಣೆ ಕೂಗಿದಾಗ ಉದಯನಿಧಿ ನೀಡಿದ ಪ್ರತಿಕ್ರಿಯೆ ತೀವ್ರ ವಿರೋಧಕ್ಕೆ ಕಾರಣವಾಗಿದೆ.

ಈ ಬೆಳವಣಿಗೆಯನ್ನು ಖಂಡಿಸಿರುವ ಗಾಯಕಿ ಚಿನ್ಮಯಿ ಶ್ರೀಪಾದ ಹಾಗೂ ನಟಿ-ರಾಜಕಾರಣಿ ಖುಷ್ಬು ಸುಂದರ್ ಅವರು, ರಾಜಕೀಯ ಕಾಳಗದಲ್ಲಿ ಮಹಿಳೆಯರನ್ನು ಎಳೆದು ತರುವುದು ಸರಿಯಲ್ಲ ಎಂದು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಉದಯನಿಧಿ ಸ್ಟಾಲಿನ್ ಅವರು ನಟಿಗೆ ಬಹಿರಂಗ ಕ್ಷಮೆ ಯಾಚಿಸಬೇಕು ಎಂದು ಖುಷ್ಬು ಆಗ್ರಹಿಸಿದ್ದಾರೆ. ವಿವಾದ ಹೆಚ್ಚಾಗುತ್ತಿದ್ದಂತೆ ಪೊಲೀಸರು ಉದಯನಿಧಿಯನ್ನು ವಶಕ್ಕೆ ಪಡೆದಿದ್ದಾರೆ

Share

Leave a comment

Leave a Reply

Your email address will not be published. Required fields are marked *