SUDDIKSHANA KANNADA NEWS/ DAVANAGERE/ DATE:17-09-2023
ದಾವಣಗೆರೆ: ಭದ್ರಾ ಜಲಾಶಯ (Bhadra Dam) ದಿಂದ ಎಡನಾಲೆ ಹಾಗೂ ಬಲನಾಲೆಯಲ್ಲಿ ನೀರು ಹರಿಸುವಿಕೆ ನಿಲುಗಡೆ ವಿರೋಧಿಸಿ ಭಾರತ ರೈತ ಒಕ್ಕೂಟವು ಇಂದು ರಾಷ್ಟ್ರೀಯ ಹೆದ್ದಾರಿ ತಡೆ ನಡೆಸಲಿದೆ.
ಈ ಸುದ್ದಿಯನ್ನೂ ಓದಿ:
ದಾವಣಗೆರೆಯ ಸಿದ್ದಗಂಗೆಯಲ್ಲಿ ಪರಿಸರಸ್ನೇಹಿ ಗಣೇಶ (Ganesha) ಮೂರ್ತಿಗಳ ನೋಡಬನ್ನಿ.. ಪೇಪರ್ ಗಣಪನ ಸ್ಪೆಷಾಲಿಟಿ ಏನು ಗೊತ್ತಾ…?
ಬೆಳಿಗ್ಗೆ 11 ಗಂಟೆಗೆ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ, ಪ್ರತಿಭಟನೆ ಮಾಡಲಾಗುವುದು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ದಾವಣಗೆರೆ ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗಕ್ಕೆ ಆಗಮಿಸಬೇಕೆಂದು ಭಾರತೀಯ ರೈತ ಒಕ್ಕೂಟದ ಮುಖಂಡರಾದ ಶಾಮನೂರು ಲಿಂಗರಾಜು, ಕೊಳೇನಹಳ್ಳಿ ಬಿ ಎಂ ಸತೀಶ್, ಬೆಳವನೂರು ನಾಗೇಶ್ವರರಾವ್, ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡದ ಗಣೇಶಪ್ಪ, ಶಿರಮಗೊಂಡನಹಳ್ಳಿ ಮಂಜುನಾಥ ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ಭದ್ರಾ ಜಲಾಶಯದ ನೀರು ಹೊರ ಹರಿಸುವಿಕೆ ನಿಲ್ಲಿಸಬಾರದು. 100 ದಿನಗಳ ಕಾಲ ನೀರು ಹರಿಸಬೇಕು. ಈಗಾಗಲೇ ರೈತರು ಭತ್ತ ನಾಟಿ ಮಾಡಿದ್ದು, ನೀರು ನಿಲುಗಡೆ ಮಾಡಿದರೆ ತೊಂದರೆ ಆಗುತ್ತದೆ. ಪುನರ್ ಪರಿಶೀಲಿಸಿ ನೀರು ನಿಲ್ಲಿಸಿದ್ದು ಸರಿಯಲ್ಲ. ಸರ್ಕಾರ ಘೋಷಿಸಿದಂತೆ ಎರಡೂ ನಾಲೆಗಳಲ್ಲಿ 100 ದಿನ ನೀರು ಬಿಡಬೇಕು ಎಂದು ಒತ್ತಾಯಿಸಿ ಹೆದ್ದಾರಿ ತಡೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.