SUDDIKSHANA KANNADA NEWS/ DAVANAGERE/ DATE-28-05-2025
ದಾವಣಗೆರೆ: ಹರಿಹರ ನಗರಸಭೆ ವ್ಯವಸ್ಥಾಪಕಿಯನ್ನು ಕರ್ತವ್ಯ ಲೋಪ, ಹಣ ದುರುಪಯೋಗ, ಮೇಲಾಧಿಕಾರಿಗಳ ಆದೇಶ ಪಾಲನೆ ಮಾಡದ ಹಿನ್ನೆಲೆಯಲ್ಲಿ ಅಮಾನತುಗೊಳಿಸಿ ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ ಆದೇಶ ಹೊರಡಿಸಿದ್ದಾರೆ.
ಹರಿಹರ ನಗರಸಭೆ ವ್ಯವಸ್ಥಾಪಕಿ ಹಾಗೂ ಪ್ರಭಾರಿ ಕಂದಾಯ ಅಧಿಕಾರಿ ನಿರಂಜನಿ ಹೆಚ್. ಅಮಾನತುಗೊಂಡ ಅಧಿಕಾರಿ.
ಕಳೆದ ಲೋಕಸಭೆ ಚುನಾವಣೆ ವೇಳೆ ಹೊನ್ನಾಳಿಯ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿಯಾಗಿದ್ದಾ ಹಣ ದುರುಪಯೋಗ ಮಾಡಿಕೊಂಡಿರುವುದು ಸಾಬೀತಾಗಿದೆ. ಹರಿಹರ ನಗರಸಭೆಯ ವ್ಯವಸ್ಥಾಪಕಿಯಾಗಿ ವರ್ಗಾವಣೆಯಾದ ವೇಳೆಯಲ್ಲಿಯೂ ಪ್ರಭಾರಿ ಅಧಿಕಾರಿಯಾಗಿ ಬಿ ಖಾತಾ ವಿತರಣೆ, ದಾಖಲೆ ಕೊಠಡಿ ನಿರ್ವಹಣೆಯಲ್ಲಿ ಕರ್ತವ್ಯ ಲೋಪ ಎಸಗಿದ್ದಾರೆ.
ಸಮರ್ಪಕವಾಗಿ ಕರ್ತವ್ಯ ನಿರ್ವಹಣೆ ಮಾಡದೇ ನಗರಸಭೆಗೆ ಆರ್ಥಿಕ ನಷ್ಟ ಮಾಡಿರುವುದು ಸೇರಿದಂತೆ ಹಲವು ಆರೋಪಗಳು ಇವರ ಮೇಲಿದ್ದು, ಈ ಎಲ್ಲಾ ಕಾರಣಗಳಿಂದ ಹೆಚ್. ನಿರಂಜನಿ ಅವರನ್ನು ಅಮಾನತಗೊಳಿಸಲಾಗಿದೆ ಎಂದು ಪ್ರಕಟಣೆಯಲ್ಲಿ ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರು ಮಾಹಿತಿ ನೀಡಿದ್ದಾರೆ.