Home ಕ್ರೈಂ ನ್ಯೂಸ್ “ಅಮ್ಮ ಕ್ಷಮಿಸು, ಅವರ ಬುದ್ಧಿ ಬದಲಾಗಲ್ಲ”: ಮದುವೆಯಾದ 8 ತಿಂಗಳಿಗೇ ಅತ್ತೆ ಮನೆ ಕಿರುಕುಳಕ್ಕೆ ವಧು ಬಲಿ
ಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

“ಅಮ್ಮ ಕ್ಷಮಿಸು, ಅವರ ಬುದ್ಧಿ ಬದಲಾಗಲ್ಲ”: ಮದುವೆಯಾದ 8 ತಿಂಗಳಿಗೇ ಅತ್ತೆ ಮನೆ ಕಿರುಕುಳಕ್ಕೆ ವಧು ಬಲಿ

Share
ಮದುವೆ
Share

ಡೆಹರಾಡೂನ್: ಮದುವೆಯಾದ ಕೇವಲ 8 ತಿಂಗಳಿನಲ್ಲೇ ಸರ್ಕಾರಿ ಶಾಲೆಯ ಶಿಕ್ಷಕಿಯೊಬ್ಬರು ಅತ್ತೆ ಮನೆಯವರ ಸತತ ಮಾನಸಿಕ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವ ದೋಚುವ ಘಟನೆ ಉತ್ತರಾಖಂಡದ ಡೆಹರಾಡೂನ್‌ನಲ್ಲಿ ನಡೆದಿದೆ.

ಆತ್ಮಹತ್ಯೆಗೂ ಮುನ್ನ ಮೃತ ಶಿಕ್ಷಕಿ ಶೃಷ್ಟಿ ಕಂಧಾರಿ (Srishti Kandhari) ತಾಯಿಗೆ ಕಣ್ಣೀರಿನ ವೀಡಿಯೋ ಸಂದೇಶ ಕಳುಹಿಸಿದ್ದು, “ಅಮ್ಮ ಕ್ಷಮಿಸು, ಕಳೆದ 6 ತಿಂಗಳಿಂದ ಈ ಕಿರುಕುಳವನ್ನು ಸಹಿಸಿಕೊಳ್ಳುತ್ತಿದ್ದೇನೆ. ಇವರ ಮನಸ್ಥಿತಿ ಎಂದಿಗೂ ಬದಲಾಗುವುದಿಲ್ಲ” ಎಂದು ನೋವು ತೋಡಿಕೊಂಡಿದ್ದಾರೆ.

ನಡೆದಿದ್ದೇನು?

ನವೆಂಬರ್ 2025 ರಲ್ಲಿ ಶೃಷ್ಟಿ ಕಂಧಾರಿ ಅವರು ಸೌರಭ್ ರತೂರಿ ಎಂಬುವವರನ್ನು ವಿವಾಹವಾಗಿದ್ದರು. ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಗಂಡನ ಮನೆಯಲ್ಲಿ ಮಾನಸಿಕ ಹಾಗೂ ದೈಹಿಕ ಕಿರುಕುಳ ಪ್ರಾರಂಭವಾಗಿತ್ತು.

ಮೃತರ ಕುಟುಂಬಸ್ಥರ ಆರೋಪದಂತೆ, ಮದುವೆಯಾದ ಕೆಲ ದಿನಗಳಲ್ಲೇ ಮಾವನಿಗೆ ಹೃದಯಾಘಾತ ಸಂಭವಿಸಿತ್ತು. ಬಳಿಕ ಜ್ಯೋತಿಷಿಯೊಬ್ಬರ ಮಾತು ಕೇಳಿದ ಅತ್ತೆ ಮನೆಯವರು, ಶೃಷ್ಟಿ ಹೆಜ್ಜೆ ಇಟ್ಟಿದ್ದರಿಂದಲೇ ಕುಟುಂಬಕ್ಕೆ ಕಷ್ಟ ಬಂದಿದೆ ಹಾಗೂ ಆಕೆ ‘ಅಪಶಕುನ’ (Unlucky) ಎಂದು ಪದೇ ಪದೇ ನಿಂದಿಸಲು ಪ್ರಾರಂಭಿಸಿದ್ದರು. ಇತ್ತೀಚೆಗೆ ಮಾವ ತೀರಿಕೊಂಡ ನಂತರ ಈ ಕಿರುಕುಳ ಇನ್ನಷ್ಟು ಹೆಚ್ಚಾಗಿತ್ತು.

ಪೊಲೀಸರ ಕ್ರಮ

ಘಟನೆಗೆ ಸಂಬಂಧಿಸಿದಂತೆ ಮೃತರ ತಾಯಿ ಸೀಮಾ ಕಂಧಾರಿ ನೀಡಿದ ದೂರಿನನ್ವಯ, ಡೊಯ್ವಾಲಾ (Doiwala) ಪೊಲೀಸ್ ಠಾಣೆಯಲ್ಲಿ ಪತಿ ಸೌರಭ್ ರತೂರಿ, ಅತ್ತೆ ಪರ್ವೀನಾ ದೇವಿ ಮತ್ತು ನಾದಿನಿ ಚಾರು ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 80(2) (ವರದಕ್ಷಿಣೆ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪೊಲೀಸರು ಶೃಷ್ಟಿ ಬಿಟ್ಟುಹೋದ ವೀಡಿಯೋ ಹಾಗೂ ವಿಧಿವಿಜ್ಞಾನ (FSL) ವರದಿಗಳನ್ನು ಪರಿಶೀಲಿಸುತ್ತಿದ್ದು, ತನಿಖೆ ಮುಂದುವರಿದಿದೆ.

Share

Leave a comment

Leave a Reply

Your email address will not be published. Required fields are marked *

Related Articles