Home ಕ್ರೈಂ ನ್ಯೂಸ್ ಎಸ್‌ಡಿಪಿಐ-ಬಿಜೆಪಿ ಷಡ್ಯಂತ್ರ ಬಿಟ್ಟು ಜನಸೇವೆ ಮಾಡಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಟ್ಟಿದ್ದು: ಶಾಸಕ ಸಮರ್ಥ್ ಶಾಮನೂರು!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಎಸ್‌ಡಿಪಿಐ-ಬಿಜೆಪಿ ಷಡ್ಯಂತ್ರ ಬಿಟ್ಟು ಜನಸೇವೆ ಮಾಡಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಟ್ಟಿದ್ದು: ಶಾಸಕ ಸಮರ್ಥ್ ಶಾಮನೂರು!

Share
ಸಮರ್ಥ್ ಶಾಮನೂರು
Share

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಸಲು ನಡೆದಿದೆ ಎನ್ನಲಾದ ಷಡ್ಯಂತ್ರದ ಆಡಿಯೋ ಕ್ಲಿಪ್ ಬಿಡುಗಡೆ ಬೆನ್ನಲ್ಲೇ ಜಿಲ್ಲಾ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಯಾಗಿದೆ. ಈ ಕುರಿತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ನೂತನ ಶಾಸಕ ಸಮರ್ಥ್ ಶಾಮನೂರು, “ಎಸ್‌ಡಿಪಿಐ ಮತ್ತು ಬಿಜೆಪಿ ನಾಯಕರು ಕುತಂತ್ರ ರಾಜಕಾರಣ ಬಿಟ್ಟು ಜನಸೇವೆಯತ್ತ ಗಮನ ಹರಿಸಲಿ” ಎಂದು ಖಡಕ್ ತಿರುಗೇಟು ನೀಡಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸಮರ್ಥ್ ಶಾಮನೂರು, “ನನ್ನನ್ನು ಸೋಲಿಸಲು ತೆರೆಮರೆಯಲ್ಲಿ ದೊಡ್ಡ ಷಡ್ಯಂತ್ರ ನಡೆದಿರುವುದು ಈಗ ಜಗಜ್ಜಾಹೀರಾಗಿದೆ (ಓಪನ್ ಸೀಕ್ರೆಟ್). ಚುನಾವಣಾ ಸಂದರ್ಭದಲ್ಲೇ ಇಂತಹ ಸಂಚಿನ ಮಾತುಗಳು ಕೇಳಿಬಂದಿದ್ದವು, ಈಗ ಆಡಿಯೋ ಮೂಲಕ ಅದು ಸಾಬೀತಾಗಿದೆ. ಈ ಬಗ್ಗೆ ಪಕ್ಷವು ಸೂಕ್ತ ತನಿಖೆ ನಡೆಸಲಿ, ಎಲ್ಲ ಸಾಕ್ಷ್ಯಗಳು ಹೊರಬರಲಿ. ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಹೈಕಮಾಂಡ್‌ಗೆ ಬಿಟ್ಟಿದ್ದೇನೆ” ಎಂದರು.

ಮತದಾರರನ್ನು ವಿಭಜಿಸುವ ತಂತ್ರ:

“ಬಿಡುಗಡೆಯಾಗಿರುವ ಆಡಿಯೋದಲ್ಲಿ ಬಿಜೆಪಿ, ಎಸ್‌ಡಿಪಿಐ ಹಾಗೂ ಪಕ್ಷೇತರ ಅಭ್ಯರ್ಥಿಗಳ ಹೆಸರುಗಳು ಕೇಳಿಬಂದಿವೆ. ನನ್ನನ್ನು ಸೋಲಿಸಲು ಇವರೆಲ್ಲರೂ ಒಟ್ಟಾಗಿ ಸಂಚು ರೂಪಿಸಿದ್ದಾರೆ. ಧೈರ್ಯವಿದ್ದರೆ ನಾವೆಲ್ಲರೂ ಒಂದೇ ಎಂದು ನೇರವಾಗಿ ಬಂದು ಎದುರಿಸಬೇಕಿತ್ತು. ಅದನ್ನು ಬಿಟ್ಟು, ಮತದಾರರನ್ನು ವಿಭಜಿಸಿ ಗೆಲ್ಲಲು ನೋಡುವುದು ಸಣ್ಣತನದ ರಾಜಕಾರಣ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಕೆಲಸ ನೋಡಿ ಜನ ಗೆಲ್ಲಿಸಿದ್ದಾರೆ:

“ಇದು ತಾಯಿ ದುರ್ಗಾಂಬಿಕಾ ದೇವಿಯ ನಾಡು, ಇಲ್ಲಿ ಇಂತಹ ಕುತಂತ್ರಗಳು ನಡೆಯುವುದಿಲ್ಲ. ನಾವು ಮನೆ ಮನೆಗೆ ಹೋಗಿ ಜನರ ಕಷ್ಟ ಸುಖ ಆಲಿಸಿದ್ದೇವೆ. ನಮ್ಮ ಪ್ರಾಮಾಣಿಕ ಕೆಲಸವನ್ನು ಗುರುತಿಸಿ ಮತದಾರರು ನನ್ನನ್ನು ಗೆಲ್ಲಿಸಿದ್ದಾರೆ. ಆಡಿಯೋ ಕ್ಲಿಪ್ ಅನ್ನು ವಿಧಿವಿಜ್ಞಾನ ಪ್ರಯೋಗಾಲಯದ (Forensic Report) ತನಿಖೆಗೆ ಒಳಪಡಿಸಲಿ. ನಾನು ಹೈಕಮಾಂಡ್ ಮತ್ತು ದೇವರ ಮೇಲೆ ಭಾರ ಹಾಕಿದ್ದೇನೆ” ಎಂದು ಸಮರ್ಥ್ ತಿಳಿಸಿದರು.

ಯುವಕರಿಗೆ ನಿರಾಸೆ ಮೂಡಿಸದಿರಿ:

“ರಾಜಕೀಯಕ್ಕೆ ನಾನು ಇನ್ನೂ ಹೊಸಬ, ರಾಜ್ಯದಲ್ಲೇ ಅತ್ಯಂತ ಕಿರಿಯ ಶಾಸಕರಲ್ಲಿ ಒಬ್ಬ. ಧರ್ಮ, ಜಾತಿ ರಾಜಕಾರಣ ಮಾಡದೆ ಒಳ್ಳೆಯ ಮನಸ್ಸಿನಿಂದ ಕೆಲಸ ಮಾಡಲು ಬಯಸುವ ಯುವಕರಿಗೆ ಇಂತಹ ಷಡ್ಯಂತ್ರಗಳು ನಿರಾಸೆ ಮೂಡಿಸುತ್ತವೆ. ಫಲಿತಾಂಶ ಬರುವ ಮುನ್ನವೇ ಪಕ್ಷದ್ರೋಹಿಗಳಿಗೆ ಹೈಕಮಾಂಡ್ ತಕ್ಕ ಪಾಠ ಕಲಿಸಿರುವುದು ಪ್ರಾಮಾಣಿಕ ಕಾಂಗ್ರೆಸ್ ಕಾರ್ಯಕರ್ತರಿಗೆ ನೆಮ್ಮದಿ ತಂದಿದೆ” ಎಂದು ಅವರು ಹೇಳಿದರು.

Share

Leave a comment

Leave a Reply

Your email address will not be published. Required fields are marked *

Related Articles