SUDDIKSHANA KANNADA NEWS/ DAVANAGERE/DATE:04_08_2025
ದಾವಣಗೆರೆ: ಆಗಸ್ಟ್ 5ರಂದು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಸಮಸ್ಯೆಗಳು, ದೂರುಗಳು ಇದ್ದಲ್ಲಿ ಹೇಳಿಕೊಳ್ಳಲು ನಾಗರಿಕರಿಗೆ ಅವಕಾಶ ಇದೆ.
READ ALSO THIS STORY: FASTag ವಾರ್ಷಿಕ ಪಾಸ್: ಆಗಸ್ಟ್ 15ಕ್ಕೆ ಸಕ್ರಿಯಗೊಳಿಸುವ ಮೊದಲು ಹೇಗೆ ಖರೀದಿಸುವುದು? ಇಲ್ಲಿದೆ ಮಾಹಿತಿ
ಬೆಳಗ್ಗೆ11 ಗಂಟೆಯಿಂದ ಮಧ್ಯಾಹ್ನ 12ರವರೆಗೆ ಜಿಲ್ಲಾ ಪೊಲೀಸ್ ಕಛೇರಿಯಲ್ಲಿ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ್ ಫೋನ್ ಇನ್ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಸಾರ್ವಜನಿಕರು ಈ ಮೊಬೈಲ್ ನಂಬರ್ ಗೆ 9480803208 ಗೆ ಕರೆ ಮಾಡಿ ನೇರವಾಗಿ ಮಾತನಾಡಬಹುದು.
ಪೊಲೀಸ್ ಇಲಾಖೆಯ ವಿನೂತನ “ಮನೆ ಮನೆಗೆ ಪೊಲೀಸ್ “ ಕಾರ್ಯಕ್ರಮ ಕುರಿತಂತೆಯೂ ಅಭಿಪ್ರಾಯಗಳನ್ನು ಹಂಚಿಕೊಳ್ಳಬಹುದು ಎಂದು ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆ ತಿಳಿಸಿದೆ.