SUDDIKSHANA KANNADA NEWS/ DAVANAGERE/DATE:01_09_2025
ದಾವಣಗೆರೆ: 66/11 ಕೆವಿ ಓಬಜ್ಜಿಹಳ್ಳಿ ಕೇಂದ್ರದಿಂದ ಹೊರಡುವ ವಿದ್ಯುತ್ ಮಾರ್ಗದಲ್ಲಿ ಮಾರ್ಗಮುಕ್ತತೆಯ ತುರ್ತು ಕಾಮಗಾರಿ ಇರುವುದರಿಂದ ಸೆ.2 ರಂದು ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಈ ಸುದ್ದಿಯನ್ನೂ ಓದಿ: “ಒಳ್ಳೆಯ ಸ್ಥಾನಮಾನಕ್ಕೆಂದು ಬರುವವರ ತಡೆಯಲು ಸಾವಿರಾರು ಪಡೆಗಳಿರುವ ದುಷ್ಟ ಸಮಾಜ ನಮ್ಮದು”: ಜಿ. ಬಿ. ವಿನಯ್ ಕುಮಾರ್ ಬೇಸರ
ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಕಡ್ಲೆಬಾಳು, ಹೊಸಕಡ್ಲೆಬಾಳು, ಅರಸಾಪುರ, ತಳವಾರಹಟ್ಟಿ, ಮಾಗನಹಳ್ಳಿ, ಚಿಕ್ಕೋಬಜ್ಜಿಹಳ್ಳಿ, ದೊಡ್ಡೋಬಜ್ಜಿಹಳ್ಳಿ, ಬದಿಯಾನಾಯಕನ ತಾಂಡ ಮತ್ತು ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್
ವ್ಯತ್ಯಯವಾಗಲಿದೆ.
ಐ.ಪಿ ಮಾರ್ಗಗಳಿಗೆ ಪಾಳಿಯ ಬದಲಾವಣೆ ಮಾಡಿ ಬೆಳಿಗ್ಗೆ 3 ರಿಂದ 10 ಗಂಟೆಯವರೆಗೆ ವಿದ್ಯುತ್ ಸಂಪರ್ಕವನ್ನು ನೀಡಲಾಗುವುದು ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.