SUDDIKSHANA KANNADA NEWS/ DAVANAGERE/ DATE-28-05-2025
ದಾವಣಗೆರೆ: ತಾಲೂಕಿನ ಕೆ.ಕೋಡಿಹಳ್ಳಿ ಗ್ರಾಮದ ಕೆ.ಎನ್.ನವೀನ್ಕುಮಾರ್ ಅವರ ಪತ್ನಿ ರೇಖಾ ಎಂ.ಬಿ ಇವರು ಗಣಿತಶಾಸ್ತ್ರ ವಿಷಯದಲ್ಲಿ ಸಲ್ಲಿಸಿದ ಮಹಾಪ್ರಬಂಧಕ್ಕೆ ದಾವಣಗೆರೆ ವಿಶ್ವವಿದ್ಯಾನಿಲಯ ಪಿ.ಎಚ್ಡಿ ಪ್ರದಾನ ಮಾಡಿದೆ.
ಗಣಿತಶಾಸ್ತ್ರ ವಿಭಾಗದ ಡಾ.ರಘುನಾಥ ಕೆ.ಆರ್. ಮಾರ್ಗದರ್ಶನದಲ್ಲಿ `ಎ ಥೆರೆಟಿಕಲ್ ಸ್ಟಡಿ ಆಫ್ ಬೌಂಡ್ರಿ ಲೇಯರ್ ಫ್ಲೊ, ಹೀಟ್ ಆಂಡ್ ಮಾಸ್ ಟ್ರಾನ್ಸಪೋರ್ಟ್ ಇನ್ ನ್ಯೂಟನ್ನಿಯನ್ ಆಂಡ್ ನಾನ್-ನ್ಯೂಟನ್ನಿಯನ್ ಫ್ಲುಯಿಡ್ಸ್’ ಎಂಬ ಮಹಾಪ್ರಬಂಧಕ್ಕೆ ಪಿ.ಎಚ್ಡಿ ಪದವಿ ನೀಡಲಾಗಿದೆ ಎಂದು ದಾವಣಗೆರೆ ವಿವಿ ಪರೀಕ್ಷಾಂಗ ಕುಲಸಚಿವ ಪ್ರೊ.ಸಿ.ಕೆ.ರಮೇಶ್ ತಿಳಿಸಿದ್ದಾರೆ.