SUDDIKSHANA KANNADA NEWS/ DAVANAGERE/ DATE:08-07-2024
ದಾವಣಗೆರೆ: ಎರಡು ಲಕ್ಷ ರೂಪಾಯಿ ಪಡೆಯುವಾಗ ಹರಿಹರ ನಗರಸಭೆ ಆಯುಕ್ತ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಬಸವರಾಜ್ ಐಗೂರು ಎಂಬುವವರೇ ಲೋಕಾಯುಕ್ತ ಪೊಲೀಸ್ ಬಲೆಗೆ ಬಿದ್ದ ನಗರಸಭೆ ಕಮೀಷನರ್. ಸಾಮಾಗ್ರಿ ಸರಬರಾಜು ಗುತ್ತಿಗೆದಾರ ಕರಿಬಸಪ್ಪ ಎಂಬುವವರಿಂದ ಎರಡು ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ದಾಳಿ ನಡೆಸಿದ್ದಾರೆ. ಹರಿಹರ ನಗರದ ವಿದ್ಯಾನಗರದಲ್ಲಿರುವ ವಾಸವಿದ್ದ ರೂಮಿನಲ್ಲಿ ಲೋಕಾಯುಕ್ತ ಪೊಲೀಸರ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.
ಸಾಮಗ್ರಿ ಸರಬರಾಜು ಮಾಡಲು ಕರಿಬಸಪ್ಪ ಎಂಬ ಗುತ್ತಿಗೆದಾರ ಅನುಮತಿಗೆ ಹೋಗಿದ್ದರು. ಈ ವೇಳೆ ಎರಡು ಲಕ್ಷ ರೂಪಾಯಿಗೂ ಹೆಚ್ಚು ಹರಿಹರ ನಗರಸಭೆ ಆಯುಕ್ತ ಬಸವರಾಜ್ ಐಗೂರು ಬೇಡಿಕೆ ಇಟ್ಟಿದ್ದರು. ಇಂದು 2 ಲಕ್ಷ ರೂಪಾಯಿ ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.