SUDDIKSHANA KANNADA NEWS/DAVANAGERE/DATE:09_10_2025
ನವದೆಹಲಿ: ರಾವಲ್ಪಿಂಡಿ ಚಿಕನ್, ಟಿಕ್ಕಾ ಮಸಾಲ, ಬಹವಾಲ್ಪುರ್ ನಾನ್. ಇದು ಐಎಎಫ್ ಮಾಡಿರುವ ಊಟದ ಮೆನು. ಪಾಕಿಸ್ತಾನದ ವಿರುದ್ಧ ಯಶಸ್ವಿ ಕಾರ್ಯಾಚರಣೆ ಬಳಿಕ ಐಎಎಫ್ ಈ ರೀತಿಯ ಮೆನು ಸಿದ್ಧಪಡಿಸಿದ್ದು ಸಖತ್ ಗಮನ ಸೆಳೆದಿದೆ.
READ ALSO THIS STORY: ಭಾರತದ ಮುಸ್ಲಿಂ ವಿದ್ಯಾವಂತ ಯುವತಿಯರು, ಮಹಿಳೆಯರೇ ಟಾರ್ಗೆಟ್: ಭಯೋತ್ಪಾದನೆಗೆ ಆಕರ್ಷಿಸಲು ಜೈಶ್-ಎ-ಮೊಹಮ್ಮದ್ ಹೂಡಿದೆ ಕುತಂತ್ರ!
ಆಪರೇಷನ್ ಸಿಂಧೂರ್ ಸಮಯದಲ್ಲಿ ಪಾಕ್ ವಾಯುನೆಲೆ ಸೇರಿದಂತೆ ಭಯೋತ್ಪಾದಕ ಶಿಬಿರಗಳ ಮೇಲೆ ಭಾರತದ ದಾಳಿಯು ಮರ್ಮಾಘಾತ ಕೊಟ್ಟಿತ್ತು. ವಾಯುಪಡೆಯ ಯಶಸ್ವಿ ದಾಳಿಯ ಬಗ್ಗೆ ಪಾಕಿಸ್ತಾನ ಟೀಕಿಸುವ ಮೆನು ಗಮನ ಸೆಳೆಯುತ್ತಿದೆ.
ಭೋಲಾರಿ ವಾಯುನೆಲೆಯ ಮೇಲೆ ದಾಳಿ ಮಾಡುವುದರಿಂದ ಹಿಡಿದು ಮುರಿಡ್ಕೆಯಲ್ಲಿ ಲಷ್ಕರ್ ಭಯೋತ್ಪಾದಕ ಶಿಬಿರಗಳನ್ನು ನಾಶಮಾಡುವವರೆಗೆ ಇಸ್ಲಾಮಾಬಾದ್ಗೆ ಉಂಟಾದ ಹಾನಿಯನ್ನು ಮೆನುವಿನಲ್ಲಿ ಅಣಕಿಸಲಾಗಿದೆ.
ಭಾರತೀಯ ವಾಯುಪಡೆ ದಿನದಂದು ಬಡಿಸುವ ಮೆನುವಿನಲ್ಲಿ ರಾವಲ್ಪಿಂಡಿ ಚಿಕನ್ ಟಿಕ್ಕಾ ಮಸಾಲ, ಭೋಲಾರಿ ಪನೀರ್ ಮೇಥಿ ಮಲೈ ಮತ್ತು ಬಾಲಕೋಟ್ ತಿರಮಿಸು ಬರೆಸಲಾಗಿದೆ.
93 ನೇ ವಾಯುಪಡೆ ದಿನದ ಒಂದು ದಿನದ ನಂತರ, ಹಲವಾರು ಸೇನಾ ನಿವೃತ್ತರು ಮತ್ತು ಪತ್ರಕರ್ತರು ಎಕ್ಸ್ ನಲ್ಲಿ ಮೆನುವನ್ನು ಹಂಚಿಕೊಂಡಿದ್ದು, ಇದು ಈಗ ವೈರಲ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುವ ಚಿತ್ರದ ಸತ್ಯಾಸತ್ಯತೆ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.
ಬಹವಲ್ಪುರ್ ನಾನ್ ಮತ್ತು ರಾವಲ್ಪಿಂಡಿ ಚಿಕನ್ ಟಿಕ್ಕಾ ಮಸಾಲವನ್ನು ಮುಖ್ಯ ಖಾದ್ಯವಾಗಿ ನೀಡಲಾಗಿದ್ದರೆ, ಭಾರತೀಯ ವಾಯುಪಡೆಯು ಪಾಕಿಸ್ತಾನದ ಬಾಲಕೋಟ್, ಮುಜಫರಾಬಾದ್ ಮತ್ತು ಮುರಿಡ್ಕೆಯಲ್ಲಿರುವ ಭಯೋತ್ಪಾದಕ ಶಿಬಿರಗಳು ಮತ್ತು ತರಬೇತಿ ಕೇಂದ್ರಗಳ ಮೇಲೆ ನಡೆಸಿದ ದಾಳಿಯನ್ನು ಸಿಹಿತಿಂಡಿಗಳಾಗಿ ನೀಡಲಾಯಿತು.