ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಕಿಡ್ನ್ಯಾಪ್ ಕೇಸ್‌: ನನ್ನನ್ನು ಯಾರೂ ಬಲವಂತವಾಗಿ ಕರೆದೊಯ್ದಿಲ್ಲವೆಂದ ಸಂತ್ರಸ್ತೆ

On: May 13, 2024 12:31 PM
Follow Us:
---Advertisement---

ಬೆಂಗಳೂರು: ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ದಾಖಲಾಗಿದ್ದ ಅಪಹರಣ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಕಿಡ್ನ್ಯಾಪ್‌ ಪ್ರಕರಣದ ಸಂತ್ರಸ್ತೆಯು ತನ್ನನ್ನು ಯಾರೂ ಬಲವಂತವಾಗಿ ಕರೆದೊಯ್ದಿಲ್ಲವೆಂದ ಹೇಳಿಕೆಯ ವಿಡಿಯೋ ಇದೀಗ ವೈರಲ್ ಆಗಿದೆ.

ನಾಪತ್ತೆಯಾಗಿದ್ದ ಸಂತ್ರಸ್ತೆಯ ಈ ಹೇಳಿಕೆಯು ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಕೊಟ್ಟಿದೆ. ಈ ವಿಡಿಯೋದಲ್ಲಿ ಸಂತ್ರಸ್ತೆ, ನನ್ನನ್ನು ಯಾರೂ ಬಲವಂತವಾಗಿ ಕರೆದೊಯ್ದಿಲ್ಲ. ನನ್ನನ್ನ ಯಾರೂ ಕಿಡ್ನ್ಯಾಪ್‌ ಮಾಡಿಲ್ಲ. ನಾನೇ ಸಂಬಂಧಿಕರ ಮನೆಗೆ ಹೋಗಿದ್ದೆ. ನನ್ನ ಮಗ ಏನೂ ಗೊತ್ತಿಲ್ಲದಂತೆ ದೂರು ನೀಡಿದ್ದಾನೆ ಎಂದು ಹೇಳಿದ್ದಾರೆ.

ಜನ ಹಿಂಗೆ ಮಾತಾನಾಡುತ್ತಿರುವುದಕ್ಕೆ ಬೇಸರಗೊಂಡು ಸಂಬಂಧಿಕರ ಮನೆಗೆ 4 ದಿನ ಕಾಲ ಕಳೆದುಕೊಂಡು ಬರಲು ಹೋಗಿದ್ದೆ. ಆದರೆ ಇಂದು ಟಿವಿ ನೋಡಬೇಕಾದ್ರೆ ಗೊತ್ತಾಯ್ತು. ಈ ತರ ಎಲ್ಲಾ ಮಾಡ್ತಿದ್ದಾರೆ ಅಂತ. ಅದನ್ನ ನೋಡಿ ಯಾಕಪ್ಪ ಹೀಗೆಲ್ಲಾ ಮಾಡಿದ್ರು ಅಂತ ಯೋಚಿಸಿದೆ. ಆದರೆ ಯಾವ ತೊಂದ್ರೆನೂ ಈಗ ಇಲ್ವಲ್ಲ. ಯಾಕ್ ಹೀಗೆ ಮಾಡ್ತಿದ್ದಾರೆ. ಅಂತ ನಾನೇ ವಿಡಿಯೋ ಮಾಡಿಸಿದೆ ಎಂದು ಸಂತ್ರಸ್ತೆ ತಿಳಿಸಿದ್ದಾರೆ.

Join WhatsApp

Join Now

Join Telegram

Join Now

Leave a Comment