ನೀವು ಗ್ಯಾರಂಟಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಲು, ನಿಮ್ಮ ಖಾತೆಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಎಲ್ಲವೂ ಲಿಂಕ್ ಆಗಿರಬೇಕು.
ಯಾರು ಸರ್ಕಾರ ತಿಳಿಸಿರುವಂತೆ e-KYC ಪ್ರಕ್ರಿಯೆ ಪೂರ್ಣಗೊಳಿಸಿಕೊಂಡಿರುವುದಿಲ್ಲೋ ಅಂತವರ ಖಾತೆಗೆ ಯಾವುದೇ ಕಾರಣಕ್ಕೂ ಹಣ ಜಮಾ ಆಗುವುದಿಲ್ಲ. ಅಷ್ಟೇ ಅಲ್ಲದೇ ಅಂತಹ ರೇಷನ್ ಕಾರ್ಡ್ ಅನ್ನು ಕೂಡ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಸರ್ಕಾರ ನಿರ್ಧರಿಸಿದೆ. ಯಾವಾಗ ಕೆವೈಸಿ ಮಾಡಿಸಿಕೊಳ್ಳುತ್ತೀರೋ ಆಗ ಮತ್ತೆ ತಡೆ ಹಿಡಿಯಲಾದ ರೇಷನ್ ಕಾರ್ಡ್ ಅನ್ನು ಬಿಡುಗಡೆಗೊಳಿಸಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ.