ಕ್ರಿಕೆಟ್ ಭದ್ರಾ ಡ್ಯಾಂ  ಇರಾನ್‌ ಅಮೆರಿಕ ಕರೆಂಟ್ DINA BHAVISHYA cinema SHIVAMOGGA ಷೇರು ಕ್ರೀಡೆ ವಾಣಿಜ್ಯ Gold Rate ಸಾಹಿತ್ಯ JOB NEWS

---Advertisement---

ಚಿನ್ನದ ಬೆಲೆ ಗಗನಕ್ಕೆೇರಿದ್ದರಿಂದ ಕಳ್ಳರಿಂದ ತಪ್ಪಿಸಿಕೊಳ್ಳಲು ಪೊಲೀಸರ ಈ ಸೂಚನೆಗಳ ಪಾಲಿಸಿದರೆ ಸಾಕು!

On: October 31, 2025 12:52 PM
Follow Us:
ಚಿನ್ನ
---Advertisement---

SUDDIKSHANA KANNADA NEWS/DAVANAGERE/DATE:31_10_2025

ದಾವಣಗೆರೆ: ಚಿನ್ನದ ಬೆಲೆ ಗಗನಕ್ಕೇರುತ್ತಿದೆ. ಕಳ್ಳರು ಕಳ್ಳತನಕ್ಕೆ ಇಳಿಯುವ ಸಾಧ್ಯತೆ ಇದೆ. ಮಹಿಳೆಯರು, ಯುವತಿಯರು, ವೃದ್ಧೆಯರು, ಒಂಟಿ ಮಹಿಳೆಯರ ಚಿನ್ನದ ಸರ ಕಳ್ಳತನ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತವೆ.

ಈ ಸುದ್ದಿಯನ್ನೂ ಓದಿ: ಅಡಿಕೆ ಕ್ಯಾನ್ಸರ್ ಕಾರಕವಲ್ಲ ಬದಲಿಗೆ ಕ್ಯಾನ್ಸರ್ ನಿವಾರಕ: ನೆಕ್ಸ್ಟ್ ಜೈನ್ ಲೈಫ್ ಸಂಶೋಧನೆಯಲ್ಲಿ ಬಹಿರಂಗ, ವಿಶ್ವಸಂಸ್ಥೆಗೆ ಮನವಿ!
ಹಾಗಾಗಿ, ಪೊಲೀಸರು ಜನರು ಯಾವ ರೀತಿಯ ಮುನ್ನಚ್ಚರಿಕೆ ವಹಿಸಬೇಕೆಂಬ ಬಗ್ಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ. ಈ ಸೂಚನೆಗಳನ್ನು ಪಾಲಿಸಿದರೆ ಕಳ್ಳರಿಂದ ತಪ್ಪಿಸಿಕೊಳ್ಳಲು ಸಾಧ್ಯ. ಈ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

ಚಿನ್ನದ ಬೆಲೆ ಏರುತ್ತಿರುವ ಕಾರಣ, ಕಳ್ಳರು ಹಲವೆಡೆ ಕಳ್ಳತನಕ್ಕಾಗಿ ಇಳಿಯುವ ಸಾಧ್ಯತೆ ಇರುವುದರಿಂದ ಜನರು ಎಚ್ಚರ ವಹಿಸಬೇಕೆಂದು ಪೊಲೀಸ್ ಪ್ರಕಟಣೆ ತಿಳಿಸಿದೆ.

ಈ ಸೂಚನೆಗಳ ಪಾಲಿಸಿ: 
  • ಪೋಲೀಸರ ರಾತ್ರಿ ಗಸ್ತು ಬಲಪಡಿಸುವ ಭಾಗವಾಗಿ, ಬೀಟ್ ಪೋಲೀಸರೊಂದಿಗೆ ಎಲ್ಲರೂ ಸಹಕರಿಸಬೇಕು. ನೆರೆಹೊರೆಯವರೊಂದಿಗೆ ಸಹಕರಿಸಿ ಮತ್ತು ಅವರ ಫೋನ್ ನಂಬರ್ಗಳನ್ನು ಇಟ್ಟುಕೊಳ್ಳಿ.
  • ರಾತ್ರಿ ಸಮಯದಲ್ಲಿ ಮನೆಯ ಸುತ್ತಲೂ ಬೆಳಕು ಬೀಳುವ ರೀತಿಯಲ್ಲಿ ದೀಪಗಳನ್ನು ಅಳವಡಿಸಿ.
  • ರಾತ್ರಿ ಹೊರಗೆ ಅಸಾಮಾನ್ಯ ಶಬ್ದ ಕೇಳಿದರೆ, ಬಾಗಿಲು ತೆರೆಯದೆ ನೆರೆಹೊರೆಯವರಿಗೆ ಕರೆ ಮಾಡಿ.
  • ಪ್ರದೇಶಗಳಲ್ಲಿ ಅಪರಿಚಿತರನ್ನು ಕಂಡರೆ, ಅವರ ಫೋಟೋ ತೆಗೆದು 112 ಗೆ ಕರೆ ಮಾಡಿ ತಿಳಿಸಿ.
  • ಹಳೆಯ ವಸ್ತುಗಳಿಗಾಗಿ ಬರುವವರಿಗೆ ವಸ್ತುಗಳನ್ನು ಕೊಡದಿರಿ.
  • ಅನುಮಾನ ತೋರಿದರೆ ಪೋಲೀಸರಿಗೆ ತಿಳಿಸಿ.
  • ರಾತ್ರಿ 11 ಗಂಟೆಯಿಂದ ಬೆಳಿಗ್ಗೆ 4 ಗಂಟೆಯವರೆಗೆ ಸ್ವಯಂ ನಿಗಾ ವಹಿಸಿ; ಗುಂಪು ನಿಗಾವನ್ನು ಬಲಪಡಿಸಿ.ಮನೆಯ ಸುತ್ತಮುತ್ತಲು ಬರುವ ಅಪರಿಚಿತರನ್ನು ಗಮನಿಸಿ.
  • ಸಾಧ್ಯವಿರುವವರು ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಿ. ಅದನ್ನು ಮೊಬೈಲ್‌ನೊಂದಿಗೆ ಸಂಪರ್ಕಿಸಿ ಅಲಾರಂ ಅಳವಡಿಸಿ.
  • ಮನೆಗೆ ಬೀಗ ಹಾಕಿ ಹೊರಗೆ ಹೋಗುವವರು ನೆರೆಹೊರೆಯವರಿಗೆ ಮತ್ತು ಪೋಲೀಸರಿಗೆ ತಿಳಿಸಿ.ಬೆಲೆಬಾಳುವ ವಸ್ತುಗಳನ್ನು ಮನೆಯಲ್ಲಿ ಇಡದಿರಿ.
  • ದೇಣಿಗೆ ಅಥವಾ ಇನ್ನಿತರ ಸಹಾಯಕ್ಕಾಗಿ ಮನೆಗೆ ಬಂದಾಗ ಬಾಗಿಲು ತೆರೆಯದಿರಿ; ಸಾಧ್ಯವಾದಷ್ಟು ಗೇಟ್ ಬೀಗ ಹಾಕಿರಿ.
  • ಪ್ರವಾಸಕ್ಕೆ ಹೋಗುವವರು ಪೋಲೀಸ್ ಸ್ಟೇಷನ್ನಿನ App ನಲ್ಲಿ ದಾಖಲಿಸಿ, ತಮ್ಮ ಸ್ಥಳವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡದಿರಿ.
  • ಬೈಕ್ ಗಳಲ್ಲಿ ವೇಗವಾಗಿ ಓಡಾಡುವವರ ವಾಹನದ ನಂಬರ್ ಪ್ಲೇಟ್ ಫೋಟೋ ತೆಗೆದು ಪೋಲೀಸರಿಗೆ ತಿಳಿಸಿ.ಮನೆಗಳಲ್ಲಿ ಮೊಬೈಲ್ ಫೋನ್ಗಳನ್ನು ನಿರ್ಲಕ್ಷ್ಯದಿಂದ ಇಡದಿರಿ.
  • ಇಂತಹ ನಿಮಗೆ ತಿಳಿದಿರುವ ವಿಷಯಗಳತ್ತ ಗಮನಹರಿಸಿದರೆ, ಒಗ್ಗಟ್ಟಿನಿಂದ ನಮಗೆ ಇದನ್ನು ಎದುರಿಸಲು ಸಾಧ್ಯವಾಗುತ್ತದೆ.
  • ನೆನಪಿಡಿ, ಯಾವುದೇ ಸಮಯದಲ್ಲಿ ಸಿದ್ಧವಾಗಿರುವ ಪೋಲೀಸ್ ಸಂಖ್ಯೆ

ದೇವಾಲಯ ಸಮಿತಿಗಳು, ಮಸೀದಿ ಸಮಿತಿಗಳು ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಥಾಪಿಸಿ. ಚಿನ್ನ, ಹಣವನ್ನು ಆರಾಧನಾ ಸ್ಥಳಗಳಲ್ಲಿ ಇಡದಿರಿ. ಜಾಗರೂಕರಾಗಿರಿ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯೋಗರಾಜ್

ಯೋಗರಾಜ್, ಸುದ್ದಿಕ್ಷಣ.ಕಾಂ ಸಂಪಾದಕ

Join WhatsApp

Join Now

Join Telegram

Join Now

ಮಿಸ್ ಮಾಡ್ದೆ ಓದಿ

ಕರ್ನಾಟಕ

ನೀತಿ ಆಯೋಗ 2025 ವರದಿ: ಐಟಿ, ಹಣಕಾಸು, ಆತಿಥ್ಯ ಮತ್ತು ರಿಯಲ್ ಎಸ್ಟೇಟ್ ಸೇರಿ ಸೇವಾ ಕ್ಷೇತ್ರಗಳಲ್ಲಿ ದೇಶದಲ್ಲೇ ಕರ್ನಾಟಕ ಫಸ್ಟ್!

ಸಿದ್ದರಾಮಯ್ಯ

18000ಕ್ಕೂ ಹೆಚ್ಚು ಶಿಕ್ಷಕರ ನೇಮಕಾತಿಗೆ ಅಧಿಸೂಚನೆ: ಉದ್ಯೋಗದ ಬಗ್ಗೆ ಮಹತ್ವದ ಮಾಹಿತಿ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಸಿದ್ದರಾಮಯ್ಯ

ಕೇಂದ್ರ ಸರ್ಕಾರದ ದ್ರೋಹದಿಂದ 1 ಲಕ್ಷ ಕೋಟಿ ರೂ. ಕರ್ನಾಟಕಕ್ಕೆ ನಷ್ಟ: ಸಿಎಂ ಸಿದ್ದರಾಮಯ್ಯ ಸಿಡಿಮಿಡಿ!

ಸಿದ್ದರಾಮಯ್ಯ

ಎಐನಿಂದ ಉದ್ಯೋಗ ನಷ್ಟವಾಗದಂತೆ ಕನ್ನಡ ಭಾಷೆ ಹೊಸ ಸವಾಲಿಗೆ ಬೇಕಾದ ಹಾಗೆ ಸಿದ್ಧಪಡಿಸಲು ಸರ್ಕಾರ ಬದ್ದ: ಸಿಎಂ ಸಿದ್ದರಾಮಯ್ಯ ಘೋಷಣೆ

ಸಿದ್ದರಾಮಯ್ಯ

800 ಕನ್ನಡ ಮತ್ತು 100 ಉರ್ದುಶಾಲೆಗಳು ಕೆಪಿಎಸ್ ಶಾಲೆಗಳಾಗಿ ಅಭಿವೃದ್ಧಿ ಜೊತೆಗೆ ಮದರಸಾಗಳಲ್ಲಿ ಕನ್ನಡ ಕಲಿಕೆಗೆ ಆದ್ಯತೆ: ಸಿದ್ದರಾಮಯ್ಯ ಘೋಷಣೆ!

ಕರ್ನಾಟಕ ರಾಜ್ಯೋತ್ಸವ

ರಾಜ್ಯ, ಜಿಲ್ಲಾಡಳಿತದಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಆಯ್ಕೆಯಲ್ಲಿ ಛಾಯಾಗ್ರಾಹಕರ ಕಡೆಗಣನೆ: ಮನು ಎಂ. ದೇವಗಿರಿ ಆರೋಪ!

Leave a Comment