SUDDIKSHANA KANNADA NEWS/ DAVANAGERE/DATE:05_08_2025
ದಾವಣಗೆರೆ: ನಗರದ ಹಳೇಕುಂದುವಾಡದಲ್ಲಿ 15ಕ್ಕೂ ಹೆಚ್ಚು ಜನರ ಮೇಲೆ ಹುಚ್ಚು ನಾಯಿ ದಾಳಿ ಮಾಡಿದ್ದು ಜನರು ಭಯಭೀತರಾಗಿದ್ದರು. ಎಲ್ಲರಿಗೂ ಚಿಕಿತ್ಸೆ ನೀಡಲಾಗಿದೆ.
READ ALSO THIS STORY: ವೈಯಕ್ತಿಕ ಸಾಲ ತೆಗೆದುಕೊಳ್ಳುವಾಗ ಈ ಐದು ತಪ್ಪು ಮಾಡಬೇಡಿ!
ಹುಚ್ಚು ನಾಯಿಯೊಂದು ಜನರ ಮೇಲೆ ದಾಳಿ ಮಾಡಿದ್ದು, ಜನರು ಮನೆಯಿಂದ ಹೊರಗಡೆ ಬರಲು ಹೆದರುವ ಪರಿಸ್ಥಿತಿ ನಿರ್ಮಾಣ ಆಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡಿತು. ಮಹಾನಗರ ಪಾಲಿಕೆ ಅಧಿಕಾರಿಗಳಿಂದ ಆಪರೇಷನ್ ಡಾಗ್ ಕಾರ್ಯಾಚರಣೆ ನಡೆಯಿತು.
ಹಳೇ ಕುಂದುವಾಡ ಗ್ರಾಮದಲ್ಲಿ ಆಪರೇಷನ್ ಡಾಗ್ ನಡೆಸಿದ ಅಧಿಕಾರಿಗಳು ಸುಮಾರು 10 ಕ್ಕಿಂತ ಹೆಚ್ಚು ಅಧಿಕ ನಾಯಿಗಳನ್ನು ಸೆರೆ ಹಿಡಿದರು. ನಾಯಿಗಳನ್ನ ಹಿಡಿದು ರೇಬೀಸ್ ಚುಚ್ಚುಮದ್ದು ನೀಡಲಿರುವ ಅಧಿಕಾರಿಗಳು ನಂತರ
ನಾಯಿ ಹಿಡಿದ ಸ್ಥಳಕ್ಕೆ ಬಿಟ್ಟು ಹೋಗಲಿದ್ದಾರೆ ಎಂದು ಮಹಾನಗರ ಪಾಲಿಕೆ ಆರೋಗ್ಯ ನಿರೀಕ್ಷಕ ರಾಜಪ್ಪ ತಿಳಿಸಿದ್ದಾರೆ.