• ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
Saturday, May 31, 2025
Social icon element need JNews Essential plugin to be activated.
Kannada News-suddikshana
No Result
View All Result
  • Login
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ
No Result
View All Result
Morning News
No Result
View All Result

ದಾವಣಗೆರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ವಿಕಸಿತ ಕೃಷಿ ಸಂಕಲ್ಪ ಪೂರ್ವ ಮುಂಗಾರು 2025 ಅಭಿಯಾನ! ಸ್ಪೆಷಾಲಿಟಿ ಏನು?

Editor by Editor
May 29, 2025
in ದಾವಣಗೆರೆ, ಬೆಂಗಳೂರು
0
ದಾವಣಗೆರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ವಿಕಸಿತ ಕೃಷಿ ಸಂಕಲ್ಪ ಪೂರ್ವ ಮುಂಗಾರು 2025 ಅಭಿಯಾನ! ಸ್ಪೆಷಾಲಿಟಿ ಏನು?

SUDDIKSHANA KANNADA NEWS/ DAVANAGERE/ DATE-29-05-2025

ದಾವಣಗೆರೆ: ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ “ವಿಕಸಿತ ಕೃಷಿ ಸಂಕಲ್ಪ ಪೂರ್ವ ಮುಂಗಾರು 2025 ಅಭಿಯಾನ” ಆರಂಭಗೊಂಡಿದ್ದು, ಜೂನ್ 16ರವರೆಗೆ ನಡೆಯಲಿದೆ.

ಭಾರತ ಸರ್ಕಾರದ ಕೃಷಿ ಸಚಿವಾಲಯದ ಮಹತ್ವದ ಕಾರ್ಯಕ್ರಮ ಇದಾಗಿದೆ. ಕಾರ್ಯಕ್ರಮವು ಭಾರತೀಯ ಕೃಷಿ ಅನುಸಂಧಾನ ಪರಿಷತ್ ನವದೆಹಲಿ ಹಾಗೂ ಅದರ ನಾನಾ ಅಂಗಸಂಸ್ಥೆಗಳು, ಕರ್ನಾಟಕ ಸರ್ಕಾರದ ಅಭಿವೃದ್ಧಿ ಇಲಾಖೆಗಳಾದ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಮೀನುಗಾರಿಕೆ ಇಲಾಖೆ, ಪಶು ಸಂಗೋಪನೆ ಹಾಗೂ ಪಶುವೈದ್ಯ ಸೇವಾ ಇಲಾಖೆ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ, ಆತ್ಮಯೋಜನೆ, ಹಾಗೂ ಇತರೆ ಸ್ಥಳೀಯ ಕೃಷಿಗೆ ಸಂಬಂಧಿಸಿದ ಸಂಸ್ಥೆಗಳ ಸಹಯೋಗದಲ್ಲಿ ಮುಂಗಾರು ಹಂಗಾಮಿನಲ್ಲಿ ಕೃಷಿ ಕ್ಷೇತ್ರಕ್ಕೆ ಹೊಸ ತಾಂತ್ರಿಕತೆಗಳು ಲಭ್ಯವಾಗುವಂತೆ ಅಭಿಯಾನವನ್ನು ಏರ್ಪಡಿಸಲಾಗಿದೆ.

ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ ಹಾಗೂ ತರಳಬಾಳು ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಸಿರಿಗೆರೆ ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ಥಾಪಿತಗೊಂಡಿರುವ ಐ.ಸಿ.ಎ.ಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರ, ದಾವಣಗೆರೆ ಮುಂದಾಳತ್ವದಲ್ಲಿ ಶ್ರೀ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು ಕೈಗೊಂಡಿರುವ ದಾವಣಗೆರೆ ಜಿಲ್ಲೆಯ ಉಬ್ರಾಣಿ, ಸಾಸ್ವೆಹಳ್ಳಿ, ಜಗಳೂರು, ಭರಮಸಾಗರ ಪ್ರದೇಶಗಳ ಏತನೀರಾವರಿ ಯೋಜನೆಗಳಿಂದ ಕೃಷಿಕರಿಗೆವಿವಿಧ ಬೆಳೆಗಳ ಅನುಕೂಲತೆಗಳನ್ನು ಈ ಅಭಿಯಾನದ ಮುಖಾಂತರ ರೈತಬಾಂಧವರಿಗೆ ತಿಳಿಸಿಕೊಡಲಾಗುವುದು.

ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನಿಗಳು, ಅಧಿಕಾರಿಗಳು ರೈತರಕಡೆ ತೆರಳಿ ಹವಮಾನ ಆಧಾರಿತ ಹೊಸ ತಳಿಗಳ ಪರಿಚಯ, ರೋಗ ಮತ್ತು ಕೀಟಗಳ ಸಮಗ್ರ ನಿರ್ವಹಣೆ, ಸಮಗ್ರ ಪೋಷಕಾಂಶ ನಿರ್ವಹಣೆ, ಅಧಿಕ ಇಳುವರಿ ಕೊಡುವ ತಾಂತ್ರಿಕತೆಗಳು, ಕಡಿಮೆ ಖರ್ಚಿನ ತಾಂತ್ರಿಕತೆಗಳು, ನೈಸರ್ಗಿಕ ಕೃಷಿ, ಗ್ರಾಮೀಣ ಪ್ರದೇಶದಲ್ಲಿ ಕೃಷಿ ಉದ್ಯಮಗಳು ಬಗ್ಗೆ ಮಾಹಿತಿಕೊಡಲಾಗುವುದು.

ಈ ಅಭಿಯಾನಕ್ಕೆ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿ ಸಾಂಕೇತಿಕವಾಗಿ ಕೃಷಿ ಸಂಜೀವಿನಿ ರಥಗಳಿಗೆ ಬಾವುಟ ನಿಶಾನೆ ಮೂಲಕ ಚಾಲನೆ ನೀಡಲಾಗಿದೆ. ಸುಮಾರು 90 ಹಳ್ಳಿಗಳನ್ನು 15 ದಿನಗಳ ಈ ಅಭಿಯಾನ ಕಾರ್ಯಕ್ರಮವು 18,000 ಕೃಷಿ ಕುಟುಂಬಗಳನ್ನು ತಾಂತ್ರಿಕ ಮಾಹಿತಿ ಮೂಲಕ ತಲುಪುವ ಉದ್ದೇಶ ಹೊಂದಿದೆ. ದೇಶದ 731 ಕೃಷಿ ವಿಜ್ಞಾನ ಕೇಂದ್ರಗಳು 700 ಜಿಲ್ಲೆಗಳಲ್ಲಿ 2,000 ಕ್ಕೂ ಹೆಚ್ಚು ವಿಜ್ಞಾನಿಗಳ ತಂಡಗಳೊಂದಿಗೆ ಸುಮಾರು 1.5 ಕೋಟಿರೈತರೊಂದಿಗೆ ನೇರ ಸಂವಾದ
ನಡೆಸಲಿದ್ದಾರೆ. ಜಿಲ್ಲೆಯ ಪ್ರಗತಿಪರ ಕೃಷಿಕರು ತಮ್ಮ ಅನುಭವಗಳನ್ನು ಈ ಅಭಿಯಾನದಲ್ಲಿ ಹಂಚಿಕೊಳ್ಳಲಿದ್ದಾರೆ.

ಹೊಸ ತಂತ್ರಜ್ಞಾನ ಮಾಹಿತಿಗಳ ಜೊತೆಗೆ ಸರ್ಕಾರದಯೋಜನೆ ಕುರಿತು ಮಾಹಿತಿ ನೀಡಲಾಗುವುದು. ಸಂಶೋಧನೆಗೆ ಅಗತ್ಯವಿರುವ ವಿಚಾರಗಳನ್ನೂ ಗುರುತಿಸಲಾಗುವುದು ಎಂದು ಐಸಿಎಆರ್- ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ದೇವರಾಜ ಟಿ. ಎನ್. ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಅಭಿಯಾನ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರೈತ ಬಾಂಧವರು ಭಾಗವಹಿಸಿ ಇದರ ಪ್ರಯೋಜನ ಪಡೆದುಕೊಳ್ಳಲು ತರಳಬಾಳು ಶ್ರೀಗಳವರು ಈ ಮೂಲಕ ಆಶೀರ್ವಾದ ಪೂರಕವಾಗಿ ತಿಳಿಸಿದ್ದಾರೆ.

Next Post
ಈ ರಾಶಿಯವರಿಗೆ ಕಷ್ಟ ಕಾಲದಲ್ಲಿ ಪತ್ನಿಯೇ ಆಸರೆ, ಈ ರಾಶಿಯವರಿಗೆ ಪೂರ್ವಜರ ಆಸ್ತಿ ಸಿಗಲಿದೆ

ಈ ರಾಶಿಯವರ ವ್ಯಾಪಾರಕ್ಕೆ ಗ್ರಾಹಕರ ಕೊರತೆ, ಈ ರಾಶಿಯವರ ಮದುವೆಗೆ ಬಂದ ಸಂಬಂಧ ಫಿಕ್ಸ್ ಆಗುತ್ತಿಲ್ಲ 

Leave a Reply Cancel reply

Your email address will not be published. Required fields are marked *

Recent Posts

  • ಈ ರಾಶಿಯ ಕಲಾವಿದರಿಗೆ ಶುಭ ಸಂದೇಶ, ಈ ರಾಶಿಯವರಿಗೆ ಎಲ್ಲಾ ಇದ್ದು ಏನೂ ಕೈಗೂಡುತ್ತಿಲ್ಲ
  • ಶತ್ರು ರಾಷ್ಟ್ರ ಪಾಕ್ ಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡಿದ್ದೇ ಬ್ರಹ್ಮೋಸ್: ಪಿಎಂ ನರೇಂದ್ರ ಮೋದಿ ಶ್ಲಾಘನೆ!
  • ಭಾರತದ ಪ್ರಾಬಲ್ಯ ಎಂದಿಗೂ ಒಪ್ಪಿಕೊಳ್ಳಲ್ಲ, ಬಲೂಚಿಸ್ತಾನಕ್ಕೆ ಬೆಂಬಲ: ಪಾಕ್ ಸೇನಾ ಮುಖ್ಯಸ್ಥನಿಗೆ ಪುಕಪುಕ..!
  • 5ಲಕ್ಷಕ್ಕೂ ಹೆಚ್ಚು ವಲಸಿಗರ ಕಾನೂನು ಸ್ಥಾನಮಾನ ರದ್ದತಿ: ಟ್ರಂಪ್‌ಗೆ ಅಮೆರಿಕದ ಸುಪ್ರೀಂಕೋರ್ಟ್ ಅನುಮತಿ..!
  • ಎಫ್ ಐಆರ್ ಸುಳ್ಳುಗಳ ಕಂತೆ: ಎನ್ಆರ್ ಐ ವಿರುದ್ಧ ಮಹಿಳೆ ದಾಖಲಿಸಿದ್ದ ರೇಪ್ ಕೇಸ್ ರದ್ದುಪಡಿಸಿದ ಸುಪ್ರೀಂ..!

Recent Comments

No comments to show.

Archives

  • May 2025
  • April 2025
  • March 2025
  • February 2025
  • January 2025
  • December 2024
  • November 2024
  • October 2024
  • September 2024
  • August 2024
  • July 2024
  • June 2024
  • May 2024
  • April 2024
  • March 2024
  • February 2024
  • January 2024
  • December 2023
  • November 2023
  • October 2023
  • September 2023
  • August 2023
  • July 2023
  • June 2023
  • May 2023
  • April 2023
  • March 2023

Categories

  • Chitradurga
  • CINEMA
  • DHARAVADA
  • DINA BHAVISHYA
  • Home
  • Hubli
  • JOB NEWS
  • KALABURAGI
  • Mangalore
  • MYSORE
  • SHIVAMOGGA
  • STATE
  • Stock market (ಷೇರು ಮಾರುಕಟ್ಟೆ)
  • UDUPI
  • ಅಡಿಕೆ ಧಾರಣೆ ಮತ್ತು ಅಡಿಕೆ ಮಾಹಿತಿ
  • ಕನ್ನಡ ರಾಜ್ಯೋತ್ಸವ
  • ಕ್ರಿಕೆಟ್
  • ಕ್ರೀಡೆ
  • ಕ್ರೈಂ ನ್ಯೂಸ್
  • ದಾವಣಗೆರೆ
  • ನವದೆಹಲಿ
  • ಬೆಂಗಳೂರು
  • ವಾಣಿಜ್ಯ
  • ವಿದೇಶ
  • ಸಾಹಿತ್ಯ
  • ಹಾರ್ಟ್ ಬೀಟ್ಸ್- ಬದುಕು ಬೆಳಕು
  • ದಾವಣಗೆರೆ
  • ಬೆಂಗಳೂರು
  • ನವದೆಹಲಿ
  • ಕ್ರೀಡೆ
  • ಕ್ರೈಂ ನ್ಯೂಸ್
  • ವಾಣಿಜ್ಯ
  • ಸಾಹಿತ್ಯ

© 2023 Newbie Techy -Suddi Kshana by Newbie Techy.

No Result
View All Result

© 2023 Newbie Techy -Suddi Kshana by Newbie Techy.

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In