ದಾವಣಗೆರೆ: ನಗರದ ಟೀಂ ಅಕಾಡೆಮಿಯಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಆದರೆ ಪೋಷಕರು ತನ್ನ ಮಗಳನ್ನು ಥಳಿಸಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಟೀಂ ಅಕಾಡೆಮಿ ವಿರುದ್ದ ಎಫ್ ಐಆರ್ ದಾಖಲಾಗಿದೆ.
ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಕುರುವತ್ತಿ ಗ್ರಾಮದ ರಂಜಿತಾ (18) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ ಎನ್ನಲಾಗುತ್ತಿದೆ.
ದಾವಣಗೆರೆಯ ಟೀಂ ಅಕಾಡೆಮಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ರಂಜಿತಾ ಅಕಾಡೆಮಿಗೆ ಸೇರಿದ ಹಾಸ್ಟೆಲ್ ನಲ್ಲಿ ಇದ್ದು ಓದುತ್ತಿದ್ದಳು. ಆದರೆ ನಿನ್ನೆ ಹಾಸ್ಟೆಲ್ ನಲ್ಲಿನ ಫ್ಯಾನ್ ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಲಾಗುತ್ತಿದೆ. ಆದರೆ ಪೋಷಕರು ಮಾತ್ರ ನನ್ನ ಮಗಳು ಆತ್ಮಹತ್ಯೆ ಮಾಡಿಕೊಳ್ಳುವಷ್ಟು ದುರ್ಬಲಳು ಅಲ್ಲ. ಆಕೆಯನ್ನು ಥಳಿಸಿ ಕೊಲೆ ಮಾಡಲಾಗಿದೆ ಎಂಬ ಗಂಭೀರ ಆರೋಪ
ಮಾಡಿದ್ದಾರೆ.
ಟೀಂ ಅಕಾಡೆಮಿ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿರುವ ಪೋಷಕರು ನನ್ನ ಮಗಳ ಸಾವಿಗೆ ಕಾರಣರ್ಯಾರು? ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು. ಮಗಳ ಸಾವಿಗೆ ಕಾರಣರಾದ ಯಾರನ್ನೂ ಬಿಡಬಾರದು ಎಂದು ಆಗ್ರಹಿಸಿದ್ದಾರೆ.
ಹೂವಿನಹಡಗಲಿ ತಾಲೂಕಿನ ಕುರುವತ್ತಿ ಗ್ರಾಮದ ರಂಜಿತಾ ಪ್ರತಿಭಾವಂತೆ. ಓದಿನಲ್ಲಿ ಮುಂದಿದ್ದಳು. ಹಾಗಾಗಿ ಪೋಷಕರು ಆಕೆಯನ್ನು ಟೀಂ ಅಕಾಡೆಮಿಗೆ ಸೇರಿಸಿದ್ದರು. ಆದರೆ ಈಗ ಈ ರೀತಿ ಆಗಿರುವುದರಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಮಗಳದ್ದು ಆತ್ಮಹತ್ಯೆ ಅಲ್ಲ, ಕೊಲೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಟೀಂ ಅಕಾಡೆಮಿ ವಿರುದ್ಧ
ಎಫ್ಐಆರ್ ದಾಖಲಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
- Davangere hostel death
- Davangere News
- FIR registered
- Huvinahadagali
- Murder allegations
- PU student death
- Ranjitha death case
- Team Academy Davangere
- Vidyanagar Police Station
- ಎಫ್ಐಆರ್ ದಾಖಲು
- ಕುರುವತ್ತಿ
- ಕೊಲೆ ಆರೋಪ
- ಟೀಂ ಅಕಾಡೆಮಿ
- ದಾವಣಗೆರೆ ಸುದ್ದಿ
- ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆ
- ರಂಜಿತಾ ಸಾವು
- ವಿದ್ಯಾನಗರ ಪೊಲೀಸ್ ಠಾಣೆ
- ಹೂವಿನಹಡಗಲಿ





Leave a comment