Home ದಾವಣಗೆರೆ EXCLUSIVE: ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಗೆ ಮುಸ್ಲಿಂ ಸಮುದಾಯ ಪಟ್ಟು : ಪಕ್ಷಾತೀತವಾಗಿ ಮುಖಂಡರ ಒಮ್ಮತದ ನಿರ್ಣಯ!
ದಾವಣಗೆರೆನವದೆಹಲಿಬೆಂಗಳೂರು

EXCLUSIVE: ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ ಕಾಂಗ್ರೆಸ್ ಟಿಕೆಟ್ ಗೆ ಮುಸ್ಲಿಂ ಸಮುದಾಯ ಪಟ್ಟು : ಪಕ್ಷಾತೀತವಾಗಿ ಮುಖಂಡರ ಒಮ್ಮತದ ನಿರ್ಣಯ!

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ದಶಕಗಳಿಂದ ನಡೆದುಬಂದಿರುವ ‘ಒಂದೇ ಕುಟುಂಬದ ರಾಜಕಾರಣ’ಕ್ಕೆ ಬ್ರೇಕ್ ಹಾಕಿ, ಈ ಬಾರಿ ಕಾಂಗ್ರೆಸ್ ಪಕ್ಷದಿಂದ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎಂದು ಮುಸ್ಲಿಂ ಸಮುದಾಯದ ಮುಖಂಡರು ಮತ್ತು ವಿವಿಧ ಮಸೀದಿಗಳ ಮುತುವಲ್ಲಿಗಳು ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.

ಬೂದಹಾಳ್ ರಸ್ತೆಯಲ್ಲಿನ ತಾಜ್ ಪ್ಯಾಲೇಸ್ ನಲ್ಲಿ ನಡೆದ ಜಿಲ್ಲಾ ಮುಸ್ಲಿಂ ಮುಖಂಡರು, ಮುತುವಲ್ಲಿಗಳ ಸಮಾವೇಶ ಮತ್ತು ಎಸ್ಐಆರ್ ಜಾಗೃತಿ ಸಭೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭೆಯ ಉಪ ಚುನಾವಣೆಯ ರಾಜಕೀಯ ಸಮಾಲೋಚನಾ ಸಭೆಯಲ್ಲಿ ಈ ಆಗ್ರಹ ಕೇಳಿ ಬಂದಿದೆ.

ಸಭೆಯಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್, “1994ರಿಂದಲೂ ಮುಸ್ಲಿಂ ಸಮುದಾಯವು ಶಾಮನೂರು ಕುಟುಂಬವನ್ನು ಬೆಂಬಲಿಸುತ್ತಾ ಬಂದಿದೆ. ಶೈಕ್ಷಣಿಕ, ಆರ್ಥಿಕ ಮತ್ತು ರಾಜಕೀಯವಾಗಿ ಹಿಂದುಳಿದಿರುವ ನಮ್ಮ ಸಮುದಾಯಕ್ಕೆ ಈ ಬಾರಿ ಶಾಮನೂರು ಕುಟುಂಬ ಬೆಂಬಲ ನೀಡುವ ಮೂಲಕ ತ್ಯಾಗ ಮಾಡಬೇಕು,” ಎಂದು ತಿಳಿಸಿದರು.

ಸಭೆಯ ಮುಖ್ಯಾಂಶಗಳು:

ಅಹಿಂದ ಬೆಂಬಲ:

ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಅಹಿಂದ ಮತಗಳ ಕ್ರೋಡೀಕರಣ ಸುಲಭವಾಗಲಿದ್ದು, ಗೆಲುವು ನಿಶ್ಚಿತ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಪಕ್ಷಾತೀತ ಒಕ್ಕೂಟ:

ಈ ಸಭೆಯಲ್ಲಿ ಕಾಂಗ್ರೆಸ್ ಮಾತ್ರವಲ್ಲದೆ ಜೆಡಿಎಸ್, ಬಿಜೆಪಿ, ಎಎಪಿ, ಎಸ್‌ಡಿಪಿಐ ಮತ್ತು ಎಐಎಂಐಎಂ ಪಕ್ಷಗಳ ಮುಸ್ಲಿಂ ಮುಖಂಡರು ಭಾಗವಹಿಸಿರುವುದು ವಿಶೇಷವಾಗಿತ್ತು.

ಹಕ್ಕೊತ್ತಾಯ: “ಈಗ ನಮಗೆ ನ್ಯಾಯ ಸಿಗದಿದ್ದರೆ ಎಂದಿಗೂ ಸಿಗಲಾರದು. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ವ್ಯಾಪ್ತಿಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಜಾಗೃತಿ ಮೂಡಿಸಬೇಕು,” ಎಂದು ಜಬ್ಬಾರ್ ಕರೆ ನೀಡಿದರು.

ಭಾಗವಹಿಸಿದ್ದ ಪ್ರಮುಖರು:

ಸಭೆಯಲ್ಲಿ ಕಾಂಗ್ರೆಸ್ ಆಕಾಂಕ್ಷಿಗಳಾದ ಸಾಧಿಕ್ ಪೈಲ್ವಾನ್, ಜೆಡಿಎಸ್‌ನ ಜೆ. ಅಮನುಲ್ಲಾ ಖಾನ್, ಬಿಜೆಪಿಯ ಸಿ. ನಾಸೀರ್ ಅಹ್ಮದ್, ಎಐಎಂಐಎಂ ಜಿಲ್ಲಾಧ್ಯಕ್ಷ ಮಹಮ್ಮದ್ ಅಲಿ ಶೋಯೇಬ್, ಎಎಪಿಯ ಆದಿಲ್ ಖಾನ್ ಸೇರಿದಂತೆ ಜಿಲ್ಲೆಯ ಬಹುತೇಕ ಮಸೀದಿಗಳ ಮುತುವಲ್ಲಿಗಳು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *